ಪ್ರಮುಖ ಸುದ್ದಿ

ಗಡಿ‌ ಭಾಗದ‌ ಕನ್ನಡಿಗರಿಗೆ ತೊಂದರೆ ನೀಡಿದರೆ‌ ಸಹಿಸಲ್ಲ ಡಿಸಿಎಂ ಸವದಿ‌ ಎಚ್ಚರಿಕೆ

ಗಡಿ ಭಾಗದ‌ ಕನ್ನಡಿಗರಿಗೆ ತೊಂದರೆ ನೀಡಿದರೆ ಸಹಿಸಲ್ಲ – ಡಿಸಿಎಂ ಸವದಿ

ಬೆಂಗಳೂರಃ ರಾಜ್ಯದ ಗಡಿ ಭಾಗದಲ್ಲಿ ಮರಾಠಿಗರು, ಶಿವಸೇನೆ ಕಾರ್ಯಕರ್ತರ ಪುಂಡಾಟಿಕೆ ಸರಿಯಲ್ಲ, ಗಡಿ ಭಾಗದಲ್ಲಿ ಕನ್ನಡಿಗರಿಗೆ ತೊಂದರೆ ಕೊಟ್ಟರೆ ಸಹಿಸಲು ಸಾಧ್ಯವಿಲ್ಲ ಎಂದು ಡಿಸಿಎಂ ಲಕ್ಷ್ಮಣ ಸವದಿ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು,‌‌ ಗಡಿ‌ಭಾಗದಲ್ಲಿ ಮಹಾರಾಷ್ಟ್ರದ ‌ಶಿವಸೇನೆ ಕಾರ್ಯಕರ್ತರ ಪುಂಡಾಟಿಕೆ ಕುರಿತು ಈ ರೀತಿ ಪ್ರತಿಕ್ರಿಯೆ ನೀಡಿದರು.

ಅಲ್ಲದೆ ಯಾರು ತಪ್ಪು ಮಾಡಿದ್ದಾರೆ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಸಿದ ಅವರು, ಮಹಾರಾಷ್ಟ್ರ ‌ಸಿಎಂ‌ ಉದ್ಧವ್ ಠಾಕ್ರೆ ಗಡಿ ವಿಷಯ ಕೆದಕಿ‌ ಹೇಳಿಕೆ ನೀಡುವ ಮೂಲಕ ರಾಜಕೀಯ‌ ಖ್ಯಾತೆ‌ ತೆಗೆದಿದ್ದಾರೆ.‌ ಅವರ ಹೇಳಿಕೆ ಖಂಡನಾರ್ಹ ವಾಗಿದೆ.‌

ಮಹಾಜನ್ ವರದಿಯಂತೆ ಗಡಿ‌ಭಾಗದಲ್ಲಿ ನಡೆದು ಕೊಳ್ಳಲಾಗುತ್ತದೆ. ಸುಮ್ಮನೆ ಪ್ರಚೋದನೆ ನೀಡುವ ಹೇಳಿಕೆ ನೀಡುವದು ಸರಿಯಲ್ಲ. ಸಿಎಂ ಜೊತೆ ಚರ್ಚಿಸಿ ಮುಂದಿನ‌ ಕ್ರಮಕೈಗೊಳ್ಳುತ್ತೇವೆ ಎಂದರು.

Related Articles

Leave a Reply

Your email address will not be published. Required fields are marked *

Back to top button