ಪ್ರಮುಖ ಸುದ್ದಿ
ಕಲಬುರಗಿ : ಘತ್ತರಗಿ, ಗಾಣಗಾಪುರ ಸೇತುವೆಗಳೂ ಮುಳುಗಡೆ!
(ಸಾಂದರ್ಭಿಕ ಚಿತ್ರ)
ಕಲಬುರಗಿ : ಮಹಾರಾಷ್ಟ್ರದಲ್ಲಿ ಮಹಾಮಳೆ ಹಿನ್ನೆಲೆ ಕೃಷ್ಣಾನದಿಯಲ್ಲಿ ಪ್ರವಾಹ ಸೃಷ್ಠಿಯಾಗಿದ್ದು ಯಾದಗಿರಿ , ರಾಯಚೂರು ಜಿಲ್ಲೆಯ ವಿವಿದೆಡೆ ನದಿಪಾತ್ರದ ಜನ ಭಾರೀ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಹಾರಾಷ್ಟ್ರದಿಂದ ಭೀಮಾ ನದಿಗೂ ನೀರು ಬಿಡುಗಡೆ ಮಾಡಲಾಗಿದ್ದು ಕಲಬುರಗಿ ಜಿಲ್ಲೆಯಲ್ಲಿ ಭೀಮಾ ನದಿಯೂ ಉಕ್ಕಿ ಹರಿಯುತ್ತಿದೆ. ಪರಿಣಾಮ ಅಫಜಲಪುರ ತಾಲೂಕಿನ ಗಾಣಗಾಪುರ, ಘತ್ತರಗಿ ಸೇತುವೆಗಳು ಜಲಾವೃತಗೊಂಡಿವೆ. ಭೀಮಾ ನದಿ ತೀರದ ಗ್ರಾಮಗಳಲ್ಲಿ ಪ್ರವಾಹ ಭೀತಿ ಸೃಷ್ಠಿಯಾಗಿದೆ. ಘತ್ತರಗಿ ಹಾಗೂ ಗಾಣಗಾಪುರ ಸೇತುವೆಗೆ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ದೇಗುಲಗಳಿಗೆ ತೆರಳುವ ಜನ ಎಚ್ಚರಿಕೆ ವಹಿಸಬೇಕಿದೆ.