BREAKING – ಕರ್ನಾಟಕದಲ್ಲಿ ಮತ್ತೆ ಬ್ಯಾಲೆಟ್ ಯುಗಃ ಇವಿಎಂ ಬದಲು ಮತಪತ್ರಕ್ಕೆ ಸಚಿವ ಸಂಪುಟ ಗ್ರೀನ್ ಸಿಗ್ನಲ್
ವಿನಯವಾಣಿ.ಕಾಂ ಬ್ರೇಕಿಂಗ್ 🔴
ವಿನಯವಾಣಿ.ಕಾಂ ಬ್ರೇಕಿಂಗ್ 🔴
—
ಕರ್ನಾಟಕದಲ್ಲಿ ಮತ್ತೆ ಬ್ಯಾಲೆಟ್ ಯುಗಃ ಇವಿಎಂ ಬದಲು ಮತಪತ್ರಕ್ಕೆ ಸಚಿವ ಸಂಪುಟ ಗ್ರೀನ್ ಸಿಗ್ನಲ್
ವಿನಯವಾಣಿ ವರದಿ
ಬೆಂಗಳೂರುಃ ರಾಜ್ಯ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆ. ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಇವಿಎಂ ಬದಲು ಮತ್ತೆ *ಮತಪತ್ರ ಬಳಕೆ ಮಾಡಲು ರಾಜ್ಯ ಸಚಿವ ಸಂಪುಟ ಒಪ್ಪಿಗೆ ಸೂಚಿಸಿದೆ.*
ಏನಿದು ನಿರ್ಧಾರ?
ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾಯ್ದೆಗೆ ತಿದ್ದುಪಡಿ ತಂದು *ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ, ಬಿಬಿಎಂಪಿ, ನಗರಸಭೆ, ಪುರಸಭೆ* ಚುನಾವಣೆಗಳಲ್ಲಿ ಬ್ಯಾಲೆಟ್ ಪೇಪರ್ ಮೂಲಕ ಮತದಾನ ನಡೆಸಲು ತೀರ್ಮಾನಿಸಲಾಗಿದೆ.
ಯಾಕೆ ಈ ಬದಲಾವಣೆ?
1. ಪಾರದರ್ಶಕತೆ- ಮತಪತ್ರದಲ್ಲಿ ಮತದಾರರಿಗೆ ಹೆಚ್ಚು ವಿಶ್ವಾಸ ಇರುತ್ತದೆ ಎಂಬ ವಾದ
2. ವಿರೋಧ ಪಕ್ಷಗಳ ಒತ್ತಾಯಃ ಇವಿಎಂ ದುರ್ಬಳಕೆ ಆರೋಪದ ಹಿನ್ನೆಲೆ
3. ಗ್ರಾಮೀಣ ಭಾಗದಲ್ಲಿ ಅನುಕೂಲಃ ತಾಂತ್ರಿಕ ಸಮಸ್ಯೆ ತಪ್ಪಿಸಲು
ಪರಿಣಾಮ ಏನು?
– ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆ ಬ್ಯಾಲೆಟ್ನಲ್ಲೇ ನಡೆಯಲಿದೆ.
– ಮತ ಎಣಿಕೆ ಪ್ರಕ್ರಿಯೆ ನಿಧಾನ ಆಗಬಹುದು.
– ಚುನಾವಣಾ ವೆಚ್ಚ ಹೆಚ್ಚಾಗುವ ಸಾಧ್ಯತೆ.
ವಿಪಕ್ಷ ಪ್ರತಿಕ್ರಿಯೆಃ ಬಿಜೆಪಿ-ಜೆಡಿಎಸ್ ಈ ನಿರ್ಧಾರವನ್ನು ಸ್ವಾಗತಿಸಿರುವದು ಅಚ್ಚರಿಯ ವಿಷಯವಾಗಿದೆ. “ಇವಿಎಂ ಹ್ಯಾಕ್ ಆರೋಪಕ್ಕೆ ತೆರೆ ಬೀಳುತ್ತೆ” ಎಂದಿವೆ.



