ಪ್ರಮುಖ ಸುದ್ದಿ

SSLC ಪರೀಕ್ಷೆಯಿಂದ ಸರ್ಕಾರ ಹಿಂದೆ ಸರಿಯಲಿ- HDK ಟ್ವಿಟ್

ಎಸ್ಸೆಸ್ಸೆಲ್ಸಿ ಪರೀಕ್ಷೆ‌ ನಡೆಸುವ ನಿರ್ಧಾರ ಕೈ ಬಿಡಿ-HDK

ವಿವಿ ಡೆಸ್ಕ್ಃ ಕೊರೊನಾ ಎಲ್ಲಡೆ ವ್ಯಾಪಕವಾಗಿ ಹರಡುತ್ತಿದ್ದು,‌‌ ಇಂತಹ ಸಮಯದಲ್ಲಿ ಇದೇ ಜೂನ್ 25 ರಂದು ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸಲು ಮುಂದಾದ‌ ರಾಜ್ಯ ಸರ್ಕಾರ ವಿದ್ಯಾರ್ಥಿಗಳ‌ ಹಿತ ದೃಷ್ಟಿಯಿಂದ ತನ್ನ ನಿರ್ಧಾರದಿಂದ ಹಿಂದೆ ಸರಿಯಬೇಕೆಂದು ಮಾಜಿ ಸಿಎಂ‌‌‌ ಎಚ್.ಡಿ.ಕುಮಾರಸ್ವಾಮಿ ಟ್ವಿಟ್‌ ಮಾಡುವ ಮೂಲಕ ಆಗ್ರಹಿಸಿದ್ದಾರೆ.

ಸಾಮುದಾಯಿಕವಾಗಿ‌ ಕೊರೊನಾ ಸೋಂಕು ಹಬ್ಬಿದ್ದು, ಸಾವಿನ ನಗಾರಿ ಬಾರಿಸುತ್ತಿರುವ ಆತಂಕದ ಮಧ್ಯ ಸುಮಾರು ಎಂಟು ಲಕ್ಷ‌ ವಿದ್ಯಾರ್ಥಿಗಳು ಮತ್ತು ಪೋಷಕರು ಹಾಗೂ ಪರೀಕ್ಷಾ ನಡೆಸುವ ಸಿಬ್ಬಂದಿ ಸೇರಿದಂತೆ 24 ಲಕ್ಷ‌ ಮಂದಿ ಜೀವ ಮತ್ತು ಭವಿಷ್ಯದೊಂದಿಗೆ ಆಟವಾಡುತ್ತಿದೆ ಎಂದು ಆರೋಪಿಸಿದ್ದಾರೆ.

ಅಲ್ಲದೆ ನೆರೆಯ ತೆಲಂಗಾಣ‌ ರಾಜ್ಯದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ‌ ರದ್ದುಗೊಳಿಸಿ ಎಲ್ಲಾ ವಿದ್ಯಾರ್ಥಿಗಳನ್ನು ಉತ್ತೀರ್ಣ ಗೊಳಿಸಲಾಗಿದೆ. ಅದೇ ಮಾದರಿಯಲ್ಲಿ ಇಲ್ಲಿನ ಸರ್ಕಾರ ಕ್ರಮಕೈಗೊಳ್ಳಬೇಕು ಎಂದು ಸಲಹೆ‌ ನೀಡಿದರು.

ಅಲ್ಲದೆ ಆದಾಗ್ಯು ಪರೀಕ್ಷೆ ನಡೆಸಿದ್ದಲ್ಲಿ ಕೊರೊನಾ ರೋಗಕ್ಕೆ‌ ವಿಧ್ಯಾರ್ಥಿ‌ಅಥವಾ ಪಾಲಕ,‌ ಪರೀಕ್ಷಾ ಸಿಬ್ಬಂದಿ ತುತ್ತಾದಲ್ಲಿ ಸರ್ಕಾರವೇ ನೇರ ಹೊಣೆಯಾಗಲಿದೆ ಎಂದು ಅವರು ಎಚ್ಚರಿಸಿದರು.

Related Articles

Leave a Reply

Your email address will not be published. Required fields are marked *

Back to top button