ಯಾದಗಿರಿ ಜಿಲ್ಲೆಗೆ ಅಂಟಿಕೊಂಡ ಕೋವಿಡ್ ಶನಿ.! ಇಂದು ದ್ವಿಶತಕ ಬಾರಿಸಿದ ಕೊರೊನಾ
ಯಾದಗಿರಿ ಜಿಲ್ಲೆಗೆ ಅಂಟಿಕೊಂಡ ಕೋವಿಡ್ ಶನಿ.! ಇಂದು ದ್ವಿಶತಕ ಬಾರಿಸಿದ ಕೊರೊನಾ
ಯಾದಗಿರಿಃ ಜಿಲ್ಲೆಯಲ್ಲಿ ಶನಿವಾರ ಒಂದೇ ದಿನ ಮಾಹಾಮರಿ ಕೊರೊನಾ ದ್ವಿಶತಕ ಬಾರಿಸುವ ಮೂಲಕ ಕೋವಿಡ್ ಲಗ್ಗೆ ಇಟ್ಟಾಗಿನಿಂದ ಇದೇ ಮೊದಲ ಬಾರಿಗೆ 24 ಗಂಟೆಯಲ್ಲಿ 200 ಸೋಂಕಿತರು ಪತ್ತೆಯಾಗಿದೆ.
ಶಹಾಪುರ ತಾಲೂಕಿನಲ್ಲಿ 56 ಕ್ಕೂ ಹೆಚ್ಷು ಪ್ರಕರಣಗಳು ಶನಿವಾರ ಒಂದೇ ದಿನ ಪತ್ತೆ ಹಚ್ಚಲಾಗಿದೆ. ಶಹಾಪುರ ಪಟ್ಟಣದ ಇಂದಿರಾ ನಗರ, ಬಸವೇಶ್ವರ ನಗರ ಸೇರಿದಂತೆ ಗ್ರಾಮೀಣ ಭಾಗದಲ್ಲೂ ಮಹಾಮಾರಿ ಅಟ್ಟಹಾಸ ಮುಂದುವರೆದಿದೆ.
ಕೊರೊನಾಗೆ ಶನಿವಾರವು ಜಿಲ್ಲೆಯಲ್ಲಿ ಇಬ್ಬರು ಮೃತ ಮಟ್ಟಿದ್ದು, ಒಟ್ಟು ಮೃತಪಟ್ಟವರ ಸಂಖ್ಯೆ 16 ಕ್ಕೇರಿದೆ. ದಿನೇ ದಿನೇ ಕೋವಿಡ್ ಪ್ರಕರಣಗಳು ಗಣನೀಯವಾಗಿ ಏರಿಕೆಯಾಗುತ್ತಿದ್ದು, ಕೆಲವರಲ್ಲಿ ಆತಂಕ ಉಂಟು ಮಾಡಿದರೆ, ಇನ್ನು ಕೆಲವರು ಉಡಾಫೆ ಮಾಡುವ ಮೂಲಕ ನಿರ್ಲಕ್ಷವಹಿಸುತ್ತಿರುವದು ಕಂಡು ಬರುತ್ತಿದೆ.
ಕೆಲವರು ವಯಸ್ಸಾದವರಿಗಷ್ಟೆ ಸಮಸ್ಯೆ ನಮಗೇನಾಗುವದಿಲ್ಲ ಎಂದರೆ, ಇನ್ನೂ ಕೆಲವರು ಕೊರೊನಾ ತೀವ್ರತೆ ಗಮನಿಸಿ ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಒಟ್ಟಾರೆ ಈ ಮಹಾಮಾರಿ ಮಾತ್ರ ಬೆಂಬಿಡುವ ಲಕ್ಷಣಗಳು ಕಾಣುತ್ತಿಲ್ಲ. ಆದಷ್ಟು ಪ್ರತಿಯೊಬ್ಬರು ಮುನ್ನೆಚ್ವರಿಕೆವಹಿಸಿದಾಗ ಮಾತ್ರ ಇದು ಒಂದಿಷ್ಟು ತಹಬಂದಿಗೆ ಬರಲಿದೆ ಎನ್ನಬಹುದು.




