ಲಂಚಕೋರ ಮೀನೊಂದು ಬಲೆಗೆ ಬಿದ್ದಾಗ… ಕಾಲಿಗೆ ಬಿದ್ದು ಬಿಟ್ಬಿಡಿ ಎಂದಾಗ…
ಲಂಚಕೋರ ಮೀನೊಂದು ಬಲೆಗೆ ಬಿದ್ದಾಗ… ಕಾಲಿಗೆ ಬಿದ್ದು ಬಿಟ್ಬಿಡಿ ಎಂದಾಗ…
ಯಾದಗಿರಿಃ ಲಂಚ್ ಮಾಡದೆ ಲಂಚ ತೆಗೆದುಕೊಂಡು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದ ಇಲ್ಲಿನ ಅಧಿಕಾರಿಯೋರ್ವ ಎಸಿಬಿ ಬಲೆಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಾಕೊಂಡು ಕೂಡಲೆ ಬಿಟ್ಬಿಡಿ ಪ್ಲೀಜ್ ಜಾಲಿಗೆ ಬೀಳುತ್ತೇನೆ ಎಂದು ರೇಡ್ ಮಾಡಿದ ಎಸಿಬಿ ಎಸ್.ಪಿ.ಮಹೇಶ ಮೇಘಣ್ಣನವರ್ ಕಾಲಿಗೆ ಬಿದ್ದು ಕೇಳಿಕೊಂಡಿದ್ದಾನೆ.
ಅಲ್ಲದೆ ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾದಲ್ಲಿ ಫುಲ್ ವೈರಲ್ ಆಗಿದೆ. ಅಷ್ಟಕ್ಕೂ ಆ ಅಧಿಕಾರಿ ಯಾರು ಅಂತ ಗೊತ್ತಾಗ್ಬೇಕಾ.? ಯಾದಗಿರಿ ತೋಟಗಾರಿಕಾ ಇಲಾಖೆಯ ಉಪ ನಿರ್ದೇಶಕ ಮಲ್ಲಿಕಾರ್ಜುನ ಎಂಬಾತನೇ ಲಂಚ ಪಡೆಯುವ ವೇಳೆ ಎಸಿಬಿ ಪೊಲಿಸರು ಬೀಸಿದ ಬಲೆಗೆ ಸಿಕ್ಕಿಬಿದ್ದಿದ್ದಾರೆ.
ಕಾರಣವಿಷ್ಟೆ ಕೌಳೂರ ಗ್ರಾಮದ ಶಿವರಡ್ಡಿ ಎಂಬುವರಿಗೆ ಹನಿ ನೀರಾವರಿ ಯೋಜನೆಯ 1 ಲಕ್ಷ ರೂಪಾಯಿ ಸಬ್ಸಿಡಿ ನೀಡಬೇಕಿತ್ತು. ಆ ಹಣ ನೀಡಲು ಈತ ಶಿವರಡ್ಡಿ ಅವರಿಂದ 5 ಸಾವಿರ ರೂ. ಲಂಚ ಕೇಳಿದ್ದಾರೆ ಎನ್ನಲಾಗಿದೆ. ಈ ಕುರಿತು ಶಿವರಡ್ಡಿ ಅವರು ಎಸಿಬಿಗೆ ದೂರು ನೀಡಿದ್ದರು.
ಅದರನ್ವಯ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ರೆಡ್ ಹ್ಯಾಂಡ್ ಆಗಿ ಲಂಚಕೋರ ಮೀನಿಗೆ ಬಲೆ ಬೀಸಿ ಸಿಲುಕಿಸಲಾಗಿತ್ತು. ಈ ವೇಳೆ ಕಾಲು ಬೀಳುವ ನಾಟಕವಾಡಿ ಲಂಚ ಪಡೆದ ಪ್ರಕರಣದಿಂದ ಬಚಾವ್ ಆಗಲು ತೋಟಗಾರಿಕೆ ಇಲಾಖೆ ಅಧಿಕಾರಿ ಪ್ರಯತ್ನಿಸಿದ್ದಾರೆ ಎನ್ನಲಾಗಿದೆ.
ದಾಳಿ ವೇಳೆ ಎಸಿಬಿ ಎಸ್.ಪಿ.ಮೆಘಣ್ಣನವರ್, ಡಿಎಸ್ಪಿ ಬಿಬಿ ಪಟೇಲ್, ಪಿಐ ಗುರುಪಾದ್ ಬಿರಾದಾರ್ ನೇತೃತ್ವದಲ್ಲಿ ಎಸಿಬಿ ಅಧಿಕಾರಿಗಳು, ಲಂಚ ಸ್ವೀಕಾರ ಮಾಡುವ ವೇಳೆ ಸಾಕ್ಷಿ ಸಮೇತ ಆಸಾಮಿಯನ್ನು ಹಿಡಿದಿದ್ದಾರೆ.