ಪ್ರಮುಖ ಸುದ್ದಿ
ನನಗೂ ಕೆಟ್ಟ ಭಾಷೆ ಬಳಸಲು ಬರುತ್ತದೆ ಹುಷಾರ್ – ಸಿಎಂ ಸಿದ್ಧರಾಮಯ್ಯ
ಸುರಪುರ: ಬಿ.ಎಸ್.ಯಡಿಯೂರಪ್ಪ ಬಾಯಿಗೆ ಬಂದಂತೆ ನಾತನಾಡುತ್ತಿದ್ದಾರೆ. ಸಿದ್ದರಾಮಯ್ಯ ಅಯೋಗ್ಯ ಮುಖ್ಯಮಂತ್ರಿ ಅಂತೆಲ್ಲಾ ಹೇಳುತ್ತಿದ್ದಾರೆ. ಕೀಳು ಪದ ಬಳಕೆ ಮೂಲಕ ನನ್ನನ್ನು ಹೆದರಿಸಬಹುದು ಅಂದುಕೊಂಡಿದ್ದಾರೆ. ಅದು ಸಾದ್ಯವಿಲ್ಲ ಮಾತು. ನಾನೂ ಕೂಡಾ ಹಳ್ಳಿಯಿಂದ ಬಂದವನು. ನನಗೂ ಕೆಟ್ಟಬಾಷೆ ಬಳಸಲು ಬರುತ್ತದೆ ಎಂದು ಸಿಎಂ ಸಿದ್ಧರಾಮಯ್ಯ ಅವರು ಮಾಜಿ ಸಿಎಂ, ಬಿಜೆಪಿ ರಾಜ್ಯದ್ಯಕ್ಷ ಬಿ.ಎಸ್.ಯಡಿಯೂರಪ್ಪ ವಿರುದ್ಧ ಕಿಡಿ ಕಾರಿದರು.
ಇದೇ ಸಂದರ್ಭದಲ್ಲಿ ಸಿಎಂ ಮಾತಿನ ಮದ್ಯೆ ಪ್ರವೇಶಿಸಿದ ಸಚಿವ ಎಂ.ಬಿ. ಪಾಟೀಲ್ ಅವರು ನನ್ನನ್ನೂ ಬೈತಾರೆ ಸಾರ್ ಅಂತಾ ದೂರು ಹೇಳಿದರು. ಅವ್ರು ಎಲ್ಲರನ್ನೂ ಬೈತಾರೆ ಬಿಡ್ರೀ ಅಂತಾ ಸಿಎಂ ಸಿದ್ಧರಾಮಯ್ಯ ಲೇವಡಿ ಮಾಡಿದ ಪ್ರಸಂಗವೂ ನಡೆಯಿತು.
ಬಿ.ಎಸ್.ಯಡಿಯೂರಪ್ಪಗೆ ಅಮಿತ್ ಷಾ ಬೈದಿರಬಹುದು. ಚುನಾವಣಾ ವರ್ಷದಲ್ಲಿ ರಾಜ್ಯದಲ್ಲಿ ಗಲಬೆ ಸೃಷ್ಟಿಸಿ ಅಂತ ಸೂಚಿಸಿರಬಹುದು. ಅದಕ್ಕಾಗಿ ಯಡಿಯೂರಪ್ಪ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಸಮಾಜ ಒಡೆದಾಳುವ, ಧರ್ಮ ಸಂಘರ್ಷ ಸೃಷ್ಟಿಸುವ ಬಿಜೆಪಿಗೆ ಎಂದೂ ಜನ ಅಧಿಕಾರ ನೀಡಬಾರದು ಎಂದು ಸಿಎಂ ಸಿದ್ಧರಾಮಯ್ಯ ಹೇಳಿದರು.