ಪ್ರಮುಖ ಸುದ್ದಿ

ಶೌಚಾಲಯ ಸದ್ಭಳಿಕೆ‌ ಮಾಡಿಕೊಳ್ಳಿ – ಶಾಂತಪ್ಪ ಕಟ್ಟಿಮನಿ

ಶಹಾಪುರಃ ಸಾರ್ವಜನಿಕ ಶೌಚಾಲಯ ಕಟ್ಟಡ ಲೋಕಾರ್ಪಣೆ

ಶಹಾಪುರಃ ನಗರದ ಹಳಿಸಗರ ಭಾಗದ ವಾರ್ಡ್ ಸಂಖ್ಯೆ 28 ರಲ್ಲಿ ನಿರ್ಮಿಸಲಾದ ಸಾರ್ವಜನಿಕ ಶೌಚಾಲಯ ಕಟ್ಟಡವನ್ನು ಇಲ್ಲಿನ ನಗರಸಭೆ ಸದಸ್ಯೆ ರಾಧಿಕ ಶಾಂತಪ್ಪ ಕಟ್ಟಿಮನಿ ಲೋಕಾರ್ಪಣೆ ಗೊಳಿಸಿದರು. 2015-16 ನೇ ಸಾಲಿನ ಅಂದಾಜು 11.50 ಲಕ್ಷದ ಮೊತ್ತದಲ್ಲಿ ಶೌಚಾಲಯ ಕಟ್ಟಡ‌ನಿರ್ಮಿಸಲಾಗಿದೆ.

ಈ ಸಂದರ್ಭದಲ್ಲಿ ಮುಖಂಡ ಶಾಂತಪ್ಪ ಕಟ್ಟಿಮನಿ ಮಾತನಾಡಿ, ಬಡಾವಣೆಯ ಜನರು ಶೌಚಾಲಯವನ್ನು ಸದ್ಭಳಿಕೆ ಮಾಡಿಕೊಳ್ಳಬೇಕು. ಬಯಲು ಶೌಚಕ್ಕೆ ಮುಕ್ತಿ ನೀಡಬೇಕಿದೆ.

ನಿಗದಿ ಪಡಿಸಿದ ಹಣ ನೀಡಿ ಶೌಚಾಲಯ ಬಳಸಬೇಕು. ಎಲ್ಲರೂ ಶೌಚಾಲಯ ಬಳಸುವ ಮೂಲಕ ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದು ಮನವಿ ಮಾಡಿದರು.

ನಗರಸಭೆ ಪೌರಾಯುಕ್ತ ಬಸವರಾಜ ಶಿವಪೂಜೆ, ಜೆಇ ಹರೀಶ, ನಗರಸಭೆ ಸದಸ್ಯರಾದ ರವೀಂದ್ರನಾಥ ನರಸನಾಯಕ, ಅಪ್ಪಣ್ಣ ದಶವಂತ, ಸತೀಶ ಪಂಚಭಾವಿ, ರಾಘವೇಂದ್ರ ಯಕ್ಷಿಂತಿ, ನಗರಸಭೆ ವ್ಯವಸ್ಥಾಪಕ ಪ್ರಕಾಶ ಸೇರಿದಂತೆ ಮಲ್ಲಿಕಾರ್ಜುನ ಗುತ್ತೇದಾರ ಸೇರಿದಂತೆ ಬಡಾವಣೆ ಹಿರಿಯರು ಮಹಿಳೆಯರು ಇದ್ದರು.

ಇದೇ ಸಂದರ್ಭದಲ್ಲಿ ಪೌರಾಯುಕ್ತ ಶಿವಪೂಜೆ ಮತ್ತು ವಾರ್ಡಿನ ಸದಸ್ಯೆ‌ ರಾಧಿಕ ಶಾಂತಪ್ಪ ಕಟ್ಟಿಮನಿ ಅವರನ್ನು ಸನ್ಮಾನಿಸಲಾಯಿತು.

Related Articles

Leave a Reply

Your email address will not be published. Required fields are marked *

Back to top button