ಸದಾಶಿವ ಆಯೋಗ ಜಾರಿಗೆ 3 ತಿಂಗಳ ಗಡವು ಹೋರಾಟಕ್ಕೆ ಸನ್ನದ್ಧ
ಮೈತ್ರಿ ಸರ್ಕಾರದಿಂದ ಮಾದಿಗ ಸಮಾಜಕ್ಕೆ ಅನ್ಯಾಯ-ಎಂ.ಶಂಕ್ರಪ್ಪ
ಯಾದಗಿರಿಃ ಹಿಂದುಳಿದ ಹಾಗೂ ಮೇಲ್ಜಾತಿಯ ಬಲಾಢ್ಯ ಸಮುದಾಯವನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಮೀಸಲಾತಿಯಡಿ ಸೇರ್ಪಡೆಗೊಳಿಸುವ ಮೂಲಕ ಮೂಲ ಅಸ್ಪೃಶ್ಯರ ಅಭಿವೃದ್ಧಿ ಕುಂಟಿತಗೊಳ್ಳುತ್ತಿದೆ ಎಂದು ಮಾದಿಗ ದಂಡೋರ ಸಮಿತಿ ರಾಜ್ಯಧ್ಯಕ್ಷ ಎಂ.ಶಂಕ್ರಪ್ಪ ಆರೋಪಿಸಿದರು.
ರವಿವಾರ ಜಿಲ್ಲೆಯ ಶಹಾಪುರ ನಗರಕ್ಕೆ ಆಗಮಿಸಿದ ಅವರು, ಇಲ್ಲಿನ ಪ್ರವಾಸಿ ಮಂದಿರದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ, ಹೊಲೆಯ ಮಾದಿಗ ಸಮುದಾಯಗಳಿಗೆ ಸಿಗಬೇಕಾದ ಪಾಲು ಇಂದು ಸವರ್ಣಿಯರ ಮುಡಿ ಹೇರಿದೆ. ದೇಶದಲ್ಲಿ ಸಾಮಾಜಿಕ ನ್ಯಾಯವನ್ನೇ ಮರೆತ ಜನ ಪ್ರತಿನಿಧಿಗಳು ಮಾದಿಗ ಸಮುದಾಯವನ್ನು ತೀರ ಕಡೆಗಣಿಸಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಾತ್ಯಾತೀತ ತತ್ವ ಸಿದ್ಧಾಂತ ಹೇಳುವ ಜೆಡಿಎಸ್ ಮತ್ತು ಕಾಂಗ್ರೆಸ್ ಇಂದು ಮೈತ್ರಿ ಸರ್ಕಾರ ರಚಿಸಿದ್ದು, ಮಾದಿಗ ಸಮುದಾಯವನ್ನು ಕಡೆಗಣಿಸಿವೆ. ಇನ್ನೂ ಮೂರು ತಿಂಗಳಲ್ಲಿ ನ್ಯಾ.ಎ.ಜೆ.ಸದಾಶಿವ ಆಯೋಗ ವರದಿ ಜಾರಿಗೊಳಿಸಲು ಶಿಫಾರಸ್ಸು ಮಾಡದಿದ್ದಲ್ಲಿ ರಾಜ್ಯಾದಾದ್ಯಾಂತ ಕರ್ನಾಟಕ ಮಾದಿಗ ದಂಡೋರ ಸಮಿತಿ ಬೀದಿಗಿಳಿದು ಹೋರಾಟ ಮಾಡಲಿದೆ ಎಂದು ಎಚ್ಚರಿಸಿದರು.
ಇದೇ ಸಂದರ್ಭದಲ್ಲಿ ಎಲ್.ಹಾವನೂರ ವರದಿ ಅವೈಜ್ಞಾನಿಕವೆಂದು ಆಕ್ಷೇಪಗೊಳಿಸಿದ ಅವರು, ಹೊಲೆಯ ಸಮಾಜ ಅದನ್ನು ಜಾರಿಗೊಳಿಸವಲ್ಲಿ ಪ್ರಯತ್ನಗೊಳಿಸಲಾಗಿಲ್ಲ. ಆದರೆ ಅಂದು ಸರ್ಕಾರ ಹಾವೂನೂರ ವರದಿ ಒಪ್ಪಿಕೊಂಡು ನ್ಯಾ.ಸದಾಶಿವ ಆಯೋಗ ರಚನೆ ಮಾಡಿ ರಾಜ್ಯದಲ್ಲಿ ಜಾತಿ ಸಮೀಕ್ಷೆ ಮಾಡುವದರ ಮುಖಾಂತರ ಮೀಸಲಾತಿ ವರ್ಗಿಕರಣದ ಮಾಹಿತಿ ನೀಡಿತ್ತು. ಎಸ್.ಸಿ.ಎಸ್.ಟಿ. ಮೀಸಲಾತಿಯಡಿ ನೂರಾರು ಜಾತಿಗಳು ಸೇರ್ಪಡೆಗೊಂಡು ಇಂದು ಅವರೇ ಶಾಸಕರಾಗುವ ಮೂಲಕ ಮೀಸಲಾತಿಯಡಿ ಸಿಂಹಪಾಲು ತಮ್ಮದಾಗಿಸಿಕೊಂಡಿವೆ.
ಮಾದಿಗ ಸಮುದಾಯದ ಆದಿ ಜಾಂಬವ ಅಭಿವೃದ್ಧಿ ನಿಗಮ ರಚನೆಯಾದರೂ ಯಾವುದೇ ಹಣ ಬಿಡುಗಡೆಗೊಳಿಸದ ಇನ್ನೂ ಕಾರ್ಯಪ್ರವೃತ್ತಿಗೆ ಬಂದಿಲ್ಲ. ಪ್ರಸ್ತುತ ಸರ್ಕಾರ ಬ್ರಾಹ್ಮಣರ ಅಭಿವೃದ್ಧಿ ನಿಗಮ ಸ್ಥಾಪಿಸಿ ಕೋಟಿಗಟ್ಟಲೇ ಹಣ ಮಂಜೂರು ಮಾಡುತ್ತದೆ. ಆದರೆ ಮಾದಿಗರ ಅಭಿವೃದ್ಧಿಗೆ ಹಣ ನೀಡದೆ ನಿಗಮ ಅನುಷ್ಠಾನವಾಗದೆ ಹಾಗೇ ಉಳಿದಿದೆ ಇದು ವಪರ್ಯಾಸವಲ್ಲದೆ ಇನ್ನೇನು ಎಂದು ಬೇಸರ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ದಂಡೋರ ಸಮಿತಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರಕಾಶ, ಜಂಟಿ ಕಾರ್ಯದರ್ಶಿ ವೆಂಕಟೇಶ ಆಲೂರ, ಬೆಂಗಳೂರ ಗ್ರಾಮಾಂತರ ಜಿಲ್ಲಾಧ್ಯಕ್ಷ ರಾಜಶೇಖರ, ಇಲ್ಲಿನ ತಾಲೂಕಾ ಅದ್ಯಕ್ಷ ಬಸವರಾಜ ನಾಯ್ಕಲ್, ಸಮಾಜದ ಮುಖಂಡರಾದ ಶಾಂತಪ್ಪ ಕಟ್ಟಿಮನಿ, ಸೋಪಣ್ಣ ದರಿಯಾಪುರ, ರುದ್ರಪ್ಪ ಹುಲಿಮನಿ, ವಕೀಲ ವಾಸುದೇವ ಕಟ್ಟಿಮನಿ, ರವಿಕುಮಾರ ಎದುರಮನಿ, ಸಿದ್ದಪ್ಪ ದೇವರಗೋನಾಲ್, ಭೀಮರಾಯ ರಸ್ತಾಪುರ, ಈರಗಪ್ಪ ಹೋತಪೇಟ, ಜೆಟ್ಟೆಪ್ಪ ಕೆಂಭಾವಿ, ಗುರು ದೊಡಮನಿ, ಹಯ್ಯಾಳಪ್ಪ ದೋರನಳ್ಳಿ, ನಿಂಗಣ್ಣ ಕದರಾಪುರ, ಶರಣಪ್ಪ ಕ್ಯಾತನಾಳ, ಮಲ್ಲಿನಾಥ ಆಂದೋಲಾ, ಬಸವರಾಜ ಗಣೇಕಲ್, ಭೀಮರಾಯ ಕಾಂಗ್ರೆಸ್, ವಿಜಯಕುಮಾರ ಎದುರಮನಿ, ಈರಪ್ಪ ಚಟ್ನಳ್ಳಿ, ಭೀಮರಾಯ ಕರಕಳ್ಳಿ ಸೇರಿದಂತೆ ಇತರರಿದ್ದರು.
ರೈತರನ್ನೆ ಅವಲಂಬಿಸಿದ ವೃತ್ತಿಪರರ ಸಾಲ ಮನ್ನಾ ಮಾಡಲಿ
ರಾಜ್ಯ ಸಮ್ಮಿಶ್ರ ಸರ್ಕಾರ ರೈತರ ಸಾಲ ಮನ್ನಾ ಮಾಡಲಿ ಬೇಡ ಎಂದವರಾರು. ಆದರೆ ಗ್ರಾಮೀಣ ಪ್ರದೇಶದಲ್ಲಿರುವ ರೈತರ ಮನೆಗೆಲಸ ಸೇರಿದಂತೆ ಕೃಷಿ ಚಟುವಟಿಕೆಗೆ ಆಸರೆಯಾಗಿ ನಿಲ್ಲುವ ಕೆಲವು ಸಣ್ಣಪುಟ್ಟ ಸಮುದಾಯಗಳಾದ ಮಡಿವಾಳರು, ಮಾದಿಗ ಸಮಾಜದ ಜನರ ಸಾಲ ಯಾರು ಮನ್ನಾ ಮಾಡಬೇಕು ಎಂದು ಮಾದಿಗ ದಂಡೋರ ಸಮಿತಿಯ ರಾಜ್ಯಧ್ಯಕ್ಷ ಎಂ.ಶಂಕ್ರಪ್ಪ ಖಾರವಾಗಿ ಪ್ರಶ್ನಿಸಿದರು.
ಗ್ರಾಮೀಣ ಭಾಗದಲ್ಲಿ ಮಾದಿಗ ಮತ್ತು ಅಗಸರು ವೃತ್ತಿಪರರಾಗಿದ್ದು, ಚರ್ಮಗಾರಿಕೆ ಕೆಲಸವನ್ನು ಮಾದಿಗ ಸಮುದಾಯ ಮಾಡುತ್ತಾ ಬಂದಿದ್ದು, ಗೌಡರು ಕೃಷಿಕರ ಬಟ್ಟೆ ಹೊಗೆಯುವ ಸೇರಿದಂತೆ ಇತರೆ ಕೆಲಸವನ್ನು ಅಗಸರು ಮಾಡುತ್ತಾ ಬಂದಿದ್ದು, ರೈತರ ಮೇಲೆ ಅವಲಂಬಿತ ಬದುಕು ಸಾಗಿಸುವ ಇಂಥಹ ಚಿಕ್ಕ ಸಮುದಾಯಗಳು ಹೇಗೆ ಬದುಕಬೇಕು.
ವರ್ಷವಿಡಿ ಕೃಷಿಕರ ಮನೆಗೆಲಸ ಮಾಡಿ, ವರ್ಷಕ್ಕೊಮ್ಮೆ ದವಸ ಧಾನ್ಯಗಳನ್ನು ದಾನರೂಪದಿ ಪಡೆಯುವ ಈ ಸಮುದಾಯಗಳ ಬದುಕು ಜೀವನ ಸ್ಥಿತಿ ಹೇಗಿರಬೇಡ.
ಸಾಕಷ್ಟು ಜಮೀನು ಹೊಂದಿದ್ದ ಕೃಷಿಕರ ಸಾಲ ಮನ್ನಾ ಮಾಡಲಾಗುತ್ತಿದೆ. ಆದರೆ ಕೃಷಿಕರನ್ನೆ ನಂಬಿ ಅವರ ಮೇಲೆ ಅವಲಂಬಿತವಿದ್ದ ಮಾದಿಗ ಮತ್ತು ಮಡಿವಾಳ ಸಮಾಜದ ಸಾಲ ಯಾರು ಮನ್ನಾ ಮಾಡಬೇಕು. ಕೃಷಿಕರೇ ಸಾಲದ ಕೂಪದಲ್ಲಿ ಬಿದ್ದಿರುವಾಗ ಅವರನ್ನು ಅವಲಂಬಿಸಿ ಬದುಕು ನಡೆಸುವ ಈ ಸಮುದಾಯಗಳ ಸ್ಥಿತಿ ಬಗ್ಗೆ ಚಿಂತನೆ ಮಾಡಿ. ದಯವಿಟ್ಟು ರೈತರ ಸಾಲ ಮನ್ನಾ ಜೊತೆ ಈ ಚಿಕ್ಕ ಸಮುದಾಯಗಳ ಅವಲಂಬಿತ ವೃತ್ತಿಪರ ಸಮುದಾಯಗಳ ಸಾಲವು ಮನ್ನಾ ಮಾಡಬೇಕೆಂದು ಆಗ್ರಹಿಸಿದರು.
ದಲಿತ ನಾಯಕರಿಗೆ ಪುತ್ರ ವ್ಯಾಮೊಹ ಆರಂಭವಾಗಿದ್ದು, ಸಮಾಜಕ್ಕಿಂತ ತಮ್ಮ ಮಕ್ಕಳ ಸ್ಥಾನಮಾನಗಳು ಮುಖ್ಯವಾಗಿವೆ. ಡಾ.ಬಿ.ಆರ್.ಅಂಬೇಡ್ಕರ, ಬುದ್ದರ ಹೆಸರೇಳುವ ಖರ್ಗೆಯವರು ಸಮುದಾಯಕ್ಕೆ ನೀಡಿದ ಕೊಡುಗೆಗಳೇನು.? ಪಕ್ಷ ದೊಡ್ಡದು ಎಂದು ಹೇಳುವ ದಲಿತ ನಾಯಕರು ಎಸ್.ಸಿ. ಜನಾಂಗಗಳ ಅಭಿವೃದ್ಧಿಗೆ ಶ್ರಮಿಸಿದ್ದಾರಾ.? ಯುವ ಶಕ್ತಿ ಗಮನಿಸುತ್ತಿದ್ದಾರೆ. ಮುಂಬರುವ ದಿನಗಳಲ್ಲಿ ಯುವ ಶಕ್ತಿ ಎದ್ದು ನಿಲ್ಲಲಿದೆ.
-ಎಂ.ಶಂಕ್ರಪ್ಪ ರಾಜ್ಯಧ್ಯಕ್ಚ ಕಮಾದಂಸ.