ಕಥೆ

ಮುಲ್ಲಾನ ಪ್ರವಚನ ಕೇಳಬೇಕೆ ಈ ಕಥೆ ಓದಿ

ಮುಲ್ಲಾನ ಪ್ರವಚನ

ಒಮ್ಮೆ ಮುಲ್ಲಾ ನಸ್ರುದ್ದೀನ್ ನನ್ನು ಪ್ರವಚನ ಮಾಡಲು ಆಹ್ವಾನಿಸಲಾಯಿತು. ಮುಲ್ಲಾ ಸರಿಯಾದ ಸಮಯಕ್ಕೆ ಬಂದು ವೇದಿಕೆಯ ಮೇಲೆ ಏರಿದ. “ನಾನು ಏನು ಹೇಳುತ್ತೇನೆಂದು ನಿಮಗೆ ತಿಳಿದಿದೆಯೇ? ಮುಲ್ಲಾ ಕೇಳಿದ.

“ಇಲ್ಲ” ಎಂದು ಕುಳಿತ ಜನರು ಉತ್ತರಿಸಿದರು. ಇದನ್ನು ಕೇಳಿದ ಮುಲ್ಲಾ ಕೋಪಗೊಂಡು, ನಾನು ಏನು ಹೇಳಲಿದ್ದೇನೆ ಎಂದು ತಿಳಿಯದವರ ಮುಂದೆ ಮಾತನಾಡುವ ಬಯಕೆ ನನಗಿಲ್ಲ. ಎನ್ನುತ್ತ ಹೊರಟು ಹೋದನು.

ಅಲ್ಲಿದ್ದ ಜನರು ಸ್ವಲ್ಪ ಮುಜುಗರಕ್ಕೊಳಗಾದರು ಮತ್ತು ಮರುದಿನ ಮತ್ತೆ ಮುಲ್ಲಾ ನಸ್ರುದ್ದೀನ್ ನನ್ನು ಕರೆಯಿಸಿದರು. ಈ ಬಾರಿಯೂ ಮುಲ್ಲಾ ಅದೇ ಪ್ರಶ್ನೆಯನ್ನು ಪುನರುಚ್ಚರಿಸಿದ.

“ನಾನು ಏನು ಹೇಳಲಿದ್ದೇನೆ ಎಂದು ನಿಮಗೆ ತಿಳಿದಿದೆಯೇ?”
“ಹೌದು”, ಕೋರಸ್‌ನಲ್ಲಿ ಉತ್ತರ ಬಂದಿತು. “ನಾನು ನಿಮಗೆ ಹೇಳುವ ಮೂಲಕ ನಿಮ್ಮ ಸಮಯವನ್ನು ಏಕೆ ವ್ಯರ್ಥಮಾಡಬೇಕು ಎಂದು ನಿಮಗೆ ಈಗಾಗಲೇ ತಿಳಿದಿರುವಾಗ”, ಎಂದು ಹೇಳುತ್ತ ಮುಲ್ಲಾ ಅಲ್ಲಿಂದ ಹೊರಟು ಹೋದ.

ಈಗ ಜನರು ಸ್ವಲ್ಪ ಕೋಪಗೊಂಡರು, ಮತ್ತು ಅವರು ಮತ್ತೊಮ್ಮೆ ಮುಲ್ಲಾನನ್ನು ಆಹ್ವಾನಿಸಿದರು. ಈ ಬಾರಿಯೂ ಮುಲ್ಲಾ ಅದೇ ಪ್ರಶ್ನೆಯನ್ನು ಕೇಳಿದರು, “ನಾನು ಏನು ಹೇಳಲಿದ್ದೇನೆ ಎಂದು ನಿಮಗೆ ತಿಳಿದಿದೆಯೇ?” ಈ ಬಾರಿ ಎಲ್ಲರೂ ಮುಂಚಿತವಾಗಿ ಯೋಜಿಸಿದ್ದರು, ಆದ್ದರಿಂದ ಅರ್ಧದಷ್ಟು ಜನರು “ಹೌದು” ಎಂದು ಉತ್ತರಿಸಿದರು ಮತ್ತು ಅರ್ಧದಷ್ಟು ಜನರು “ಇಲ್ಲ” ಎಂದು ಉತ್ತರಿಸಿದರು.

“ಸರಿ, ನಾನು ಏನು ಹೇಳಲಿದ್ದೇನೆ ಎಂದು ತಿಳಿದಿರುವ ಅರ್ಧದಷ್ಟು ಜನರು, ಉಳಿದ ಅರ್ಧಕ್ಕೆ ಹೇಳಿ.” ಎಂದು ಹೇಳಿ ಹೋರಟು ಹೋದನು. ನಂತರ ಮುಲ್ಲಾನನ್ನು ಮತ್ತೆ ಯಾರೂ ಕರೆಯಲಿಲ್ಲ!

🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882.

Related Articles

Leave a Reply

Your email address will not be published. Required fields are marked *

Back to top button