ಪ್ರಮುಖ ಸುದ್ದಿ
ATMಗೆ ಕನ್ನ ಹಾಕಿದ್ದ ಕಳ್ಳರು ಹಣವನ್ನೇ ಬಿಟ್ಟು ಓಡಿ ಹೋದರು, ಯಾಕೆ ಗೊತ್ತಾ?
ವಿಜಯಪುರ: ಎಟಿಎಂ ಕದಿಯಲು ಬಂದ ಕದೀಮರು ಪೊಲೀಸರ ಕಂಡು ಪರಾರಿಯಾದ ಘಟನೆ ನಗರದ ಬಾಗಲಕೋಟೆ ರಸ್ತೆಯಲ್ಲಿ ನಡೆದಿದೆ. ಐಸಿಐಸಿಐ
ಬ್ಯಾಂಕ್ ಗೆ ಸೇರಿದ ಎಟಿಎಂನಲ್ಲಿ ಬೆಳಗ್ಗೆ 4 ಗಂಟೆ ಸುಮಾರಿಗೆ ನಾಲ್ವರು ಕಳ್ಳರು ಎಟಿಎಂಗೆ ಕನ್ನ ಹಾಕಿದ್ದಾರೆ. ಗ್ಯಾಸ್ ಹಾಗೂ ಕಟರ್ ಗಳಿಂದ ಎಟಿಎಂ ಕಟ್ ಮಾಡುತ್ತಿದ್ದ ಸಮಯದಲ್ಲಿ ರಾತ್ರಿ ಗಸ್ತು ತಿರುಗುತ್ತಿದ್ದ ಗಾಂಧಿಚೌಕ್ ಠಾಣೆಯ ಎಎಸ್ ಐ ಪ್ರೇಮಾ ಕೂಚಬಾಳ ಅವರು ಆಗಮಿಸಿದ್ದನ್ನು ಕಂಡು ಕಳ್ಳರು ಎಸ್ಕೇಪ್ ಆಗಿದ್ದಾರೆ.
ಕೃತ್ಯಕ್ಕೆ ಬಳಸಿರುವ ವಸ್ತುಗಳನ್ನು ಬಿಟ್ಟು ಸ್ಥಳದಲ್ಲೇ ಬಿಟ್ಟು ಕಳ್ಳರು ಕಾರಿನಲ್ಲಿ ಎಸ್ಕೇಪ್ ಆಗಿದ್ದಾರೆ.
ಪೊಲೀಸರ ಕರ್ತವ್ಯ ಪ್ರಜ್ಞೆಯಿಂದ ಎಟಿಎಂ ಕಳ್ಳತನ ತಪ್ಪಿದ್ದು ಗಾಂಧಿಚೌಕ್ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ. ಆರೋಪಿಗಳ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.