ಸಮರ್ಪಕವಾಗಿ ಪರಿಹಾರ ತಲುಪಿಸಲು ಕಾರ್ಮಿಕರ ಸಂಘ ಮನವಿ
ಸಮರ್ಪಕವಾಗಿ ಪರಿಹಾರ ತಲುಪಿಸಲು ಕಾರ್ಮಿಕರ ಸಂಘ ಮನವಿ
ಶಹಾಪುರಃ ದೇಶವ್ಯಾಪ್ತಿ ಕೋವಿಡ್-19 ಹರಡಿರುವ ಹಿನ್ನೆಲೆ ಕಷ್ಟದಲ್ಲಿರುವ ಕಾರ್ಮಿಕರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಘೋಷಿಸಿರುವ ಪರಿಹಾರ ಹಣ ಸಮರ್ಪಕವಾಗಿ ಕಾರ್ಮಿಕರ ಖಾತೆಗೆ ಜಮಾವಣೆ ಆಗದಿರುವದನ್ನು ಖಂಡಿಸಿ ಕೂಡಲೇ ಪರಿಹಾರ ಹಣ ಕಾರ್ಮಿಕರಿಗೆ ತಲುಪುವ ವ್ಯವಸ್ಥೆ ಮಾಡುವಂತೆ ಆಗ್ರಹಿಸಿ ಜಿಲ್ಲಾ ಕಾರ್ಮಿಕ ಇಲಾಖೆ ಅಧಿಕಾರಿಗಳಿಗೆ ತಾಲೂಕೂ ಸರ್ ಎಂ.ವಿಶ್ವೇಶ್ವರಯ್ಯ ಕಟ್ಟಡ ಕಾರ್ಮಿಕ ಸಂಘ ಮನವಿ ಪತ್ರ ಸಲ್ಲಿಸಿತು.
ಕೊರೊನಾ ಸೋಂಕು ತಡೆಗೆ ಕೇಂದ್ರ ಸರ್ಕಾರ ಜಾರೊಗೊಳಿಸಿದ ಲಾಕ್ ಡೌನ್ ನಿಯಮವಾಳಿಯಿಂದ ಕಟ್ಟಡ ಕಾರ್ಮಿಕರು ಸಾಕಷ್ಟು ಸಂಕಷ್ಟ ಎದುರಿಸುತ್ತಿದ್ದಾರೆ. ಇದನ್ನು ಮನಗಂಡ ಕೇಂದ್ರ ಹಾಗೂ ರಾಜ್ಯ ಸರ್ಕಾರ ಸೂಕ್ತ ಪರಿಹಾರ ಘೋಷಣೆ ಮಾಡಿದ್ದು, ಪರಿಹಾರ ಹಣ ಕಾರ್ಮಿಕರ ಖಾತೆಗೆ ಸಮರ್ಪಕವಾಗಿ ಜಮೆಯಾಗಿರುವದಿಲ್ಲ. ಇದರಿಂದ ದೇವರು ವರ ಕೊಟ್ಟರು ಪೂಜಾರಿ ಕೊಡಲಿಲ್ಲ ಎಂಬಂತಾಗಿದೆ.
ಕೂಡಲೇ ಜಿಲ್ಲಾ ಮಟ್ಟದ ಅಧಿಕಾರಿಗಳು ಜಿಲ್ಲೆಯಲ್ಲಿರುವ ಕೂಲಿ ಕಾರ್ಮಿಕರ ಪಟ್ಟಿ ಸಿದ್ಧ ಪಡಿಸಿ, ಕೆಲವರು ಕಾರ್ಮಿಕ ಇಲಾಖೆಯಲ್ಲಿ ನೋಂದವಣೆ ಮಾಡದಿರುವದನ್ನು ಗುರುತಿಸಿ ಅಂತವರಿಗೂ ಇಲಾಖೆ ಗಮನ ಹರಿಸಿ ಸದಸ್ಯತ್ವ ನೋಂದಾಯಿಸಿಕೊಂಡು ಪರಿಹಾರ ನೀಡುವ ಕಾರ್ಯ ನಡೆಯಬೇಕೆಂದು ಸಂಘ ಒತ್ತಾಯಿಸಿದೆ. ಈ ಸಂದರ್ಭದಲ್ಲಿ ಸಂಘದ ತಾಲೂಕು ಅಧ್ಯಕ್ಷ ಪ್ರದೀಪ, ದೇವಿಂದ್ರ, ಅಂಬರೀಶ, ಚಂದ್ರಶೇಖರ ಇತರರಿದ್ದರು.