ವಿನಯ ವಿಶೇಷ
ಪಿಯು ಕಾಲೇಜು ಯುವಕನಿಗೆ ಚಾಕು ಇರಿತ ಸಾವು
ಪಿಯು ಕಾಲೇಜು ಯುವಕನಿಗೆ ಚಾಕು ಇರಿತ ಸಾವು
ಯಾದಗಿರಿಃ ಪಿಯುಸಿ ಪ್ರಥಮ ವರ್ಷದ ಕಾಲೇಜು ಯುವಕನೋರ್ವನಿಗೆ ಇನ್ನೊಬ್ಬ ಕಾಲೇಜು ಯುವಕನೇ ಚಾಕು ಇರಿದು ಕೊಲೆ ಮಾಡಿದ ಘಟನೆ ಪಟ್ಟಣದ ಮುಖ್ಯ ರಸ್ತೆ ಮದ್ಯದಲ್ಲಿ ಇಂದು (ಫೆ.22) ಬೆಳಗ್ಗೆ 10 ಗಂಟೆಗೆ ನಡೆದಿದೆ.
ಬೋರಬಂಡಾ ಗ್ರಾಮದ ಮೋಹನ್ ಪಿಯು ಪ್ರಥಮ ವರ್ಷದ ವಿದ್ಯಾರ್ಥಿಯೇ ಚಾಕು ಇರಿತಕ್ಕೊಳಪಟ್ಟು ಮೃತಪಟ್ಟಿದ್ದಾನೆ.
ನಗರದ ಹರಿಜನವಾಡದ ಮಹಿಪಾಲ್ ಭೀಮಶಪ್ಪ ಎಂಬ ಯುವಕನೇ ಚಾಕು ಇರಿದು ಕೊಲೆಗೈದಿದ್ದಾನೆ ಎನ್ನಲಾಗಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಘಟನೆ ಕುರಿತು ಗುರುಮಠಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೊಲೆಗೆ ಸೂಕ್ತವಾದ ಕಾರಣ ತಿಳಿದು ಬಂದಿಲ್ಲ. ಪೊಲೀಸ್ ತನಿಖೆ ನಂತರವೇ ಸತ್ಯಾಂಶ ಹೊರಬರಲಿದೆ ಎನ್ನಲಾಗಿದೆ.