ಕಾವ್ಯ

‘ಕತ್ತಲೆಗೆ ಕಣ್ಣಾಗಿ’ ಹಿರಿಯ ಸಾಹಿತಿ ಅಕ್ಕಿ ಕಾವ್ಯ ಬರಹ

ಕತ್ತಲೆಗೆ ಕಣ್ಣಾಗಿ

ಕಡುನೀಲಿ ಪರದೆಯಲಿ
ಬೆಳ್ಳಿತಾಟಿನ ತೆರದಿ
ಹುಣ್ಣಿಮೆಯ ಚಂದಿರನು
ತಾ ಮೂಡಿಬಂದ || ೧ ||

ಅಂಬರದ ಸಂಭ್ರಮಕೆ
ನಗುವ ಚಿಕ್ಕಿಯ ಬಳಗ
ಕತ್ತಲೆಗೆ ಹಚ್ಚಿವೆಯೇ?
ಸರಮಾಲೆ ದೀಪ || ೨ ||

ಬಯಲು ಬದುಗಳಿಂದ
ಮರ ಪೊದೆಗಳೆದೆಯಿಂದ
ಗರಿ ಬಿಚ್ಚಿದಾ ನವಿಲ
ಹಿಗ್ಗಿನಾ ಕೇಕೇ || ೩ ||

ಮೆಲುಗಾಳಿಗೆ ಬೆದರಿ
ತೊನೆವ ಗಿಡಗಳ ಟೊಂಗೆ
ರಾತ್ರಿ ಮುತ್ತೈದೆ ಹಣೆಗೆ
ಸಿರಿಹೂವ ದಂಡೆ || ೪ ||

ನೀರವದ ನಟ್ಟಿರುಳು
ಮಿಂಚಿ ಹರಿಯುವ ನೀರ
ಟಿಂವಕ್ಕಿ ಕೂಗುತಿದೆ
ಅಪಶಕುನ ಸರಿಸಿ || ೫ ||

ನೆತ್ತಿಮೇಲಣ ಚಂದ್ರ
ಬೆಂದೊಡಲ ಭುವಿಗೆ
ಕನಿಕರಿಸಿ ಹಿಡಿದಿಹನೆ?
ಧವಳ ತಂಪಿನ ಛತ್ರ || ೬ ||

ಕತ್ತಲೆಗೆ ಕಣ್ಣಾಗಿ
ಹಾದಿಗೆ ಬೆಳಕೀವ
ತಾರೆ ಚಂದಿರರಂತೆ
ನಾವು ಬಾಳಬೇಕು ||೭ ||

ನೋವು ನುಂಗುತ
ಮುಂದೆ ಸಾಗಬೇಕು
ಜಂಜಡದಲೂ ಸೊಗದ
ಸುಖ ಕಾಣಬೇಕು ||೮ ||

– ಡಿ.ಎನ್.ಅಕ್ಕಿ

ದಿನಾಂಕ :20-12-2021.
9448577898.
ವಿಳಾಸ :
ಡಿ.ಎನ್.ಅಕ್ಕಿ.
ಚಂದ್ರಪ್ರಭು ನಿಲಯ
ಶಾಂತೇಶ ನಗರ
ಇಂಡಿ–586209.
ವಿಜಯಪುರ ಜಿಲ್ಲೆ.

Related Articles

Leave a Reply

Your email address will not be published. Required fields are marked *

Back to top button