
ಅಂಬೇಡ್ಕರ್ ಶಕ್ತಿ ನಿರೂಪಿಸಿದ ಮಕ್ಕಳ ಸಂಭ್ರಮ
Children’s excitement as they witness Ambedkar’s powerful narrative
ವಿನಯವಾಣಿ
ಶಹಾಪುರಃ ನಗರದ ಹಳಿಸಗರದಲ್ಲಿ ಮಂಗಳವಾರ ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್ ಜಯಂತ್ಯುತ್ಸವ ಹಿನ್ನೆಲೆ, ಅವರ ಭಾವಚಿತ್ರಕ್ಕೆ ಮಕ್ಕಳು ಭಕ್ತಿ, ಪ್ರೀತಿ ಸಲುಗೆಯಿಂದ ಪೂಜಿಸಿ, ಕಾಯಿ ಕರ್ಪೂರ ಸಮರ್ಪಿಸಿ ಖುಷಿ ಪಟ್ಟರು.
ಅಲ್ಲದೆ ಇದೇ ಸಂದರ್ಭದಲ್ಲಿ ಬಾಳೆಹಣ್ಣು, ಸೀರಾ ವಿತರಣೆ ಮಾಡುವ ಮೂಲಕ ಮಕ್ಕಳು, ಡಾ.ಅಂಬೇಡ್ಕರ್ ಓರ್ವ ವ್ಯಕ್ತಿ ಅಲ್ಲ ಅದೊಂದು ಅಗಾಧ ಶಕ್ತಿ ಎಂಬುದಕ್ಕೆ ಈ ಮಕ್ಕಳು ಆಚರಿಸಿದ ಅತ್ಯಂತ ಸಲುಗೆಯ, ಸರಳತೆಯ ಭಕ್ತಿದಾಯಕ ಜಯಂತಿ ಆಚರಣೆಯೇ ಸಾಕ್ಷೀಕರಿಸುತ್ತದೆ. ಮಕ್ಕಳ ಖುಷಿಗೆ ಪಾರವೇ ಇಲ್ಲ. ಮಕ್ಕಳ ಆಯೋಜತ್ವಕ್ಕೆ ಇಲ್ಲಿನ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಸಾಂಸ್ಕೃತಿಕ ಮತ್ತು ಗ್ರಾಮೀಣ ಅಭಿವೃದ್ಧಿ ಶಿಕ್ಷಣ ಸಂಸ್ಥೆ ಆತಿಥ್ಯವಹಿಸಿ ಮಕ್ಕಳಿಂದ ಮಹಾತ್ಮನ ಜನ್ಮಾದಿನಾಚರಣೆಗೆ ಹೊಸಮೆರಗೂ ತಂದಿರುವದು ಉತ್ತಮ ಬೆಳವಣಿಗೆ.
ಮಕ್ಕಳಿಗೆ ಬಾಲ್ಯದಿಂದಲೇ ಶಿಕ್ಷಣ ಜೊತೆಗೆ ಸಂಸ್ಕಾರ ಕಲಿಸುವದು ಬಹುಮುಖ್ಯವಿದೆ. ಸಂತರ, ಮಹಾತ್ಮರ ಚರಿತ್ರೆ ಜೊತೆಗೆ ಅವರ ಜನ್ಮಾದಿನಾಚರಣೆ ಮಕ್ಕಳಿಂದಲೇ ಮಕ್ಕಳನ್ನು ಕರೆದುಕೊಂಡು ಆಚರಿಸುವದರಿಂದ ಅವರ ತಲೆಯಲ್ಲಿ ಅದು ಅಚ್ಚೊತ್ತಿದ್ದಂತೆ ಆಗಲಿದೆ. ಮಹಾನ್ ನಾಯಕರ ಬದುಕು ಮಾದರಿಯಾಗಿಟ್ಟುಕೊಂಡು ಮಕ್ಕಳು ತಮ್ಮ ಬದುಕನ್ನು ರೂಪಿಸಿಕೊಳ್ಳಲು ಅನುಕೂಲವಾಗಲಿದೆ.
– ಶೈಲಾ ಪ್ರದೀಪ ಅಣಬಿ. ಅಧ್ಯಕ್ಷರು, ಸಿದ್ಧೇಶ್ವರ ಸ್ವಾಮೀಜಿ ಗ್ರಾಮೀಣಾಭಿವೃದ್ಧಿ ಮತ್ತು ಶಿಕ್ಷಣ ಸಂಸ್ಥೆ ಶಹಾಪುರ.
ಕಾರ್ಯಕ್ರಮದಲ್ಲಿ ಗಗನ ಅಣಬಿ, ಸೌಜನ್ಯ ಅಣಬಿ, ಅಯ್ಯಪ್ಪ ನಾಟೇಕಾರ, ನಿಖಿಲ್ ದೊಡ್ಮನಿ, ಐರ ಕಟ್ಟಿಮನಿ, ರಾಮು ನಗನೂರ, ಆಂಜನೇಯ ದೊಡ್ಮನಿ, ಸಂದೀಪ್ ದೊಡ್ಮನಿ, ಮಂಜುನಾಥ್ ಕಟ್ಟಿಮನಿ, ಸಾಬು ಕಟ್ಟಿಮನಿ ಸೇರಿದಂತೆ ಇತರರಿದ್ದರು.
– ಮಲ್ಲಿಕಾರ್ಜುನ ಮುದ್ನೂರ




