ಪ್ರಮುಖ ಸುದ್ದಿ

ಪೇಜಾವರಶ್ರೀಗಳು ಸರ್ವಪಕ್ಷ ಸರ್ಕಾರ ಆಡಳಿತ ನಡೆಸಲಿ ಅಂದಿದ್ದೇಕೆ?

ತುಮಕೂರು : ಈ ಹಿಂದೆ ಪರಸ್ಪರ ಕೆಸರೆರಚಾಟ ನಡೆಸಿದ್ದ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳು ಸಮ್ಮಿಶ್ರ ಸರ್ಕಾರ ರಚಿಸಿವೆ. ಸರ್ಕಾರ ರಚನೆ ಬಳಿಕ ಸಚಿವ ಸಂಪುಟ ರಚನೆಗಾಗಿ ಭಿನ್ನಮತ ಶುರುವಾಗಿದೆ. ಮಾಜಿ ಸಚಿವ ಎಂ.ಬಿ.ಪಾಟೀಲ್ ಮತ್ತು ಗುಂಪು ಏನೆಲ್ಲಾ ಮಾಡುತ್ತಿದೆ ಎಂಬುದು ಎಲ್ಲರಿಗೂ ಗೊತ್ತು. ಹೀಗಾಗಿ, ಅತಂತ್ರ ಸೃಷ್ಠಿಯಾದಾಗ ಸರ್ವಪಕ್ಷ ಸರ್ಕಾರ ರಚಿಸಬೇಕು ಎಂದು ಉಡುಪಿ ಮಠದ ಪೇಜಾವರಶ್ರೀ ಹೇಳಿದ್ದಾರೆ.

ತುಮಕೂರಿನಲ್ಲಿ ಮಾದ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು ಎರಡು ಪಕ್ಷಕ್ಕಿಂದ ಸರ್ವಪಕ್ಷ ಸರ್ಕಾರ ರಚಿಸುವು ಒಳಿತು. ಸರ್ವಪಕ್ಷ ಸರ್ಕಾರ ರಚನೆಯಾದರೆ ಕುದುರೆ ವ್ಯಾಪಾರ, ರೆಸಾರ್ಟ್ ರಾಜಕಾರಣ ನಡೆಯೋದಿಲ್ಲ. ಯುರೋಪ್ ಮತ್ತು ಇಂಗ್ಲೆಂಡ್ ನಲ್ಲಿ ಸರ್ವಪಕ್ಷ ಸರ್ಕಾರ ರಚನೆಯಾದ ಉದಾಹರಣೆ ಇದೆ. ಹೀಗಾಗಿ, ಯಾವುದೇ ಪಕ್ಷಕ್ಕೆ ಬಹುಮತ ಬರದಿದ್ದಾಗ ಸರ್ವಪಕ್ಷ ಸರ್ಕಾರ ರಚನೆ ಆಗುವುದು ಒಳ್ಳೆಯದು ಎಂದಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button