ಪ್ರಮುಖ ಸುದ್ದಿ
ಜಾತಿ ಲೆಕ್ಕಚಾರದಲ್ಲಿ ತೊಡಗಿದ್ದ ಸಿದ್ದು.! ವಿಡಿಯೋ ವೈರಲ್
ಒಕ್ಕಲಿಗರು ಕುಮಾರಸ್ವಾಮಿ ಜೊತೆಗಿಲ್ಲ, ಲಿಂಗಾಯತರು ಯಡಿಯೂರಪ್ಪ ಪರವಿಲ್ಲ
ಕಾವೇರಿ ನಿವಾಸಃ ಬೆಂಗಳೂರಿನ ಕಾವೇರಿ ನಿವಾಸದಲ್ಲಿ ಆಪ್ತರ ಜೊತೆ ಮಾತುಕತೆ ನಡೆಸುತ್ತಿದ್ದ ವಿಪಕ್ಷ ನಾಯಕ ಸಿದ್ರಾಮಯ್ಯ, ಈ ವೇಳೆ ಜಾತಿ ಸಮೀಕರಣ ಕುರಿತು ಲೆಕ್ಕಚಾರ ನಡೆಸಿದ್ದಾರೆ ಎನ್ನಲಾಗಿದೆ. ಒಕ್ಕಲಿಗರು ಕುಮಾರಸ್ವಾಮಿ ಜೊತೆಗಿಲ್ಲ. ಇನ್ನೂ ಲಿಂಗಾಯತರು ಯಡಿಯೂರಪ್ಪನವರೊಂದಿಗೆ ಉಳಿದಿಲ್ಲ ವೆಂದು ಚರ್ಚೆ ವೇಳೆ ಮಾತನಾಡಿದ್ದಾರೆ.
ಮೈಸೂರ ಜಿಲ್ಲೆಯ ಹುಣಸೂರಿನ ಮಂಜುನಾಥ ಮತ್ತು ವೆಂಕಟೇಶ ಅವರೊಂದಿಗೆ ಸಿದ್ರಾಮಯ್ಯ ಜಾತಿ ಲೆಕ್ಕಚಾರ ನಡೆಸುತ್ತಿರುವ ವಿಡಿಯೋ ವೈರಲ್ ಆಗಿದೆಯಂತೆ. ಜಾತ್ಯಾತೀತವಾಗಿ ಧರ್ಮಾತೀತವಾಗಿ ರಾಜಕೀಯ ನಡೆ ಅನುಸರಿಸುತ್ತೇವೆ ಎಂದು ಹೊರಗಡೆ ಫೋಸ್ ಕೊಡುವ ನಾಯಕರ ನಿಜ ಬಣ್ಣ ಬಯಲಾಗಿದೆ. ಇಷ್ಟು ದಿನ ೊಳಗೊಳಗೆ ಲೆಕ್ಕಚಾರ ನಡೆಯುತ್ತಿತ್ತು. ಈಗ ಅದು ಬಹಿರಂಗವಾಗಿದೆ.