ಅಂಕಣವಿನಯ ವಿಶೇಷ

ಕೊರೊನಾ ಬಗ್ಗೆ ಉಡಾಫೆ‌ ಬೇಡ ದಯವಿಟ್ಟು ನಿಯಮ ಪಾಲಿಸಿ.! ಇದನ್ನೊಮ್ಮೆ ಓದಿ

ನನ್ನೆಲ್ಲಾ ಸ್ನೇಹಿತರು ಹಾಗೂ ಹಿರಿಯರಲ್ಲಿ ವಿನಮ್ರ ಮನವಿ..
ದೂರದ ಚೀನಾ ದೇಶದಲ್ಲಿ ಹುಟ್ಟಿ ಜಗತ್ತಿನಾದ್ಯಂತ ತನ್ನ ವಿಷಜಾಲವನ್ನು ಹರಡಿರುವ ಕೊರೋನಾ ಹೆಮ್ಮಾರಿ ಇದೀಗ ನಮ್ಮ ಸುತ್ತಲಿನ ಪರಿಸರವನ್ನು ಕೂಡಾ ಆವರಿಸಿದೆ.ಸದ್ದಿಲ್ಲದೆ ನಮ್ಮಗಳ ಮನೆಯ ಒಬ್ಬೊಬ್ಬರನ್ನೇ ಬಲಿ ಪಡೆಯುತ್ತಲಿದೆ.

ಎಲ್ಲರಿಗೆ ಆ ಸಾವುಗಳು ಕೇವಲ ಒಂದು ದುರ್ಘಟನೆ ಮಾತ್ರ. ಓಂ ಶಾಂತಿ,ಭಾವಪೂರ್ಣ ಶ್ರದ್ಧಾಂಜಲಿ, RIP, ಆತ್ಮಕ್ಕೆ ಶಾಂತಿ ಸಿಗಲಿ,ತುಂಬಲಾರದ ನಷ್ಟ ಅಂತ ಸಾಮಾಜಿಕ ಜಾಲತಾಣದಲ್ಲಿ ಕಮೆಂಟ್, ಮೆಸೇಜ್ ಮಾಡಿ ಮರೆತುಬಿಡುತ್ತೇವೆ.

ಆದರೆ ಆ ಸದಸ್ಯನನ್ನು ಕಳೆದುಕೊಂಡ ಕುಟುಂಬದ ನೋವು ಮಾತ್ರ ಅಪಾರವಾದದ್ದು.. ಏನು ಮಾಡಿದರೂ, ಎಷ್ಟು ಬೆಲೆ ತೆತ್ತರೂ ಆ ಕುಟುಂಬಕ್ಕೆ ಆಸರೆಯಾಗಿರಬಹುದಾದ ವ್ಯಕ್ತಿ ಮರಳಿ ಬರಲು ಸಾಧ್ಯವಿಲ್ಲ..ನನಗೆ ಅತ್ಯಂತ ಸಮೀಪದಲ್ಲಿರುವ ಅನೇಕ ಕುಟುಂಬಗಳಲ್ಲಿ ಘಟಿಸಿದ ಸಾವುಗಳು,ಆಸ್ಪತ್ರೆಯ ಖರ್ಚುವೆಚ್ಚಗಳು ನಿಜಕ್ಕೂ ಜರ್ಝರಿತಗೊಳಿಸುವಂತಹವುಗಳು.

ಕುಟುಂಬದ ಅಕ್ಕನನ್ನು, ಅಣ್ಣನನ್ನು, ತಂಗಿ, ತಮ್ಮ, ಅಪ್ಪ, ಅಮ್ಮ ಅಜ್ಜ-ಅಜ್ಜಿಯರನ್ನು ಕಳೆದುಕೊಂಡು ಮರಗುವವರನ್ನು ಸಂತೈಸಲು ಶಬ್ದಗಳಿಲ್ಲ..ನಮ್ಮ ರಕ್ಷಣೆ ಸರಕಾರ ಮಾಡುವುದಿಲ್ಲ, ಮತ್ತ್ಯಾರೋ ಬಂದು ಖಂಡಿತವಾಗಿಯೂ ಮಾಡುವುದಿಲ್ಲ..ನಮ್ಮ ಎಚ್ಚರಿಕೆಯಲ್ಲಿ ನಾವು ಇರುವುದೇ ನಮ್ಮ ಪಾಲಿನ ರಕ್ಷಣೆಯ ದಾರಿ.

ಬಡವ, ಶ್ರೀಮಂತರೆನ್ನದೇ ಎಲ್ಲರನ್ನೂ ಕರೆದೊಯ್ಯುತ್ತಿರುವ ಕೊರೋನಾ ಭಗವಂತನ ದಯೆಯಿಂದ ಮತ್ತೆ ಯಾರ ಹತ್ತಿರವೂ ಸುಳಿಯದಿರಲಿ..ನಮ್ಮ ಬೇಜವಬ್ದಾರಿ,ನಿರ್ಲಕ್ಷದಿಂದ ನಾವೂ ಸೋಂಕು ಹಚ್ಚಿಕೊಂಡು, ನಮ್ಮ ಸುತ್ತಲಿನ ಪರಿಸರಕ್ಕೂ ಸೋಂಕು ತಗಲಿಸದೇ ಇರುವುದಕ್ಕೆ ಪ್ರಯತ್ನಿಸೋಣ..

ಇದು ಸಾಮಾನ್ಯ ವೈರಸ್, ಬಿಸಿನೀರು ಕುಡಿದರೆ ಹೋಗುತ್ತದೆ,ಆ ಕಷಾಯ ಕುಡಿದರೆ ಹೋಗುತ್ತದೆ, ಸರಕಾರ ದುಡ್ಡು ಮಾಡಲು ನಮಗೆ ಸುಮ್ಮನೆ ಭಯ ಬೀಳಿಸುತ್ತಿದೆ,ನನಗೆ ತುಂಬಾ ಶಕ್ತಿಯಿದೆ, ಅದರಿಂದ ಏನೂ ಆಗುವುದಿಲ್ಲ ಎಂಬ ಉಡಾಫೆ ಖಂಡಿತವಾಗಿಯೂ ಬೇಡ..

ನಿಮ್ಮ – ನಮ್ಮ ಅವಶ್ಯಕತೆ ನಮ್ಮನ್ನು ನಂಬಿದ ಕುಟುಂಬಕ್ಕೆ, ನಾವು ಬದುಕುತ್ತಿರುವ ಸಮಾಜಕ್ಕೆ ಖಂಡಿತವಾಗಿಯೂ ಇದೆ..ಯಾರೋ ನೋಡುತ್ತಾರೆ ಅಂತ ಬೇಡ ನಮ್ಮ ಹಾಗೂ ನಮ್ಮವರ ಸುರಕ್ಷತೆಗಾಗಿ ಕಡ್ಡಾಯವಾಗಿ ಮಾಸ್ಕ್ ಧರಿಸಿ,ಸಾಮಾಜಿಕ ಅಂತರವನ್ನು ದಯವಿಟ್ಟು ಕಾಪಾಡಿ..

ಯಾರು ಏನಾದರೂ ಭಾವಿಸಿಕೊಳ್ಳಲಿ ಆದಷ್ಟು ಅಧಿಕ ಜನ ಸೇರುವ ಸಭೆ-ಸಮಾರಂಭ, ಮುಂತಾದವುಗಳಿಂದ ದೂರವಿರಿ..ಆರೋಗ್ಯವಾಗಿ ಬದುಕಿದ್ದರೆ ಮುಂದೆ ಎಲ್ಲರನ್ನೂ ಭೇಟಿಯಾಗಬಹುದು, ಎಲ್ಲವನ್ನೂ ಅನುಭವಿಸಬಹುದು..ಎಲ್ಲವೂ ಹಾಗೂ ಎಲ್ಲರೂ ಇದ್ದು ಅನಾಥ ಹೆಣವಾಗುವ ಕರ್ಮ ಯಾರಿಗೂ ಬೇಡ..ನಮ್ಮವರೆನ್ನುವವರು ಕನಿಷ್ಠ ನಮ್ಮ ಶವದ ಹತ್ತಿರಕ್ಕೂ ಬರಲಾರರು..ದಯವಿಟ್ಟು ಎಚ್ಚರ ವಹಿಸಿ..ಆರೋಗ್ಯ ಕಾಪಾಡಿಕೊಳ್ಳಿ..ಇದು ನಿಮ್ಮಲ್ಲಿ ಈ ಕಿರಿಯನ ವಿನಮ್ರ ವಿನಂತಿ..

ನಿಮ್ಮವನು:
ಸಿದ್ಧರಾಜರೆಡ್ಡಿ ಯಾದಗಿರಿ

Related Articles

One Comment

  1. ನಿಜವಾಗಲು ಇವತ್ತಿನ ವಾಸ್ತವಿಕ ಭಾವಗಳ ಮಾತು ಸರ.

    ನಮ್ಮ ರಕ್ಷಣೆ ನಮ್ಮ ಹೋಣೆ. ಇದೂಂದೆ ದಾರಿ ನಮ್ಎಲ್ಲರಿಗೆ. ನಾವಿದ್ದರೆ ನಮ್ಮವರು, ನಮ್ಮವರಿದ್ದರೆ ನಾವು ಎನ್ನುವ ವಾಕ್ಯವೇ ವಾಣಿ.

Leave a Reply

Your email address will not be published. Required fields are marked *

Back to top button