ಕಾವ್ಯ
‘ಹೊಸ ವರುಷ’ ಮುದನೂರ ಬರೆದ ಕವಿತೆ ಸಂದೇಶ
ಹೊಸ ವರುಷ
ಬರುತಿಹುದು ವರ್ಷ ಹೊಸ ವರ್ಷ
ಕೆಟ್ಟಚಾಳಿಯಿಂದ ಆಚರಿಸದಿರಿ
ಹರುಷದಿ ಈ ವರುಷ.
ತೊಲಗಲಿ ಮನದ ವಿಕೃತ ಕತ್ತಲೆ
ಮೂಡಲಿ ಸುಕೃತದ ಸುಪ್ರಭಾತ
ಹರುಷದಿ ಈ ವರುಷ.
ದ್ವೇಷ ಕಳಿಯಲಿ ರೋಷವಳಿಯಲಿ
ಕೇಳಿ ಬರಲಿ ಸ್ನೇಹದುಂಬಿಯ
ಭಾವೈಕ್ಯ ಗೀತ.
ಶುದ್ಧ ಮನದೊಳು ಶಾಂತಿನೆಲಿಸಿ
ಚಿಮ್ಮುತಿರಲಿ ನೀತಿ ನಿಯಮದ
ನವನೀತ.
–ಮಲ್ಲಿಕಾರ್ಜುನ ಮುದನೂರ.