ಪ್ರಮುಖ ಸುದ್ದಿ
ವಾಜಪೇಯಿ ಪುಣ್ಯಸ್ಮರಣೆ : ಅಟಲ್ ಸ್ಮಾರಕಕ್ಕೆ ಮೋದಿ ಪುಷ್ಪ ನಮನ
ನವದೆಹಲಿ : ಮಾಜಿ ಪ್ರಧಾನಿ, ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರ ಪುಣ್ಯತಿಥಿ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ ಇಂದು ‘ಸದೈವ ಅಟಲ್ ಸ್ಮಾರಕ’ಕ್ಕೆ ಭೇಟಿ ನೀಡಿದರು. ಅಟಲ್ ಸಮಾಧಿಗೆ ಪುಷ್ಪ ನಮನದ ಮೂಲಕ ಭಾವಪೂರ್ಣ ಗೌರವ ಸಲ್ಲಿಸಿದರು. ರಾಷ್ಟ್ರಪತಿ ರಾಮನಾಥ್ ಕೋವಿಂದ್, ಗೃಹ ಸಚಿವ ಅಮಿತ್ ಶಾ ಸೇರಿದಂತೆ ಅನೇಕ ಗಣ್ಯರು ಅಟಲ್ ಅವರಿಗೆ ಗೌರವ ನಮನ ಸಲ್ಲಿಸುವ ಮೂಲಕ ವಾಜಪೇಯಿ ಅವರು ದೇಶಕ್ಕೆ ಸಲ್ಲಿಸಿದ ಸೇವೆ ಬಗ್ಗೆ ಗುಣಗಾನ ಮಾಡಿದರು.