ವಿನಯ ವಿಶೇಷ

ಹುಣಸಗಿಯ ಪೂರ್ವನಾಮ ಯಾವುದು ಗೊತ್ತೆ..? ಈ ವಿವೇಚನಾ ಲೇಖನ ಓದಿ

ಹುಣಸಗಿಯ ಪೂರ್ವನಾಮ “ವಿಕ್ರಮಪುರ”-ಒಂದು ಅವಲೋಕನ ಬರಹ

-ಪಾಟೀಲ ಬಸನಗೌಡ ಹುಣಸಗಿ
 9900771427
ಒಂದು ನೆಲದ ಸ್ಥಳನಾಮವನ್ನು ಅರಿಯಲು ನಾವು ವ್ಯಕ್ತಿ ಹಿನ್ನೆಲೆ, ಧಾರ್ಮಿಕ ಹಿನ್ನೆಲೆ, ನೈಸರ್ಗಿಕ ಹಿನ್ನೆಲೆ, ವಸ್ತು ಹಿನ್ನೆಲೆ, ಪ್ರಾಣಿಗಳ ಹಿನ್ನೆಲೆಯಲ್ಲಿಯೂ ಗಮನಿಸಬೇಕು. ಜೊತೆಗೆ ಆ ಪರಿಸರದಲ್ಲಿ ದೊರೆತ ಶಾಸನಗಳು ಬಹುಮುಖ್ಯ ಪಾತ್ರವಹಿಸುತ್ತವೆ. ರಾಜ ಮಹಾರಾಜರ ಕಾಲದಲ್ಲಿ ಸಿಕ್ಕ ಶಾಸನಗಳನ್ನು ಹುಡುಕಿದಾಗ ಸ್ಪಷ್ಟ ಗ್ರಾಮನಾಮಗಳು ವೇದ್ಯವಾಗುತ್ತವೆ. ಹುಣಸಗಿಯಲ್ಲಿ ದೊರೆತ ಕಲ್ಯಾಣ ಚಾಲುಕ್ಯರ ಕಾಲದ ಶಾಸನಗಳಲ್ಲಿ ವಿಕ್ರಮಪುರ ಗ್ರಾಮನಾಮವನ್ನು ಕಾಣುತ್ತೇವೆ.

ಹಾಗಿದ್ದರೆ ಈ ವಿಕ್ರಮಪುರ ಯಾವುದು? ಹುಣಸಗಿಗೆ ವಿಕ್ರಮಪುರ ಹೆಸರು ಬರಲು ಯಾರು ಕಾರಣ? ಹೀಗಾಗಿ ನಾನು ಕಲ್ಯಾಣ ಚಾಲುಕ್ಯ ಪೂರ್ವದ ಬಾದಾಮಿ ಚಾಲುಕ್ಯರು, ರಾಷ್ಟ್ರಕೂಟರ ಕಾಲದ ಶಾಸನಗಳನ್ನು ಅವಲೋಕಿಸಿದಾಗ ಎಲ್ಲಿಯೂ ವಿಕ್ರಮಪುರದ ಉಲ್ಲೇಖ ದೊರೆಯಲಿಲ್ಲ. ಆದರೆ ವಿಕ್ರಮಪುರವೆಂಬ ಹೆಸರು ಬಾಗಲಕೋಟ ಜಿಲ್ಲೆಯ ಹುನಗುಂದ ತಾಲೂಕಿನ “ಅರಸೀಬೀದಿ” ಗ್ರಾಮದ ಮೂಲ ಹೆಸರಾಗಿತ್ತು. ಎಂದು ತಿಳಿಯುತ್ತದೆ.

ಕಲ್ಯಾಣ ಚಾಲುಕ್ಯ ಚಕ್ರವರ್ತಿ ಜಗದೇಕಮಲ್ಲ ಬಿರುದಾಂಕಿತ 2ನೇ ಜಯಸಿಂಹ(1015-1043) ಅಕ್ಕ ರಾಣಿ ಅಕ್ಕಾದೇವಿಯು ಕಿಸುಕಾಡು-70ನ್ನು (ಹುನಗುಂದ ಹಾಗೂ ರೋಣ ತಾಲೂಕಿನ ಪ್ರದೇಶ) ಅರಸಿಬೀದಿಯ ಪ್ರತಿನಾಮವಾದ ವಿಕ್ರಮಪುರವನ್ನು ಆಳುತ್ತಿದ್ದಳು. ಹೀಗಾಗಿ ಹುಣಸಗಿಯ ಪ್ರತಿನಾಮ ವಿಕ್ರಮಪುರಕ್ಕೂ ಪೂರ್ವದಲ್ಲೇ ಹುನಗುಂದ ತಾಲೂಕಿನ ಅರಸೀಬೀದಿಗೆ ವಿಕ್ರಮಪುರವೆಂದು ಕರೆಯಲಾಗುತ್ತಿತ್ತು.

ವಿಕ್ರಮಪುರ ಎಂಬ ಹೆಸರು ಬರಲು ಮುಖ್ಯ ಕಾರಣ 6ನೇ ವಿಕ್ರಮಾದಿತ್ಯ. ಆತನ ಹೆಸರನ್ನೇ ಹುಣಸಗಿಗೆ ಇಡಲಾಗಿತ್ತೆಂದು ತಿಳಿಯುತ್ತದೆ. ಕಲ್ಯಾಣ ಚಾಲುಕ್ಯ ಚಕ್ರವರ್ತಿ ತ್ರಿಭುವನಮಲ್ಲ ಬಿರುದಾಂಕಿತ 6ನೇ ವಿಕ್ರಮಾದಿತ್ಯನು ಚಾಲುಕ್ಯ ವಂಶದಲ್ಲಷ್ಟೇ ಅಲ್ಲದೆ ಕರ್ನಾಟಕದ ಅನೇಕ ಆಳರಸರಲ್ಲಿ ಅಗ್ರಗಣ್ಯ ಎನಿಸಿದ್ದಾನೆ. ಕ್ರಿ.ಶ.1076 ರಿಂದ ಕ್ರಿ.ಶ.1126ರವರೆಗೆ 50 ವರ್ಷಗಳ ಸುದೀರ್ಘ ಆಡಳಿತ ನಡೆಸಿದ ಕೀರ್ತಿ ಈತನದು.

ಕ್ರಿ.ಶ.1076 ರಲ್ಲಿ ಪಟ್ಟವೇರಿದ ಈತನು ತನ್ನ ವಿಕ್ರಮಾದಿತ್ಯ ಹೆಸರಿನಲ್ಲೇ ಚಾಲುಕ್ಯ ವಿಕ್ರಮ ಶಕವೆಂಬ ಹೊಸ ಸಂವತ್ಸರವನ್ನೇ ಪ್ರಾರಂಭಿಸಿದ. ಈತನಿಗೆ 23 ಜನ ಹೆಂಡತಿಯರಿದ್ದರೆಂದು ಶಾಸನಗಳಿಂದ ತಿಳಿದು ಬರುತ್ತದೆ. ವಿಶಾಲವಾದ ಸಾಮ್ರಾಜ್ಯದಲ್ಲಿ ವಿವಿಧ ಭಾಗಗಳಲ್ಲಿ ಈತನ ಹೆಂಡತಿಯರು ನೆಲೆ ನಿಂತಿದ್ದರು. ಇವರಲ್ಲಿ ಪಿರಿಯರಸಿ, ಪಿರಿಯರಸಿ ಪಟ್ಟಮಹಾದೇವಿ, ಪಟ್ಟಮಹಾದೇವಿ, ನೃಪಾಂಗನೆ, ಅರ್ಧಾಂಗಿನಿ, ವಿಶಾಲ ವಕ್ಷಸ್ಥಳ ನಿವಾಸಿನಿಯರೂ ಇದ್ದಾರೆ.

ತ್ರಿಭುವನಮಲ್ಲನಿಗೆ 23 ಜನ ಹೆಂಡತಿಯರು !! ಭಲೆ ರಸಿಕ ಅನ್ಸುತ್ತೆ !! ಒಂದೇ ಮನೆಯಲ್ಲಿ ಒಬ್ಬಳೇ ಹೆಂಡತಿಯನ್ನು ಸಂಭಾಳಿಸುವದು ಕಷ್ಟ . ಇಂತಹದರಲ್ಲಿ 23 ಜನ ಹೆಂಡತಿಯರನ್ನು ಹೇಗೆ ಸಂಭಾಳಿಸಿಯಾನು ?. ವಿಸ್ತಾರವಾದ ಸಾಮ್ರಾಜ್ಯಕ್ಕೆ ಅಧಿಪತಿಯಾದ ವಿಕ್ರಮಾದಿತ್ಯನು ಬೇರೆ ಬೇರೆ ಪ್ರದೇಶಗಳಲ್ಲಿ ವಿವಿಧ ಆಡಳಿತ ವಿಭಾಗಗಳಿಗೆ (ಂಜmiಟಿisಣಡಿಚಿಣioಟಿ ಆivisioಟಿ) ಹೆಂಡತಿಯರನ್ನು ನೇಮಿಸುತ್ತಿದ್ದನು. ಎಲ್ಲೆಲ್ಲಿ ಸಾಮ್ರಾಜ್ಯ ವಿಸ್ತಾರ ಮಾಡಿಕೊಳ್ಳುತ್ತ ಸಾಗುವನೋ ಅಲ್ಲೆಲ್ಲ ಒಬ್ಬೊಬ್ಬ ಹೆಂಡತಿಯನ್ನು ಆಡಳಿತ ವಿಭಾಗಕ್ಕೆ ಉಸ್ತುವಾರಿಯಾಗಿಸಿದ್ದನು.

23 ಜನ ಹೆಂಡತಿಯರಲ್ಲಿ ಮಲಯಮತಿ ದೇವಿಯು ಹುಣಸಗಿಯ ಕ್ರಿ.ಶ.1120ರ ಶಾಸನದಲ್ಲಿ ಅರ್ಧಾಂಗಿನಿ ವಿಶಾಲವಕ್ಷಸ್ಥಳ ನಿವಾಸಿನಿ, ಪಿರಿಯರಸಿ, ಪಟ್ಟಮಹಾದೇವಿ ಎಂದು ಹೊಗಳಿಸಿಕೊಂಡಿದ್ದಾಳೆ. ಹೀಗಾಗಿ ಈಕೆ ವಿಕ್ರಮಾದಿತ್ಯನಿಗೆ ಅತಿ ಪ್ರಿಯರಾಣಿ ಎಂದರೂ ತಪ್ಪಾಗಲಿಕ್ಕಿಲ್ಲ. ಅಂತೆಯೇ ವಿಕ್ರಮಾದಿತ್ಯನ ಹೆಸರಲ್ಲಿ ಅಗ್ರಹಾರವೊಂದನ್ನು ನಿರ್ಮಿಸಿ ಅದಕ್ಕೆ ವಿಕ್ರಮಪುರವೆಂಬ ಹೆಸರಿಟ್ಟಿರಬೇಕು.

ಕ್ರಿ,ಶ.1120ರ 63 ಸಾಲಿನ ಬೃಹತ್ ಶಾಸನವು ಚಾಲುಕ್ಯರ ಪ್ರಸಿದ್ಧ ದೊರೆ ಆರನೆಯ ವಿಕ್ರಮಾದಿತ್ಯನ ಕಾಲದಾಗಿದ್ದು, ವಿಕ್ರಮಾದಿತ್ಯನ ಪಟ್ಟದರಾಣಿ ಮಲಯಮತಿ ದೇವಿಯ ಸೌಂದರ್ಯ, ಸಂಪತ್ತು, ದಾನಗುಣ, ವಾಕ್ಚಾತುರ್ಯಗಳನ್ನು ಉಲ್ಲೇಖಿಸಲಾಗಿದೆ. ಹಾಗೆಯೇ ಮಲ್ಲಿಕಾರ್ಜುನ ಮತ್ತು ಕೇಶವ ದೇವರುಗಳ ಪೂಜೆ-ಪುನಸ್ಕಾರಕ್ಕೆಂದು ಭೂದಾನ ಮಾಡಿದ್ದನ್ನು ತಿಳಿಸುತ್ತದೆ.

“ಶ್ರೀಮತ್ರಿಭುವನಮಲ್ಲದೇವ ವಿಶಾಳವಕ್ಷಸ್ತಳ ನಿವಾಸಿನಿಯರಪ್ಪ ಶ್ರೀಮದಭಿನವ ಸರಸ್ವತಿ ಶ್ರೀ ಮತ್ಪಿರಿಯರಸಿ ತ್ರಿಭುವನಮಲ್ಲದೇವ ಪಟ್ಟಮಹಾದೇವಿ ಶ್ರೀಮತು ಮಲೆಯಮತಿದೇವಿಯರ ನಿತ್ಯಭೂಮಿದಾನ ಸವ್ರ್ವನಮಶ್ಯದಗ್ರಹಾರ ವಿಕ್ರಮತೀರ್ಥಹಾರನೊಳವೆ @ ಶ್ರೀ ಸ್ವಸ್ತಿ ಸಮಧಿಗತ ಪಂಚಮಹಾಶಬ್ದ ಮಹಾಸಾಮನ್ತಾಧಿಪತಿ ಮಹಾಪ್ರಚಣ್ಡನಾಯ ಕಂ ವೈರಿಭಯದಾಯ ಗೋತ್ರಪವಿತ್ರ ಪರನಾರೀಪುತ್ರಂ ಭ್ರಿತ್ಯಚಿನ್ತಾಮಣಿ ಸುಭಟಶಿರೋಮಣಿ ಬುಧಜನಲೀಲಾನನ್ದನ ಪುಣ್ಯ ಘಿ ಘಿ ಘಿ ಘಿ ವ್ರ್ವಧಿಕ ಸಮುದ್ಧರಣ ಗುಣಗಣಾಳಂಕಂರಣಂ ವಿಭು ಮಣಿ ಮಾಳಿಕಾದ್ಯನೇಕ ರತ್ನಖಚಿತಕನಕದಣ್ಡಹಸ್ತ ಶ್ರೀಮತ್ರಿಭುವನಮಲ್ಲದೇವರ ಪಾದಾರಾಧಕಂ ಪರಮಬಳಸಾಧಕ ಶ್ರೀ ಮಾಣಿಕ್ಯಭಂಡಾರಿಗಂ ಮಹಾವಡಿಯರಂ ಧವಳಪಯ್ಯಂ ನಾಯಕರಮಗಂ ಶ್ರೀಮಲ್ಲಪಯ್ಯದಣ್ಡನಾಯಕರು ಶ್ರೀಚಾಲುಕ್ಯ ವಿಕ್ರಮಕಾಲದನೆಯ ಶಾವ್ರ್ವರಿ ಸಂವತ್ಸರದ ಅಶ್ವೀಜದಮಾವಾಸೆ ಆದಿತ್ಯವಾರದಂದು ಸೂಯ್ರ್ಯಗ್ರಹಣ ನಿಮಿತ್ತದಿಂ ತಮ್ಮಯ್ಯಂ ಧವಳಪಯ್ಯ ದಣ್ಡನಾಯಕಂ ಶ್ರೀಮಲ್ಲಿಕಾಜ್ರ್ಜುನ ದೇವಗ್ರ್ಗೆ ತಮ್ಮಜ್ಜ ಘಿ ಘಿ ರಸಿಯ ಶ್ರೀ ಕೇಶವದೇವಗ್ರ್ಗೆ ನಡೆವ ಮತ್ತರು ಶ್ರೀ ಕೇಶವದೇವಗ್ರ್ಗಂ ವಂಗಭೋಗ ಘಿ ನ್ರ್ನೋದ್ಧಾರಕ್ಕಂ ವಿಕ್ರಮಪುರದಲು ಬಾಸುದೇವಭಟ್ಟೋಪಾಧ್ಯಾಯರ ಕಯ್ಯಲಾರು ಗೋಂ ಘಿ ಘಿ ಧಾರಾಪೂವ್ರ್ವಕಂ ಮಾಡಿಬಿಟ್ಟ ಬಿಟ್ಟಿಯ ವ್ರಿತ್ತಿ ಒಂದು ಕದಪುರಿಯ ಕಾತಪ್ಪು ಘಿ ಘಿ ಘಿ ಯ್ಯ ನಾಯಕರು ಕೊಟ್ಟ ದಾಸಿಮಯ್ಯ ನಾಯಕರ ಕಯ್ಯಲು ವಿಕ್ರಮ ಘಿ ಘಿ ಘಿ ಘಿ ಭಟ್ಟವ್ರಿತ್ತಿ 1 ಆಸಕಿಲ್ಲೆಯಲು ಬಿಟ್ಟ ವ್ರಿತ್ತಿ 1 ಅನ್ತು” ಎಂದು ಉಲ್ಲೇಖಿಸಿದೆ.

ಮಲಯಮತಿದೇವಿಯ ಸೌಂದರ್ಯ, ಸಂಪತ್ತು, ದಾನಗುಣ, ವಾಕ್ಚಾತುರ್ಯಗಳನ್ನು ಉಲ್ಲೇಖಿಸಲಾಗಿದೆ. ಹಾಗೆಯೇ ಮಲ್ಲಿಕಾರ್ಜುನ ಮತ್ತು ಕೇಶವ ದೇವರುಗಳ ಪೂಜೆ-ಪುನಸ್ಕಾರಕ್ಕೆಂದು ಭೂದಾನ ಮಾಡಿದ್ದನ್ನು ತಿಳಿಸುತ್ತದೆ.
ಹುಣಸಗಿ ಗ್ರಾಮದ ಪೂರ್ವನಾಮ “ವಿಕ್ರಮಪುರ” ಎಂಬುದನ್ನು ನಿರೂಪಿಸಲಿರುವ ಶಾಸನಗಳು ಹೀಗಿವೆ.

1) ಹುಣಸಗಿಯಲ್ಲಿ ದೊರೆತ ಕ್ರಿ.ಶ.1120ರ ಶಾಸನ
2) ಹುಣಸಗಿಯಲ್ಲಿ ದೊರೆತ ಕ್ರಿ.ಶ. 1136ರ ಶಾಸನ
3) ಮುದನೂರಿನಲ್ಲಿ ದೊರೆತ ಕ್ರಿ.ಶ. 1154 ರ ಶಾಸನ
4) ಶ್ರೀನಿವಾಪುರ(ಹುಣಸಗಿ ತಾ) ದಲ್ಲಿ ದೊರೆತ ಕ್ರಿ.ಶ.1181 ರ ಶಾಸನ.

ಹುಣಸಗಿಯಲ್ಲಿ ದೊರೆತ ಕ್ರಿ.ಶ.1120ರ ಶಾಸನ ಹಾಗೂ ಕ್ರಿ.ಶ.1136ರ ಶಾಸನದಲ್ಲಿ ವಿಕ್ರಮಪುರವೆಂಬ ಉಲ್ಲೇಖವಿದೆ. ಹಾಗೂ ಮುದನೂರಿನ ಕ್ರಿ.ಶ.1154ರ ಶಾಸನ ಹಾಗೂ ಶ್ರೀನಿವಾಸಪುರದ ಕ್ರಿ.ಶ.1181ರ ಶಾಸನದಲ್ಲಿ ಹುಣಸಗಿ ಎಂದು ಉಲ್ಲೇಖಿಸಿದೆ. ಹೀಗಾಗಿ ಕ್ರಿ.ಶ. 1120 ರಿಂದ ಮುದನೂರಿನ ಕ್ರಿ.ಶ.1154ರಲ್ಲಿ ದೊರೆತ ಶಾಸನ ಕಾಲದವರೆಗೂ ಹುಣಸಗಿಯನ್ನು ವಿಕ್ರಮಪುರವೆಂದು ಕರೆಯಲಾಗುತ್ತಿತ್ತು.

ಹುಣಸಗಿಯ ಕ್ರಿ.ಶ.1120 ರ ಶಾಸನ ಹಾಗೂ ಕ್ರಿ.ಶ.1136ರ ಶಾಸನಗಳಲ್ಲಿ ಹುಣಸಗಿ ಅಗ್ರಹಾರವಾಗಿತ್ತೆಂದು ತಿಳಿಯುತ್ತದೆ. ಕ್ರಿ.ಶ. 1127ರಲ್ಲಿ 6ನೇ ವಿಕ್ರಮಾದಿತ್ಯನ ಆಡಳಿತ ಕೊನೆಗೊಂಡ ತರುವಾಯ ಬಂದ 3ನೇ ಸೋಮೇಶ್ವರ(ಕ್ರಿ.ಶ.1127-ಕ್ರಿ.ಶ.1137) ಹಾಗೂ 2ನೇ ಜಗದೇಕಮಲ್ಲನ ಕಾಲದ(ಕ್ರಿ.ಶ. 1137-ಕ್ರಿ.ಶ. 1143)ವರೆಗೆ ಹುಣಸಗಿಯನ್ನು ವಿಕ್ರಮಪುರವೆಂದೇ ಗುರುತಿಸಿದೆ. ಇವರ ತರುವಾಯ ಬಂದ 3ನೇ ತೈಲನ ಅವಧಿ ಕ್ರಿ.ಶ.1449 ರಿಂದ ಕ್ರಿ.ಶ.1162ರವರೆಗಿನ ಅವಧಿಯಲ್ಲಿ ಸಿಕ್ಕ ಮುದನೂರು ಹಾಗೂ ಶ್ರೀನಿವಾಸಪುರ ಶಾಸನಗಳಲ್ಲಿ ಹುಣಸಗಿ ಎಂದು ಉಲ್ಲೇಖಿಸಿದೆ.

6ನೇ ವಿಕ್ರಮಾದಿತ್ಯನು ಕೊನೆವರೆಗೂ ಕಲ್ಯಾಣವನ್ನೇ ರಾಜಧಾನಿಯನ್ನಾಗಿ ಮಾಡಿಕೊಂಡಿದ್ದರೂ ಇತರೆ ಕೆಲಕಡೆಗಳಲ್ಲಿ ವಾಸಿಸಿ ರಾಜ್ಯಭಾರ ಮಾಡಿದ್ದನೆಂದು ತಿಳಿದುಬರುತ್ತದೆ. ಅವುಗಳೆಂದರೆ ಬನವಾಸಿ, ಬಳ್ಳಗಾಮೆ, ನಡವಿಯಪ್ಪನಬೀಡು(ಕ್ರಿ.ಶ.1077ರಲ್ಲಿ ಶಹಾಪುರ ತಾಲೂಕಿನ ನಡಿಹಾಳ), ಕ್ರಿ.ಶ.1078ರಲ್ಲಿ ಏತಗಿರಿ(ಯಾದಗಿರಿ) , ಕ್ರಿ.ಶ, 1091 ರ ಅವಧಿಯಲ್ಲಿ ವಿಜಯಪುರಿ, ಕ್ರಿ.ಶ. 1125-1126 ರಲ್ಲಿ ಮನ್ನೆಯಕೇರಿ ಹಾಗೂ ವಿಕ್ರಮಪುರ ಪ್ರದೇಶಗಳಲ್ಲಿ ರಾಜ್ಯಭಾರ ಮಾಡಿದ್ದಾನೆ.

ಇಮ್ಮಡಿ ಜಯಸಿಂಹ (1015-1043) ನ ಕಾಲದ ವಿಕ್ರಮಪುರವು ಹುನಗುಂದ ತಾಲೂಕಿನ ಅರಸಿ ಬೀದಿಯಾದರೆ, ವಿಕ್ರಮಾದಿತ್ಯನ ಕಾಲದ ವಿಕ್ರಮಪುರವೇ ಈಗಿನ ಹುಣಸಗಿ ಹಾಗೂ ಇದನ್ನು ಕೆಲವು ಕಾಲ ಉಪರಾಜಧಾನಿಯನ್ನಾಗಿ ಮಾಡಿಕೊಂಡಿದ್ದನೆಂದು ತಿಳಿಯುತ್ತದೆ.

Related Articles

Leave a Reply

Your email address will not be published. Required fields are marked *

Back to top button