ಪ್ರಮುಖ ಸುದ್ದಿಬಸವಭಕ್ತಿ

ಶಬರಿಮಲೈ ಸುಕ್ಷೇತ್ರ ದರ್ಶನ ಪಡೆದ ದರ್ಶನಾಪುರ

ಕರುನಾಡಿಗೆ ಮಳೆ, ಬೆಳೆ ಸಮೃದ್ಧತೆ ಕಲ್ಪಿಸುವಂತೆ ಪ್ರಾರ್ಥನೆ - ದರ್ಶನಾಪುರ

ಶಬರಿಮಲೈ ಸುಕ್ಷೇತ್ರ ದರ್ಶನ ಪಡೆದ ದರ್ಶನಾಪುರ

ಕರುನಾಡಿಗೆ ಮಳೆ, ಬೆಳೆ ಸಮೃದ್ಧತೆ ಕಲ್ಪಿಸುವಂತೆ ಪ್ರಾರ್ಥನೆ – ದರ್ಶನಾಪುರ

ವಿನಯವಾಣಿ ಸಮಾಚಾರ
ಶಹಾಪುರ: ಶಬರಿಮಲೆ ಸುಕ್ಷೇತ್ರದ ಶ್ರೀ ಅಯ್ಯಪ್ಪ ಸ್ವಾಮಿ ದರ್ಶನ ಭಾಗ್ಯ ದೊರೆಯವುದೇ ಒಂದು ಅದ್ಭುತ ಶಕ್ತಿ. ಸುಕ್ಷೇತ್ರದ ಸನ್ನಧಿ ತಲುಪುತ್ತಿದ್ದಂತೆ ರೋಮಾಂಚನ ಮನದಲ್ಲಿ ಏನೋ ಖುಷಿ ಆಗುತ್ತದೆ ಎಂದು ಮಾಜಿ ಸಚಿವ, ಶಹಾಪುರ ಕ್ಷೇತ್ರದ ಶಾಸಕ ಶರಣಬಸಪ್ಪಗೌಡ ದರ್ಶನಾಪುರ ತಮ್ಮ ಮನದಾಳದ ಮಾತನ್ನು ವಿನಯವಾಣಿಯೊಂದಿಗೆ ಹಂಚಿಕೊಂಡರು.

ಜಾಹಿರಾತು

ಕೇರಳದ ಶಬರಮಲೆ ಶ್ರೀ ಅಯ್ಯಪ್ಪ ಸ್ವಾಮಿ ದರ್ಶನ ಪಡೆದ ಅವರು, ಕರ್ನಾಕಟ ರಾಜ್ಯದಲ್ಲಿ ಉತ್ತಮ‌ ಮಳೆ, ಬೆಳೆ ಸಮೃದ್ಧವಾಗಿರಲಿ. ರೈತಾಪಿ ಸಂಕಷ್ಟ ದೂರವಾಗಲಿ. ಸರ್ವರೂ ಆರೋಗ್ಯ‌ಯುತ ಬದುಕು ಸಾಗಿಸಲಿ ಎಂದು ಪ್ರಾರ್ಥನೆ ಸಲ್ಲಿಸಿದ್ದೇವೆ ಎಂದರು.
ಯುವ ಉದ್ಯಮಿ ಗುರು ಮಣಿಕಂಠ ಮಾತನಾಡಿ, ದರ್ಶನಾಪುರ ಸಾಹೇಬರೇ ಶ್ರೀ ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ಹೋಗೋಣವೆಂದಾಗ, ನನಗೆ ಎಲ್ಲಿಲ್ಲದ ಸಂತಸವಾಯಿತು. ವಾರದಿಂದಷ್ಟೆ ನಾನು ಕುಟುಂಬ ಸಮೇತ ದರ್ಶನ ಪಡೆದಿದ್ದೆ, ಸ್ವಾಮಿಯ ಪ್ರಸಾದ ಕೊಡಲು ಸಾಹೇಬರ ಹತ್ರ ಹೋದಾಗ, ಅವರೇ ಸ್ಚಾಮಿ ದರ್ಶನಕ್ಕೆ ಆ.27 ಕ್ಕೆ ಹೋಗೋಣವೆಂದು ಆಗಿಂದಾಗೆ ಟಿಕೆಟ್ ಬುಕ್ ಮಾಡಿಸಿಯೇ ಬಿಟ್ಟರು. ಹಿಗಾಗಿ ವಾರದಲ್ಲಿ ಎರಡು ಬಾರಿ ದರ್ಶನ ಪಡೆದ ಭಾಗ್ಯ ನನ್ನದಾಯಿತು. ಸಾಹೇಬರು ಅಯ್ಯಪ್ಪ ಸ್ವಾಮಿ ಸನ್ನಿಧಿಯಲ್ಲಿ ಎನೋ ಸಮಾಧಾನವಿದೆ. ಯಾವುದೋ ಶಕ್ತಿ ಇಲ್ಲಿರುವ ಕಾರಣ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಇಲ್ಲಿಗೆ ಬರುತ್ತಾರೆ. ಪ್ರಕೃತಿ ಮಧ್ಯದಲ್ಲಿ ಇರುವ ಸನ್ನಿಧಿ, ಇಲ್ಲಿಗೆ ಶ್ರದ್ಧಾ ಭಕ್ತಿಯಿಂದ ಹರಕೆಹೊತ್ತು ಬರುವ ಭಕ್ತಾಧಿಗಳು ಅವರ ಭಕ್ತಿಪೂರ್ವಕ ಘೋಷಣೆಗಳು ಎಲ್ಲವೂ ಪುಳಕಿತಗೊಳಿಸುತ್ತದೆ ಎನ್ನುತ್ತಾರೆ ಭಕ್ತ ಗುರು ಮಣಿಕಂಠ. ಸ್ವಾಮಿ ದರ್ಶನ ಪಡೆದು ಸಾಹೇಬರ ಜೊತೆ ವಾಪಸ್ ಮರಳುತ್ತಿದ್ದೇವೆ. ಕ್ಷೇತ್ರದ ಜನತೆಗೆ ಒಳಿತಾಗಲಿ. ನಮ್ಮ ಸಾಹೇಬ್ರಿಗೆ ಜನಸೇವೆ ಮಾಡುವ ಇನ್ನಷ್ಟು ಶಕ್ತಿ,‌ಆರೋಗ್ಯ ಅಯ್ಯಪ್ಪ ಸ್ವಾಮಿ ಕಲ್ಪಿಸಲಿ ಎಂದರು. ಆಪ್ತ ಸಹಾಯಕ‌ ಶಿವಶರಣ ಇಟಗಿ ಮತ್ತು ಓಕಳಿ ಅವರು ಜೊತೆಗಿದ್ದರು.

ಕರ್ನಾಟಕ‌ದ ರೈತಾಪಿ ಜನರನ್ನು ಸಂಕಷ್ಟದಿಂದ ಪಾರು ಮಾಡಲಿ. ರಾಜ್ಯಕ್ಕೆ ಉತ್ತಮ‌ ಮಳೆ, ಬೆಳೆ, ಸಮೃದ್ಧತೆಯನ್ನು ಭಗವಂತ ಅಯ್ಯಪ್ಪ ಸ್ವಾಮಿ ಕಲ್ಪಿಸಲಿ.
– ಶರಣಬಸಪ್ಪಗೌಡ ದರ್ಶನಾಪುರ. ಶಾಸಕರು, ಶಹಾಪುರ, ಯಾದಗಿರಿ ಜಿಲ್ಲೆ.

Related Articles

Leave a Reply

Your email address will not be published. Required fields are marked *

Back to top button