ಪ್ರಮುಖ ಸುದ್ದಿ

ಮೊದಲು ಬಿಜೆಪಿಯವರು ಪರಿವರ್ತನೆ ಆಗಲಿ – ಖರ್ಗೆ ವ್ಯಂಗ್ಯ

ಯಾದಗಿರಿ: ನಾಳೆಯಿಂದ ರಾಜ್ಯದಲ್ಲಿ ಭಾರತೀಯ ಜನತಾ ಪಕ್ಷ ಪರಿವರ್ತನಾ  rally ಹಮ್ಮಿಕೊಂಡಿರುವ ಬಗ್ಗೆ ನಗರದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಚಿವ ಪ್ರಿಯಾಂಕ ಖರ್ಗೆ ಮೊದಲು ಬಿಜೆಪಿಯವರು ಆಂತರಿಕವಾಗಿ ಪರಿವರ್ತನೆ ಆಗಲಿ ಎಂದು ವ್ಯಂಗ್ಯವಾಡಿದರು. ರಾಜ್ಯದಲ್ಲಿ ಬಿಜೆಪಿ ಕಾಲದ ಅವ್ಯವಸ್ಥೆ ಈಗ ಸುಧಾರಣೆ ಆಗುತ್ತಿದೆ. ರಾಜ್ಯದ ಅಭಿವೃದ್ಧಿ ಮೂಲಕ ಪರಿವರ್ತನೆ ಆಗುತ್ತಿದೆ. ನಾಲ್ಕೂವರೆ ವರ್ಷಗಳಿಂದ ನಮ್ಮ ಸರ್ಕಾರ ವಿವಿಧ ಜನಪರ ಯೋಜನೆಗಳ ಮೂಲಕ ಅಭಿವೃದ್ಧಿ ಕೆಲಸಗಳನ್ನು ಮಾಡಿದೆ. ನಾವು ನವಕರ್ನಾಟಕ ನಿರ್ಮಾಣದತ್ತ ದಾಪುಗಾಲು ಹಾಕುತ್ತಿದ್ದೇವೆ ಎಂದರು.

ಬಿಜೆಪಿಯವರಿಗೆ ದಿಢೀರನೇ ಅಹಿಂದ ಸಮುದಾಯಗಳ ಬಗ್ಗೆ ಕಾಳಜಿ ಬಂದು ಬಿಟ್ಟಿದೆ. ಕರ್ನಾಟಕ ರಾಜ್ಯದ ಪರಿವರ್ತನೆಗಾಗಿ ಅಲ್ಲ. ಬಾರತೀಯ ಜನತಾ ಪಕ್ಷದ ಪರಿವರ್ತನೆಗಾಗಿ ಇವೆಲ್ಲಾ ಮಾಡುತ್ತಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ ಬಿಜೆಪಿಯ ಪರಿವರ್ತನಾ ರ್ಯಾಲಿಯನ್ನು ಲೇವಡಿ ಮಾಡಿದ್ದಾರೆ. ನಗರದಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ಧ್ವಜಾರೋಹಣ ನೆರವೇರಿಸಿದ ಬಳಿಕ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು.

Related Articles

Leave a Reply

Your email address will not be published. Required fields are marked *

Back to top button