ಪ್ರಮುಖ ಸುದ್ದಿ
300ಕೆಜೆ ನಕಲಿ ಚಿನ್ನ ಪತ್ತೆ : ಐಎಮ್ಎ ವಂಚನೆ ಪ್ರಕರಣ ಬಗೆದಷ್ಟೂ ಆಳ
ಬೆಂಗಳೂರು: ಎಸ್ ಐ ಟಿ ಅಧಿಕಾರಿಗಳು ಮಿಂಚಿನ ದಾಳಿ ನಡೆಸಿದ್ದು ಐಎಂಎ ವಂಚನೆ ಪ್ರಕರಣದ ಆರೋಪಿ ಮನ್ಸೂರ್ ಅಲಿಖಾನ್ ಗೆ ಸೇರಿದ ಶಾಂತಿನಗರದ ಕಟ್ಟಡದಲ್ಲಿ 300 ಕೆಜಿ ನಕಲಿ ಚಿನ್ನದ ಬಿಸ್ಕತ್ ಗಳು ಪತ್ತೆ ಆಗಿವೆ. ಮಾಜಿ ಸಚಿವ, ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಅವರಿಗೆ ಸೇರಿದ್ದ ಕಟ್ಟಡವನ್ನು ಈ ಹಿಂದೆ ಐಎಂಎ ವಂಚನೆ ಪ್ರಕರಣದ ಆರೋಪಿ ಮನ್ಸೂರ್ ಆಲಿಖಾನ್ ಪಡೆದಿದ್ದರು. ಅದೇ ಕಟ್ಟಡದಲ್ಲಿ 300ಕೆಜಿಯಷ್ಟು ನಕಲಿ ಚಿನ್ನ ಸಿಕ್ಕಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.