ಶಹಾಪುರ: ವಿದ್ಯುತ್ ತಂತಿ ನೆಲಕ್ಕೆ: ಉಡಾಫೆ ಉತ್ತರ ಕೊಟ್ಟ ಜೆಸ್ಕಾಂ ನಗರ SO
ವಿದ್ಯುತ್ ತಂತಿ ಕಡಿದು ರಸ್ತೆಗೆ ಬಿದ್ದರೂ ಕ್ಯಾರೆ ಎನ್ನದ ಜೆಸ್ಕಾಂ: ಜನಾಕ್ರೋಶ
ವಿದ್ಯುತ್ ತಂತಿ ನೆಲಕ್ಕೆ: ಉಡಾಫೆ ಉತ್ತರ ಕೊಟ್ಟ ಜೆಸ್ಕಾಂ ನಗರ SO
ವಿದ್ಯುತ್ ತಂತಿ ಕಡಿದು ರಸ್ತೆಗೆ ಬಿದ್ದರೂ ಕ್ಯಾರೆ ಎನ್ನದ ಜೆಸ್ಕಾಂ
ಉದಯವಾಣಿ ಸಮಾಚಾರ
ಶಹಾಪುರ: ಇಲ್ಲಿನ ಶರಣಬಸವೇಶ್ವರ ನಗರದಲ್ಲಿ ಸಂತಪಾಲ ಶಾಲಾ ಮುಂದಿನ ರಸ್ತೆ ಮೇಲೆ ರಾತ್ರಿಯೇ ವಿದ್ಯುತ್ ತಂತಿ ನೆಲಕ್ಕೆ ಉರುಳಿದ್ದು, ಬಡಾವಣೆ ನಾಗರಿಕರು ಸಂಬಂಧಿಸಿದ ಜೆಸ್ಕಾಂನ ಸೆಕ್ಷನ್ ಆಫೀಸರ್ ಶರಣಗೌಡ ಅವರಿಗೆ ಕರೆ ಮಾಡಿ ಮಾಹಿತಿ ನೀಡಿದರೆ ಕೂಡಲೇ ಸ್ಪಂಧಿಸಬೇಕಾದ ಅಧಿಕಾರಿ ಉಡಾಫೆ ಉತ್ತರ ಕೊಟ್ಟಿದ್ದು, ನಾಗರಿಕರನ್ನು ಕೆರಳಿಸಿದೆ.

ಅಲ್ಲದೆ ಶಾಲಾ ಮುಂದಿನ ರಸ್ತೆ ಮೇಲೆ ವಿದ್ಯುತ್ ತಂತಿ ಹರಿದು ಬಿದ್ದಿದ್ದು, ಅದರಲ್ಲಿ ವಿದ್ಯುತ್ ಇದೆ ಶಾಲಾ ಮಕ್ಕಳು ಮತ್ತು ನಾಗರಿಕರ ಸಂಚಾರಕ್ಕೆ ತೊಂದರೆಯಾಗಲಿದೆ ಮೊದಲು ವಿದ್ಯುತ್ ಸಂಪರ್ಕ ಕಡಿತಗೊಳಿಸಿ ಹಾಗೇ ದುರಸ್ತಿಗೊಳಿಸುವಂತೆ ಮನವಿ ಮಾಡಿದ ಸಂತಪಾಲ ಶಾಲಾ ಮುಖ್ಯೋಪಾಧ್ಯಾಯರಿಗೆ ನಾನೇನು ಮಾಡಲಿ, ನೀವೆ ಅಲ್ಲಿನ ಎಲ್ಲಾ ಮನೆ ಮನೆಗೆ ಹೋಗಿ ಹೇಳಿ ನಮ್ಮ ಸಿಬ್ಬಂದಿ ಬರಬೇಕಾದರೆ ಇನ್ನೂ ಎರಡು ತಾಸು ಆಗುತ್ತದೆ ಅಲ್ಲಿವರೆಗೂ ನೀವೆ ರಸ್ತೆ ನಿಂತು ಸಂಚಾರ ಮಾಡದಂತೆ ಹೇಳು ಎಂದು ಉಡಾಫೆ ಮಾತಾಡಿದ್ದು, ಸೆಕ್ಷನ್ ಆಫೀಸರ್ ನಡೆ ಸರಿಯಲ್ಲ ಎಂದು ಮತ್ತು ಮೇಲಾಧಿಕಾರಿಗಳು ಶರಣಗೌಡ ಅವರ ಮೇಲೆ ಶಿಸ್ತುಕ್ರಮಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದ್ದಾರೆ. ಅಲ್ಲದೆ ವಿದ್ಯುತ್ ಹರಿದು ಬಿದ್ದಿದ್ದರೂ ಶಾಲಾ ಮಕ್ಕಳು, ನಾಗರಿಕರು ಎಂದು ಅದನ್ನು ದಾಟುತ್ತಾ ತಿರುಗುತ್ತಿದ್ದಾರೆ. ದ್ವಿಚಕ್ರ ವಾಹನ ಸವಾರರು ಹಾಗೇ ವೈಯರ್ ಮೇಲೆ ಸಂಚರಿಸುತ್ತಿದ್ದು, ಯಾವುದೇ ಅನಾಹುತ ನಡೆದರೆ ಆ ಅಧಿಕಾರಿ ಮತ್ತು ಜೆಸ್ಕಾಂ ನಿಗಮವೇ ನೇರ ಹೊಣೆಯಾಗಲಿದೆ ಎಂದ ಅವರು, ಕೂಡಲೇ ಉಡಾಫೆ ಮಾತಾಡಿದ ಶರಣಗೌಡ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕು. ಕೂಡಲೇ ದಾರಿಗೆ ಬಿದ್ದ ವಿದ್ಯುತ್ ತಂತಿಗಳಿ, ಕಂಬಗಳು ಸರಿಪಡಿಸಬೇಕು. ಇಲ್ಲವಾದಲ್ಲಿ ಬಡಾವಣೆ ನಾಗರಿಕರು ಮತ್ತು ಶಾಲಾ ವಿದ್ಯಾರ್ಥಿಗಳೊಂದಿಗೆ ಮತ್ತು ಇತರೆ ಸಂಘಟನೆಗಳೊಂದಿಗೆ ಜೆಸ್ಕಾಂ ಕಚೇರಿ ಎದುರು ಧರಣಿ ನಡೆಸಲಾಗುವದೆಂದು ಎಚ್ಚರಿಸಿದ್ದಾರೆ.





