ಪ್ರಮುಖ ಸುದ್ದಿ
ರಾಗಾ ರಾಮನಾಮ ಜಪ.!
ರಾಗಾ ಮನದಲ್ಲಿ ರಾಮನಾಮ ಜಪ
ನವದೆಹಲಿಃ ಅಯೋಧ್ಯಯಲ್ಲಿ ಇಂದು ನಡೆದ ಶ್ರೀರಾಮ ಮಂದಿರ ನಿರ್ಮಾಣ ಶಿಲಾನ್ಯಾಸ ಹಿನ್ನೆಲೆ ಕಾಂಗ್ರೆಸ್ನ ಮಾಜಿ ರಾಷ್ಟ್ರಧ್ಯಕ್ಷ ರಾಹುಲ್ ಗಾಂಧಿ “ರಾಮ ಎಂದರೆ ಪ್ರೀತಿ, ಸಹಾನುಭೂತಿ ಮತ್ತು ನ್ಯಾಯದ ಸಾಕಾರ ರೂಪ, ಆತನೋರ್ವ ಪುರುಷೋತ್ತಮ ಎಂದು ತಮ್ಮ ಟ್ವಿಟ್ರ ಅಕೌಂಟ್ನಲ್ಲಿ ಬರೆದು ಶ್ರೀರಾಮನನ್ನು ಶ್ಲಾಘಿಸಿದ್ದಾರೆ.
ಕೊರೊನಾ ಸಂದರ್ಭ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಕುರಿತು ಕಾಂಗ್ರೆಸ್ ನಿಲುವೇನು.? ಎಂಬ ಪ್ರಶ್ನೆ ಇತ್ತೀಚೆಗೆ ರಾಷ್ಟ್ರಮಟ್ಟದಲ್ಲಿ ಸಾಕಷ್ಟು ಕುತುಹಲ ಕೆರಳಿಸಿತ್ತು. ಆದರೆ ಈವರೆಗೆ ಮೌನವಹಿಸಿದ್ದ ಕಾಂಗ್ರೆಸ್ ಈಗ ಮೌನ ಮುರಿದಂತೆ ಕಾಣುತ್ತಿದೆ. ಅಲ್ಲದೆ ನಿನ್ನೆಯಷ್ಟೆ ಪ್ರಿಯಾಂಕಾ ಗಾಂಧಿ(ವಾದ್ರಾ) ಅಯೋಧ್ಯೆಯ ರಾಮ ಮಂದಿರ ಕಟ್ಟಡದ ಭೂಮಿ ಪೂಜೆ ಕುರಿತು ರಾಷ್ಟ್ರೀಯ ಏಕತೆ, ಭ್ರಾತೃತ್ವ ಮತ್ತು ಸಾಂಸ್ಕøತಿಕ ಪ್ರತೀಕ ಎಂದು ಮೆಚ್ಚುಗೆ ವ್ಯಕ್ತಪಡಿಸಿ ಟ್ವಿಟ್ ಮಾಡಿದ್ದರು.