Homeಅಂಕಣಜನಮನಮಹಿಳಾ ವಾಣಿವಿನಯ ವಿಶೇಷ

ಬೆಳ್ಳುಳ್ಳಿಯ ಆರೋಗ್ಯ ಪ್ರಯೋಜನಗಳು; ಅಂಥದ್ದೇನಿದೆ ಬೆಳ್ಳುಳ್ಳಿಯಲ್ಲಿ?

ಬೆಳ್ಳುಳ್ಳಿಗೆ ಆಯುರ್ವೆದದಲ್ಲಿ ಮಹೌಷಧ ಎಂದು ಕರೆದಿದ್ದಾರೆ. ಇದಕ್ಕಿರುವ ರೋಗ ನಾಶಕ ಗುಣ ಅಂಥದ್ದು. ಭಾರತೀಯರು ತಲೆತಲಾಂತರಗಳಿಂದ ಬೆಳ್ಳುಳ್ಳಿಯನ್ನು ಔಷಧವಾಗಿ ಬಳಕೆ ಮಾಡುತ್ತಿದ್ದಾರೆ. ಇಂದು ಆಧುನಿಕ ವಿಜ್ಞಾನ ಕೂಡ ಬೆಳ್ಳುಳ್ಳಿ ಹಲವಾರು ಕಾಯಿಲೆಗಳನ್ನು ಗುಣಪಡಿಸುವ ಶಕ್ತಿಯನ್ನು ಹೊಂದಿವೆ ಎಂಬುದನ್ನು ಕಂಡುಕೊಂಡಿದೆ.

ಅಂಥದ್ದೇನಿದೆ ಬೆಳ್ಳುಳ್ಳಿಯಲ್ಲಿ?: ಮುರಿದ ಎಲುಬುಗಳನ್ನು ಜೋಡಿಸುವ ಶಕ್ತಿ ಬೆಳ್ಳ್ಳುಳ್ಳಿಗಿದೆ. ವಯಸ್ಸಾಗುತ್ತಾ ಹೋದಂತೆ ಮನುಷ್ಯರಲ್ಲಿ ಸಹಜವಾಗಿ ಮೂಳೆ ಸವಕಳಿ ಆಗುತ್ತದೆ. ಬೆಳ್ಳುಳ್ಳಿಯ ನಿಯಮಿತ ಸೇವನೆ ಈ ಮೂಲೆ ಸವೆತವನ್ನು ತಪ್ಪಿಸುತ್ತದೆ. ಇದರಲ್ಲಿ ಆಂಟಿ ಆಕ್ಸಿಡಂಟ್​ಗಳು ಹೇರಳವಾಗಿ ಇವೆ. ಈ ಕಾರಣದಿಂದಾಗಿ ವಯಸ್ಸಾದಂತೆ ಮಿದುಳಿನ ಶಕ್ತಿ ಕಡಿಮೆಯಾಗಿ ಮರೆವು, ಗಲಿಬಿಲಿಗಳು ಹೆಚ್ಚಾಗುವುದನ್ನು ಕೂಡ ಇದು ತಪ್ಪಿಸುತ್ತದೆ. ವಾತ ಪ್ರಕೃತಿಯವರಿಗೆ ಅನುಕೂಲ: ಬೆಳ್ಳುಳ್ಳಿಯನ್ನು ವಾತ ಮತ್ತು ಕಫ ದೋಷಕ್ಕೆ ಸಂಬಂಧಿಸಿದ ಸಮಸ್ಯೆ ಇರುವವರು ಹಾಗೂ ವಾತ ಮತ್ತು ಕಫ ಪ್ರಕೃತಿಯವರು ಹೆಚ್ಚಾಗಿ ಸೇವನೆ ಮಾಡಿದರೆ ಅನುಕೂಲವಾಗುತ್ತದೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ ಮುಪ್ಪನ್ನು ದೂರ ಮಾಡುತ್ತದೆ. ದೇಹ ಶುದ್ಧಿ ಮಾಡುತ್ತದೆ ಅಂದರೆ ರಕ್ತದಲ್ಲಿರುವ ಕೆಟ್ಟ ರಾಸಾಯನಿಕ ಅಂಶಗಳನ್ನು ಕಡಿಮೆ ಮಾಡುತ್ತದೆ.

ಬೆಳ್ಳುಳ್ಳಿಯಲ್ಲಿ ಅಲೀನ್ ಎಂಬ ಅಮೈನೋ ಆಸಿಡ್ ಇರುತ್ತದೆ. ಬೆಳ್ಳುಳ್ಳಿಯನ್ನು ಜಜ್ಜಿ ಕೆಲ ನಿಮಿಷಗಳ ಕಾಲ ವಾತಾವರಣದಲ್ಲಿ ಇಟ್ಟಾಗ ಅದು ಆಲಿಸೀನಾಗಿ ಬದಲಾಗುತ್ತದೆ. ಹೆಚ್ಚಾದ ಕೊಲೆಸ್ಟ್ರಾಲ್, ರಕ್ತನಾಳಗಳು ಕಟ್ಟಿಕೊಳ್ಳುವುದು, ಮಧುಮೇಹ, ಅತಿ ರಕ್ತದೊತ್ತಡ ಮುಂತಾದ ಹಲವಾರು ಸಮಸ್ಯೆಗಳನ್ನು ಇದು ಗುಣಪಡಿಸುತ್ತದೆ ಎಂಬುದು ಸಾಬೀತಾಗಿದೆ. ಈ ಎಲ್ಲ ಕಾರಣಗಳಿಂದಾಗಿ ಇದು ಹೃದಯ ಸಂಬಂಧೀ ಕಾಯಿಲೆಗಳನ್ನು ತಡೆಯುತ್ತದೆ ಮತ್ತು ಗುಣಪಡಿಸುತ್ತದೆ. ನರಗಳ ದೌರ್ಬಲ್ಯವನ್ನು ನಿವಾರಿಸುವ ಶಕ್ತಿಯು ಬೆಳ್ಳುಳ್ಳಿಗಿದೆ ಎಂಬುದು ಸಾಬೀತಾಗಿದೆ. ದಿವ್ಯೌಷಧ: ಬೆಳ್ಳುಳ್ಳಿಯು ಧಾತುವರ್ಧಕ, ವೀರ್ಯವರ್ಧಕ, ಜೀರ್ಣಶಕ್ತಿಯನ್ನು ಹೆಚ್ಚಿಸುವಂಥದ್ದು. ಕಂಠಕ್ಕೆ ಹಿತಕಾರಿ, ಬುದ್ಧಿಶಕ್ತಿಯನ್ನು ಹೆಚ್ಚಿಸುವಂಥದ್ದು ಮತ್ತು ಕಣ್ಣುಗಳ ಆರೋಗ್ಯಕ್ಕೆ ಉತ್ತಮವಾದದ್ದು ಎನ್ನುತ್ತದೆ ಆಯುರ್ವೆದ. ಇದಕ್ಕೆ ಉಷ್ಣ ಮತ್ತು ತೀಕ್ಷ್ಣ ಗುಣಗಳಿವೆ; ಅಗ್ನಿವರ್ಧಕ ಗುಣವಿದೆ. ಈ ಎಲ್ಲ ಗುಣಗಳು ಇರುವ ಕಾರಣದಿಂದಾಗಿ ಇದು ಹೃದ್ರೋಗ, ಹೊಟ್ಟೆ ನೋವು, ತುಂಬಾ ದಿನಗಳಿಂದ ಕಾಡುತ್ತಿರುವ ಜ್ವರ, ವಾತವ್ಯಾಧಿಗಳು. ಮೂಲವ್ಯಾಧಿ, ಚರ್ಮ ರೋಗಗಳು, ಅಗ್ನಿಮಾಂದ್ಯ ಮತ್ತು ಕಫಕ್ಕೆ ಸಂಬಂಧಿಸಿದ ಸಮಸ್ಯೆಗಳಲ್ಲಿ ಅತ್ಯಂತ ಸಹಾಯಕ ಎಂದು ಆಯುರ್ವೆದ ಗ್ರಂಥಗಳು ಹೇಳುತ್ತವೆ. ಸೊಂಟನೋವು, ಕೈಗಳ ಸೆಳೆತ, ಸಯಾಟಿಕ, ಕಾಲುಗಳಲ್ಲಿ ಬಾವು, ಆರ್ಥ್ರೖರ್ೆಟಿಸ್ ಮುಂತಾದ ಹಲವಾರು ವಾತವ್ಯಾಧಿಗಳಲ್ಲಿ ಇದು ಅತ್ಯಂತ ಪ್ರಯೋಜಕ. ಪದೇ ಪದೇ ಕಾಡುವ ಸೀನು, ನೆಗಡಿ, ಸೈನಸೈಟಿಸ್, ಅಸ್ತಮಾ, ಕಫಯುಕ್ತ ಕೆಮ್ಮು ಮುಂತಾದ ಕಫಕ್ಕೆ ಸಂಬಂಧಿಸಿದ ಬಹುತೇಕ ರೋಗಗಳಲ್ಲಿ ಈ ಬೆಳ್ಳುಳ್ಳಿ ದಿವ್ಯೌಷಧ.

Related Articles

Leave a Reply

Your email address will not be published. Required fields are marked *

Back to top button