ಪ್ರಮುಖ ಸುದ್ದಿ

ಸಿದ್ಧಗಂಗಾಶ್ರೀಗಳಿಗೆ ‘ಭಾರತ ರತ್ನ’ ಆಮಿಷಃ ಮಾತೆ ಮಹಾದೇವಿ ಆರೋಪ

ಸಿದ್ಧಗಂಗಾ ಶ್ರೀಗಳಿಗೆ ನೆನಪಿನ ಶಕ್ತಿ ಕಡಿಮೆ: ಮಾತೆ ಮಹಾದೇವಿ

ಬಾಗಲಕೋಟಃ ಸಿದ್ಧಗಂಗಾ ಶ್ರೀಗಳು ಸಚಿವ ಎಂ.ಬಿ.ಪಾಟೀಲರ ಮುಂದೆ ಹೇಳಿರುವ ಮಾತು ನಿಜವೇ ಆಗಿದೆ.   ನಂತರ ಕೆಲವರು ‘ಭಾರತ ರತ್ನ’ ಪ್ರಶಸ್ತಿ ನೀಡುವ ಆಮಿಷವನ್ನು ವೊಡ್ಡಿದ ಕಾರಣ ಶ್ರೀಗಳು ಮಾತು ಬದಲಾಯಿಸಿದ್ದಾರೆ ಎಂದು ಮಾತೆ ಮಹಾದೇವಿ ಹೇಳಿಕೆ ನೀಡಿದ್ದಾರೆ.

ಬಾಗಲಕೋಟ ನಗರದಲ್ಲಿ  ಸುದ್ದಿಗೋಷ್ಠಿ ನಡೆಸಿದ ಮಾತೆ ಮಹಾದೇವಿ ಅವರು ಸಿದ್ಧಗಂಗಾ ಶ್ರೀಗಳಿಗೆ ವಯಸ್ಸಾಗಿದೆ. ಅವರಿಗೆ ನೆನಪಿನ ಶಕ್ತಿ ಕಡಿಮೆಯಾಗಿದೆ. ಸಚಿವ ಪಾಟೀಲರ ಮುಂದೆ ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಬೆಂಬಲಿಸುವ ಮಾತನಾಡಿದ್ದಾರೆ. ನಂತರ ಶ್ರೀಮಠಕ್ಕೆ ಭೇಟಿ ನೀಡಿದ ಕೆಲವರ ಮಾತು ಕೇಳಿ ಸಚಿವ ಪಾಟೀಲ್ ತಮ್ಮ ಹೇಳಿಕೆ ತಿರುಚಿದ್ದಾರೆಂದು  ಹೇಳಿಕೆ ನೀಡಿರುವ ಎರಡು ಪತ್ರಗಳನ್ನು ಪತ್ರಿಕಾ ಪ್ರಕಟಣೆಗೆ ನೀಡಿದ್ದಾರೆ ಎಂದು ತಿಳಿಸಿದರು.

ಅಲ್ಲದೆ ಸಿದ್ಧಗಂಗಾ ಶ್ರೀಗಳಿಗೆ ಭಾರತ ರತ್ನ ಪ್ರಶಸ್ತಿ ಆಮಿಷವೊಡ್ಡಿದ ಕುರಿತು ಶೀಘ್ರದಲ್ಲಿ ಖಚಿತ ಮಾಹಿತಿಯನ್ನು ಸಾಬೀತು ಪಡೆಸುತ್ತೇನೆ ಎಂದು ಅವರು ಸ್ಪಷ್ಟ ಪಡಿಸಿದರು. ಅಲ್ಲದೆ ಮಾಜಿ ಸಿಎಂ ಬಿ.ಎಸ್ . ಯಡಿಯೂರಪ್ಪ ಮತ್ತು ಮಾಜಿ ಸಚಿವ ಸೋಮಣ್ಣ ಅವರು ವಯಸ್ಸಾದ ಶ್ರೀಗಳಿಂದ ಉಲ್ಟಾ ಹೇಳಿಕೆ ಕೊಡಿಸುವ ಮೂಲಕ ಸ್ವಾಮಿಗಳನ್ನು ದುರಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.

ನಡೆದಾಡುವ ದೇವರ ಬಗ್ಗೆ ವಿವಾದಾತ್ಮಕ ಹೇಳಿಕೆಗೆ ಆಕ್ರೋಶ

ನಡೆದಾಡುವ ದೇವರೆಂದೆ ಭಾವಿಸಿರುವ ನಾಡಿನ ಅಸಂಖ್ಯಾತ ಭಕ್ತರ ಆರಾಧ್ಯರಾದ ಸಿದ್ಧಗಂಗಾಶ್ರೀಗಳ ವಿರುದ್ಧ ಹೇಳಿಕೆ ನೀಡಿರುವ ಮಾತೇ ಮಹಾದೇವಿಯವರ ವಿವಾದಾತ್ಮಕ ಹೇಳಿಕೆಗೆ ಆಕ್ರೋಶ ವ್ಯಕ್ತವಾಗಿದೆ. ಶ್ರೀಗಳು ಭಾರತ ರತ್ನ ಪ್ರಶಸ್ತಿಯ ಆಮಿಷಕ್ಕೆ ಒಳಗಾಗಿದ್ದಾರೆ ಎಂದು ಮಾತೆ ಮಹಾದೇವಿ ಅವರು ಗುರುತರ ಆರೋಪ ಮಾಡಿರುವುದು ವಿವಾದಕ್ಕೀಡಾಗಿದೆ.

Related Articles

One Comment

Leave a Reply

Your email address will not be published. Required fields are marked *

Back to top button