ಪ್ರಮುಖ ಸುದ್ದಿ

ಆನೆಕಾಲು ರೋಗ ತಡೆಗೆ ಸರ್ವರ ಸಹಭಾಗಿತ್ವ ಅಗತ್ಯ-ಕಾಂಬ್ಳೆ

ಆನೆಕಾಲು ರೋಗ ತಡೆಗೆ ಸರ್ವರ ಸಹಭಾಗಿತ್ವ ಅಗತ್ಯ-ಕಾಂಬ್ಳೆ

ಶಹಾಪುರ: ಭಾರತ ರೋಗಮುಕ್ತ ರಾಷ್ಟ್ರವಾಗಬೇಕೆಂದು ಕೇಂದ್ರ-ರಾಜ್ಯ ಸರ್ಕಾರಗಳು ಮುಂಜಾಗೃತವಾಗಿ ಹಲವು ಯೋಜನೆಗಳನ್ನು ರೂಪಿಸಿವೆ. ಅದರಂತೆ ಆರೋಗ್ಯ ಇಲಾಖೆ ಯೋಜನಾ ಅನುಷ್ಠಾನಕ್ಕೆ ಶ್ರಮಿಸುತ್ತಿದೆ. ಆನೆಕಾಲು ತಡೆಗೆ ಸರ್ವರ ಸಹಭಾಗಿತ್ವ ಅಗತ್ಯವಿದೆ ಎಂದು ಹಿರಿಯ ಆರೋಗ್ಯ ಸಹಾಯಕ ಮಲ್ಲಪ್ಪ ಕಾಂಬ್ಳೆ ತಿಳಿಸಿದರು.

ನಗರದ ಅಂಜುಮನ್ ಹೈಯರ್ ಉರ್ದು ಶಾಲೆಯಲ್ಲಿ ಆನೆಕಾಲು ರೋಗ ನಿರ್ಮೂಲನೆಯ ಮಾತ್ರೆ ಸೇವನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಆರೋಗ್ಯ ಇಲಾಖೆಯ ವಿತರಿಸುವ ಮಾತ್ರೆಗಳನ್ನು ಎಲ್ಲರೂ ಸೇವಿಸಬೇಕು. ಅದರಲ್ಲಿಯೂ ಆನೆಕಾಲು ರೋಗ ಹರಡದಂತೆ ತಾಲೂಕಿನ ಪ್ರತಿಯೊಂದು ಶಾಲೆ-ಕಾಲೇಜುಗಳಲ್ಲಿ ಔಷಧಿ ವಿತರಿಸುತ್ತಿದ್ದು ಪ್ರತಿಯೊಬ್ಬ ವಿದ್ಯಾರ್ಥಿ ಮಾತ್ರೆಗಳನ್ನು ಸೇವಿಸಬೇಕು. ಆ ಮೂಲ ಆರೋಗ್ಯ ಕಾಳಜಿ ಜೊತೆಗೆ ಸರ್ಕಾರದ ಆರೋಗ್ಯ ಇಲಾಖೆ ಮಹತ್ವಕಾಂಕ್ಷಿ ಯೋಜನೆಗೆ ಸ್ಪಂದಿಸಬೇಕು ಎಂದರು.

ನಗರದ ಮನೆ ಮನೆ ಮತ್ತು ಶಾಲಾ ಕಾಲೇಜಿಗೆ ಆರೋಗ್ಯ ಇಲಾಖೆ ಸಿಬ್ಬಂದಿ ಆನೆಕಾಲು ಮಾಥ್ರೆ ವಿತರಣೆಗೆ ಬರಲಿದ್ದಾರೆ. ನಾಗರಿಕರು ಮಾತ್ರೆಗಳನ್ನು ಸೇವಿಸುವ ಮೂಲಕ ಆನೆಕಾಲು ಮುಕ್ತ ನಗರಕ್ಕಾಗಿ ಪ್ರೋತ್ಸಾಹಿಸಬೇಕು ಎಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಶಾಲೆ ಮುಖ್ಯಗುರು ರಾಯಿಸ್ ಫಾತಿಮಾ, ಕಿ.ಆ.ಸಹಾಯಕಿ.ಸುಚಿತ್ರಾ, ರೇಷ್ಮಾ ಬೇಗಂ, ಡಾ.ವಿ.ಎಂ.ಪಾಟೀಲ, ವೆಂಕಮ್ಮ ಸೇರಿದಂತೆ ಅನೇಕರು ಇದ್ದರು.

Related Articles

Leave a Reply

Your email address will not be published. Required fields are marked *

Back to top button