ಪ್ರಮುಖ ಸುದ್ದಿ
ನ್ಯಾಯಾಂಗ ವ್ಯವಸ್ಥೆ ಹಾಳುಃ ರಾಷ್ಟ್ರಪತಿ ಆಳ್ವಿಕೆಗೆ ಆರ್.ಅಶೋಕ ಆಗ್ರಹ
ನ್ಯಾಯಾಂಗ ವ್ಯವಸ್ಥೆಗೆ ರಾಜ್ಯ ಸರ್ಕಾರದಿಂದ ಚೂರಿ ಇರಿತಃ ಆರ್.ಅಶೋಕ ವಾಗ್ದಾಳಿ
ಬೆಂಗಳೂರಃ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ತೀವ್ರ ಹದಗೆಟ್ಟಿದೆ. ಕೊಲೆ, ಅತ್ಯಾಚಾರ ನಿರಂತರ ನಡೆಯುತ್ತಿವೆ ಎಂದು ಮಾಜಿ ಉಪ ಮುಖ್ಯಮಂತ್ರಿ ಆರ್. ಅಶೋಕ ಹರಿಹಾಯ್ದಿದ್ದಾರೆ.
ನಗರದಲ್ಲಿ ಮಾಧ್ಯಮಕ್ಕೆ ಹೇಳಿಕೆ ನೀಡಿದ ಅವರು,
ಲೋಕಾಯುಕ್ತ ಕಚೇರಿಗೆ ನುಗ್ಗಿ ಲೋಕಾಯುಕ್ತ ಅಧಿಕಾರಿಗೆ ಚಾಕು ಹಾಕ್ತಾರೇ ಅಂದ್ರೆ ಭದ್ರತೆ ವ್ಯವಸ್ಥೆ ಸರಿಯಿಲ್ಲ. ರಾಜ್ಯದಲ್ಲಿ ರಕ್ಷಣಾ ವ್ಯವಸ್ಥೆ ಹದಗೆಟ್ಟಿದೆ ಎಂಬುದಕ್ಕೆ ಸಾಕ್ಷಿ.
ಗೃಹ ಸಚಿವರು ಬೇಜವಬ್ದಾರಿ ವರ್ತನೆ , ಹೇಳಿಕೆ ಖಂಡನೀಯ. ರಾಜ್ಯ ಸರ್ಕಾರ ಲೋಕಾಯುಕ್ತ ಇಲಾಖೆಗೆ ಚೂರಿ ಹಾಕಿತು. ಇಂದು ಅದರ ಅಧಿಕಾರಿಗಳಿಗೆ ಚೂರಿ ಹಾಕುವಷ್ಟು ಕಾನೂನು ವ್ಯವಸ್ಥೆ ಹಾಳಾಗಿದೆ ಎಂದು ವಾಗ್ದಾಳಿ ನಡೆಸಿದ ಅವರು,
ರಾಜ್ಯದಲ್ಲಿ ಜನ ಸಾಮಾನ್ಯರು ಬದುಕುವುದು ಕಷ್ಟವಾಗಿದೆ. ರಾಜ್ಯದಲ್ಲಿ ಬಲಿಯಾದ ಅದೆಷ್ಟು ಜೀವಗಳಿಗೆ ನ್ಯಾಯ ದೊರಕಬೆಕಿದೆ. ಕೂಡಲೇ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಅಗತ್ಯವಿದೆ ಎಂದು ಅವರು ತಿಳಿಸಿದ್ದಾರೆ.