ಪ್ರಮುಖ ಸುದ್ದಿ
ಜಾರಕಿಹೊಳಿಯನ್ನ ‘ಕೈ’ ಬಿಡಬಾರದಿತ್ತು ಹೆಬ್ಬಾಳಕರ್ ವ್ಯಂಗ್ಯ
ಜಾರಕಿಹೊಳಿಯನ್ನ ‘ಕೈ’ ಬಿಡಬಾರದಿತ್ತು ಹೆಬ್ಬಾಳಕರ್ ವ್ಯಂಗ್ಯ
ಬೆಳಗಾವಿಃ ರಮೇಶ ಜಾರಕಿ ಹೊಳೆ ಅವರನ್ನು ಇಷ್ಟು ಬೇಗ ಕೈ ಬಿಡಬಾರದಿತ್ತು ಎಂದು ಕಾಂಗ್ರೆಸ್ ನಾಯಕಿ ಲಕ್ಷ್ಮೀ ಹೆಬ್ಬಾಳಕರ್ ವ್ಯಂಗ್ಯವಾಗಿ ಮಾಧ್ಯಮಕ್ಕೆ ಹೇಳಿಕೆ ನೀಡಿದ್ದಾರೆ ಎನ್ನಲಾಗುತ್ತಿದೆ.
ನಗರದಲ್ಲಿ ಮಾಧ್ಯಮಕ್ಕೆ ಹೇಳಿಕೆ ನೀಡಿದ ಅವರು, ರಮೇಶ ಜಾರಕಿಹೊಳಿ ಅವರನ್ನು ಕಾಂಗ್ರೆಸ್ ಸಚಿವ ಸ್ಥಾನ ನೀಡದೆ ಕಡೆಗಣಿಸಿದೆ. ಇಷ್ಟು ಬೇಗ ಕೈ ಬಿಟ್ಟಿರುವದು ಸರಿಯಲ್ಲ ಎಂಬಂತೆ ಕುಹಕವಾಗಿ ಹೇಳಿದ್ದಾರೆ ಎಂದು ಕಾಂಗ್ರೆಸ್ ವಲಯದಲ್ಲಿ ಬೆಳಗಾವಿಯಲ್ಲಿ ಬಿಸಿ ಬಿಸಿ ಚರ್ಚೆಗೆ ಗ್ರಾಸವಾಗಿದೆ.
ರಾಜ್ಯ ಸರ್ಕಾರದಲ್ಲಿ ನಡೆದ ಸಚಿವ ಸಂಪುಟ ವಿಸ್ತರಣೆ ಯಲ್ಲಿ ರಮೇಶ ಜಾರಕಿಹೊಳೆ ಅವರಿಗೆ ಸಚಿವ ಸ್ಥಾನ ಕೈ ತಪ್ಪಿರುವ ಹಿನ್ನೆಲೆಯಲ್ಲಿ
ಕಾಂಗ್ರೆಸ್ ನಾಯಕಿ ಲಕ್ಷ್ಮೀ ಹೆಬ್ಬಾಳಕರ್ ಈ ರೀತಿ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.