ಪ್ರಮುಖ ಸುದ್ದಿ
ಮತ ಮೋದಿಗೆ ಹಾಕಿ, ಸಮಸ್ಯೆ ಪರಿಹಾರಕ್ಕೆ ನಮ್ಮ ಬಳಿ ಬರ್ತೀರಾ : ಸಿಎಂ HDK ಕಿಡಿ
ರಾಯಚೂರು: ಮತ ಹಾಕಿದ್ದು ಮಾತ್ರ ನರೇಂದ್ರ ಮೋದಿಗೆ , ಸಮಸ್ಯೆ ಮಾತ್ರ ನಾವು ಬಗೆಹರಿಸಬೇಕಾ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಪ್ರತಿಭಟನಾಕಾರರ ಮೇಲೆ ಹರಿಹಾಯ್ದ ಘಟನೆ ರಾಯಚೂರಿನಲ್ಲಿ ನಡೆದಿದೆ.
ಗ್ರಾಮ ವಾಸ್ತವ್ಯಕ್ಕೆಂದು ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಕರೇಗುಡ್ಡ ಗ್ರಾಮಕ್ಕೆ ಸಾರಿಗೆ ಬಸ್ನಲ್ಲಿ ಸಿಎಂ ಪ್ರಯಾಣ ಬೆಳೆಸಿದ್ದ ವೇಳೆ ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ವೈಟಿಪಿಎಸ್ನ ನೂರಾರು ಕಾರ್ಮಿಕರು ಪ್ರತಿಭಟನೆ ನಡೆಸಿ, ಬಸ್ಗೆ ಮುತ್ತಿಗೆ ಹಾಕಿ ರಸ್ತೆಮೇಲೆ ಧರಣಿ ನಡೆಸಿ ರಸ್ತೆ ತಡೆಗೆ ಮುಂದಾದರು.
ಈ ವೇಳೆ ಗರಂ ಆದ ಮುಖ್ಯಮಂತ್ರಿ ಕುಮಾರಸ್ವಾಮಿ, ನಿಮಗೆಲ್ಲಾ ಮರ್ಯಾದೆ ಕೊಡಬೇಕೇ? . ನಿಮ್ಮ ಮೇಲೆ ಲಾಠಿಚಾರ್ಜ್ ಮಾಡಿಸಬೇಕು ಎಂದು ಪ್ರತಿಭಟನಾಕಾರರ ಮೇಲೆ ರೇಗಿದ ಘಟನೆ ನಡೆದಿದೆ.