ಪ್ರಮುಖ ಸುದ್ದಿ

ಹಳ್ಳದಲ್ಲಿ ಕಾರು ಸಮೇತ ಕೊಚ್ಚಿಕೊಂಡು‌ ಹೋಗಿದ್ದ‌‌ ಜೆಸ್ಕಾಂ ಎಇ ಬೆಳಗ್ಗೆ ಶವವಾಗಿ‌ ಪತ್ತೆ.!

ಕಲಬುರ್ಗಿಃ ಅಫಜಲಪುರದಿಂದ ಕಲಬುರ್ಗಿಗೆ ಹೊರಟಿದ್ದ‌ ಗುರುವಾರ ತಡ ಸಂಜೆ ಹಳ್ಳದಲ್ಲಿ‌ ಕಾರು‌‌ ದಾಟಿಸುವ ಯತ್ನದಲ್ಲಿ‌ ವಿಫಲವಾಗಿ ಹಳ್ಳದ‌ ನೀರಿನ‌ ರಭಸಕ್ಕೆ ಕೊಚ್ಷಿಕೊಂಡು ಹೋಗಿದ್ದ ಜೆಸ್ಕಾಂ ಎಇ ಸಿದ್ದರಾಮ ಅವಟೆ (28) ಶುಕ್ರವಾರ ಶವವಾಗಿ ಪತ್ತೆಯಾಗಿದೆ.

ಧಾರಕಾರ ಮಳೆ ಹಾಗೂ ಕತ್ತಲಿನ ನಡುವೆಯೇ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದರು. ಆದರೆ ಸಿದ್ದಪ್ಪ ಅವಟೆ ಮತ್ತು ಕಾರು ಹುಡುಕಾಟ ಯಶಸ್ವಿಯಾಗಲಿಲ್ಲ.
ಶುಕ್ರವಾರ ಬೆಳಗ್ಗೆ ಶವ ಪತ್ತೆಯಾಗಿದೆ.

ಆದರೆ ಕಾರಿನಲ್ಲಿ ಜೊತೆಯಲ್ಲಿದ್ದ ರಾಜಶೇಖರ ಕಂಬಾರ ಅವರನ್ನು ರಾತ್ರಿ ಪೊಲೀಸರು ರಕ್ಷಿಸಿದ್ದಾರೆ ಎನ್ನಲಾಗಿದೆ.

Related Articles

Leave a Reply

Your email address will not be published. Required fields are marked *

Back to top button