ಜನಮನಪ್ರಮುಖ ಸುದ್ದಿ
ಅಮಿತ್ ಶಾ ಬೆರಳಲ್ಲಿದೆ ಕರ್ನಾಟಕ ‘ಮಂತ್ರಿ’ ಭಾಗ್ಯ
ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆಗಷ್ಟ್ 5 ರಂದು ಬಿಜೆಪಿ ರಾಷ್ಟ್ರೀಯ ಅದ್ಯಕ್ಷ ಅಮಿತ್ ಶಾ ಭೇಟಿಗೆ ನವದೆಹಲಿಗೆ ತೆರಳಿದ್ದಾರೆ. ಸಚಿವ ಸಂಪುಟದಲ್ಲಿ ಯಾರಿಗೆಲ್ಲಾ ಸ್ಥಾನ ನೀಡಬೇಕು. ಎಷ್ಟು ಸ್ಥಾನ ಖಾಲಿ ಬಿಡಬೇಕು ಎಂಬುದರ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಅಂತೆಯೇ ಅನರ್ಹಗೊಂಡಿರುವ ಶಾಸಕರ ಬಗ್ಗೆಯೂ ಚರ್ಚಿಸಿ ಹೈಕಮಾಂಡ್ ಸೂಚನೆ ಮೇರೆಗೆ ಒಂದು ನಿರ್ಧಾರಕ್ಕೆ ಬರಲಿದ್ದಾರೆ ಎಂದು ಬಿಜೆಪಿ ಮೂಲಗಳಿಂದ ತಿಳಿದು ಬಂದಿದೆ.
ಆಗಷ್ಟ್ 5 ಕ್ಕೆ ಸಿಎಂ ನವದೆಹಲಿಗೆ ತೆರಳಿ ಅಮಿತ್ ಶಾ ಭೇಟಿ ಆಗುತ್ತಿರುವುದರಿಂದ ಆಗಷ್ಟ್ 5ರ ಬಳಿಕವೇ ಶಾಸಕರಿಗೆ ಸಚಿವ ಭಾಗ್ಯದೊರೆಯಲಿದೆ. ಸ್ಪೀಕರ್ ಸ್ಥಾನ ಭೊಪಯ್ಯಗೆ ಅಂದುಕೊಂಡಿದ್ದ ರಾಜ್ಯ ನಾಯಕರಿಗೆ ಶಾಕ್ ನೀಡಿದ್ದ ಹೈಕಮಾಂಡ್ ಕಾಗೇರಿ ಅವರತ್ತ ಬೆರಳು ತೋರಿತ್ತ. ಅಂತೆಯೇ ರಾಜ್ಯ ನಾಯಕರ ಯಾವುದೇ ಲಾಬಿಗೆ ಮಣೆ ಹಾಕುವುದಿಲ್ಲ. ಅಮಿತ್ ಶಾ ಸೂಚಿಸಿದವರಿಗೆ ಮಾತ್ರ ಮಂತ್ರಿಗಿರಿ ದೊರೆಯಲಿದೆ ಎಂಬ ಮಾತು ಬಿಜೆಪಿ ಪಾಳೆಯದಿಂದಲೇ ಕೇಳಿ ಬರುತ್ತಿದೆ.