ಪ್ರಮುಖ ಸುದ್ದಿ

ಕುಡಿಯುವ ಬಾವಿ‌ ನೀರಿಗೆ ವಿಷ-ಆತಂಕಗೊಂಡ ಜನತೆ

 

ಯಾದಗಿರಿ: ಗ್ರಾಮಕ್ಕೆ ಸರಬರಾಜು ಆಗುತ್ತಿದ್ದ ಕುಡಿಯುವ ನೀರಿನ ಬಾವಿಯೊಳಗೆ ಕಿಡಿಗೇಡಿಗಳು ವಿಷ ಬೆರೆಸಿರುವ ಘಟನೆ ಜಿಲ್ಲೆಯ ಸುರಪುರ ತಾಲೂಕಿನ ಮುದನೂರ ಗ್ರಾಮದಲ್ಲಿ  ನಡೆದಿದೆ.

ಪೈಪ್​​​ಲೈನ್​​ ಮತ್ತು ವಾಲ್‌ ಮೂಲಕ ಕಿಡಿಗೇಡಿಗಳು ಬಾವಿಗೆ ವಿಷ ಬೆರೆಸಿದ್ದಾರೆ ಎನ್ನಲಾಗಿದೆ.

ಇದೆ ಬಾವಿಯಿಂದ ಹತ್ತಿರದ ಶಾಖಾಪೂರ, ತೆಗ್ಗೆಳ್ಳಿ ಇನ್ನಿತರ ಗ್ರಾಮಗಳಿಗೆ ನೀರು ಶುದ್ಧೀಕರಿಸಿ  ಸರಬರಾಜಾಗುತ್ತಿದ್ದ ಕುಡಿಯುವ ನೀರಿಗೆ ಕಿಡಿಗೇಡಿಗಳು ಭತ್ತದ ಬೆಳೆಗೆ ಸಿಂಪಡಿಸುವ (ಕೀಟನಾಶಕ) ಔಷಧಿಯನ್ನ ಬಾವಿಗೆ ಸುರಿದಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಗ್ರಾಮಸ್ಥರ ಮನೆಗಳ ನಲ್ಲಿಗಳಲ್ಲಿ ವಿಷಪೂರಿತ ನೀರು ಬರುತ್ತಿರುವದನ್ನು ಗಮನಿಸಿ ಗಾಬರಿಗೂಂಡ ಜನರು ನೀರಿನ ಬಾವಿ ಬಳಿ ಬಂದು ವಿಷ ಹಾಕಿರುವುದನ್ನು ಖಚಿತ ಪಡಿಸಿಕೊಂಡಿದ್ದಾರೆ ಎನ್ನಲಾಗಿದೆ.

ತಕ್ಷಣ ಗ್ರಾಮದಲ್ಲಿ ಡಂಗುರ ಸಾರಿ ನೀರನ್ನು ಯಾರೂ ಬಳಸಬೇಡಿ ಎಂದು ಹೇಳಿ ಮುಂದಾಗುವ ಅನಾಹುತ ತಪ್ಪಿಸಿದ್ದಾರೆ ಎನ್ನಲಾಗಿದೆ.

ವಿಷ ಹಾಕಿದವರು ಯಾರು ಎಂಬುದು ಇದುವರೆಗೂ ಖಚಿತವಾಗಿಲ್ಲ. ವಿಷ ಹಾಕಿದ ಕಿಡಿಗೇಡಿಗಳನ್ನು ಕೂಡಲೇ ಪತ್ತೆ ಮಾಡಿ ಕಠಿಣ ಶಿಕ್ಷೆ ಒದಗಿಸಬೇಕೆಂದು  ಶಾಖಾಪೂರ ಗ್ರಾಮಸ್ಥರು ಆಗ್ರಹಿಸಿ ಅಲ್ಲದೆ ಮುಂಜಾಗ್ರತಾ ಕ್ರಮಕ್ಕಾಗಿ ಕೆಂಬಾವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಮೂದನೂರು ಗ್ರಾಮ ಪಂಚಾಯತ್​​ ಪಿಡಿಓ ಮತ್ತು ಕೆಂಬಾವಿ ಪಿಎಸ್ಐ ಸ್ಥಳಕ್ಕಾಗಮಿಸಿ ನೀರನ್ನು ಪರೀಕ್ಷಿಸುವರೆಗೂ ನೀರನ್ನು ಬಳಸಬೇಡಿ ಎಂದು ಗ್ರಾಮಸ್ಥರಿಗೆ ತಿಳಿಸಿದ್ದಾರೆ.

ಜಿಪಂ‌ ಸಿಇಒ ಕವಿತಾ ಮನ್ನಿಕೇರಿ ಭೇಟಿ 

ಸುದ್ದಿ ತಿಳಿದ ತಕ್ಷಣ ಮುದನೂರ ಗ್ರಾಮಕ್ಕೆ ಜಿಪಂ ಸಿಇಓ ಕವಿತಾ ಮನ್ನಿಕೇರಿ  ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಅಲ್ಲದೆ ಗ್ರಾಮದ ಜನರಿಗೆ ಈ ನೀರು ಸೇವನೆ‌ ಮಾಡದಿರಲು ಸೂಚಿಸಿದರು. ಸ್ಥಳದಲ್ಲಿಸ್ದ ಪಿಡಿಓ ಇತರೆ ಅಧಕಕಾರಿಗಳಿಗೆ ಈ‌ ಕುರಿತು ಎಚ್ಚರಿಕೆವಹಿಸುವಂತೆ ಸೂಚಿಸಿದರು.

 

Related Articles

Leave a Reply

Your email address will not be published. Required fields are marked *

Back to top button