ಪ್ರಮುಖ ಸುದ್ದಿ
ಬಹುರಾಷ್ಟ್ರೀಯ ಕಂಪನಿ ಒಮ್ಮೆ ಮೀಸೆ ತುರುಕಿಸಿದರೆ, ಮುಗೀತು ಕೃಷಿ ಮಾರುಕಟ್ಟೆ ನಾಶ- ಸಿದ್ರಾಮಯ್ಯ
ಬಹುರಾಷ್ಟ್ರೀಯ ಕಂಪನಿ ಒಮ್ಮೆ ಮೀಸೆ ತುರುಕಿಸಿದರೆ, ಮುಗೀತು ಕೃಷಿ ಮಾರುಕಟ್ಟೆ ನಾಶ- ಸಿದ್ರಾಮಯ್ಯ
ಬೆಂಗಳೂರಃ ಎಪಿಎಂಸಿ ಕಾಯ್ದೆ ತಿದ್ದುಪಡಿಗೊಳಿಸಿ ಬಹುರಾಷ್ಟ್ರೀಯ ಕಂಪನಿಗಳಿಗೆ ಅನುವು ಮಾಡಿಕೊಟ್ಟರೆ ಮುಗೀತು. ಒಮ್ಮೆ ಕಾರ್ಪೋರೆಟರ್ ಮೀಸೆ ತೂರಿಸಿದರೆ ಇಡಿ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಸ್ಥೆಯೇ ನಾಶವಾಗಲಿದೆ ಎಂದು ವಿಪಕ್ಷ ನಾಯಕ ಸಿದ್ರಾಮಯ್ಯ ಟ್ವಿಟ್ ಮೂಲಕ ಗುಡುಗಿದ್ದಾರೆ.
ಅಸಲಿಗೆ ಕೇಂದ್ರ ಸರ್ಕಾರ ಕಾಯ್ದೆ ತಿದ್ದುಪಡಿ ತರಲು ಹೊರಟಿರುವುದೇ ಪ್ರಜಾಪ್ರಭುತ್ವ ವಿರೋಧಿಯಾಗಿದೆ. ರೈತರಿಗೆ ನೆರವಾಗುವ ಸದುದ್ದೇಶ ಹೊಂದಿದ್ದರೆ ರೈತ ಪ್ರತಿನಿಧಿಗಳು, ಎಪಿಎಂಸಿ ಪದಾಧಿಕಾರಿಗಳು ಮತ್ತು ವರ್ತಕರ ಅಭಿಪ್ರಾಯ ಕಾಯ್ದೆಗೆ ತಿದ್ದುಪಡಿ ಗೊಳಿಸಬಹುದಿತ್ತು ಎಂದು ಅವರು ಪ್ರಶ್ನಿಸಿದ್ದಾರೆ. ಹೀಗಾಗಿ ರೈತ ಬಂಧುಗಳು ಎಚ್ಚರಗೊಳ್ಳಬೇಕು ಎಂದು ಟ್ವಿಟ್ ಮೂಲಕ ಕರೆ ನೀಡಿದ್ದಾರೆ.