ಗಂಜಿ ಕೇಂದ್ರಗಳಿಗೆ ಜಿಲ್ಲಾ ನ್ಯಾಯಧೀಶರ ಭೇಟಿ
ಯಾದಗಿರಿಃ ಕೃಷ್ಣಾ ಪ್ರವಾಹ ಗಂಜಿ ಕೇಂದ್ರ ಸಿದ್ಧತೆ
ಯಾದಗಿರಿ, ಶಹಾಪುರಃ ಕೃಷ್ಣೆ ಪ್ರವಾಹದಿಂದ ತತ್ತರಿಸಿ ಹೋದ ಗ್ರಾಮಗಳಿಗೆ ಭೇಟಿ ನೀಡಿದ ಜಿಲ್ಲಾ ನ್ಯಾಯಾಲಯದ ನ್ಯಾಯಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯದರ್ಶಿಯೂ ಆದ ಅರ್ಜುನ ಪ್ರಕಾಶ ಬನಸೂಡೆ ತಾಲೂಕಿನ ಕೊಳ್ಳೂರ(ಎಂ) ಹಾಗೂ ಗೌಡೂರ ಗ್ರಾಮದ ಗಂಜಿ ಕೇಂದ್ರಗಳಿಗೆ ಭೇಟಿ ನೀಡಿ ತಹಶೀಲ್ದಾರರ ಮೂಲಕ ಸಮಗ್ರ ಮಾಹಿತಿ ಪಡೆದುಕೊಂಡರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮುನ್ನೆಚ್ಚರಿಕೆ ಕ್ರಮವಾಗಿ ಪ್ರವಾಹದಿಂದ ನಲುಗಿದ ಜನರ ರಕ್ಷಣೆ ಸೇರಿದಂತೆ ಇತರೆ ಅಗತ್ಯ ಕ್ರಮಗಳನ್ನು ಸಮರ್ಪಕವಾಗಿ ಪೂರೈಸಲು ಕ್ರಮಕೈಗೊಳ್ಳಬೇಕು ಎಂದು ತಹಶೀಲ್ದಾರ ಸಂಗಮೇಶ ಜಿಡಗೆ ಅವರಿಗೆ ನಿರ್ದೇಶನ ನೀಡಿದರು.
ಅಲ್ಲದೆ ಪ್ರವಾಹದಿಂದ ಬೆಳೆ ನಷ್ಟ ಕುರಿತು, ಮುಳುಗಡೆಯಿಂದ ಹಾನಿಗೊಳಗಾದ ಮನೆ, ಹಟ್ಟಿ ಇತರೆ ಕುರಿತು ಸಮಗ್ರ ವರದಿ ಜಿಲ್ಲಾಡಳಿತಕ್ಕೆ ಸಲ್ಲಿಸುವ ಮೂಲಕ ಜನರ ಕಷ್ಟಗಳಿಗೆ ಸೂಕ್ತ ಸ್ಪಂಧನೆ ನೀಡಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ ಸಂಗಮೇಶ ಜಿಡಗೆ, ಕಂದಾಯ ಇಲಾಖೆ ಅಧಿಕಾರಿಗಳು ಜಿಲ್ಲಾ ನ್ಯಾಯಧೀಶರ ಅಧ್ಯಕ್ಷರು ಮತ್ತು ವಕೀಲರು ಇತರರು ಇದ್ದರು.