ಶ್ರೀರಾಮುಲು ಕುಮಾರಸ್ವಾಮಿಗೆ ಮತಿಭ್ರಮಣೆ ಆಗಿದೆ ಎಂದಿದ್ದೇಕೆ.?
ಬಾಗಲಕೋಟ್ಃ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿಯವರಿಗೆ ಅಧಿಕಾರ ಕಳೆದುಕೊಂಡ ಮೇಲೆ ಮತಿಭ್ರಮಣೆ ಹಿಡಿದಂತೆ ಕಾಣುತ್ತಿದೆ ಎಂದು ಸಚಿವ ಶ್ರೀರಾಮುಲು ಏಕವಚನದಲ್ಲಿ ಹಿಗ್ಗಾಮುಗ್ಗಾ ಜಾಡಿಸಿದ ಘಟನೆ ನಡೆಯಿತು.
ಕಾರಣವಿಷ್ಟೆ ಸಿಎಂ ಯಡಿಯೂರಪ್ಪನವರ ವಯಕ್ತಿಕ ವಿಚಾರವನ್ನು ಕುಮಾರಸ್ವಾಮಿ ಅವರು ಕೆದಕಿದ ಹಿನ್ನೆಲೆಯಲ್ಲಿ ಶ್ರೀರಾಮಲು ಅವರು ಈ ರೀತಿ ಹೇಳಿಕೆಯನ್ನು ನೀಡಿದ್ದಾರೆ.
ನಗರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪನವರ ಕುಟುಂಬವನ್ನು ಟೀಕಿಸುವ ಯಾವ ನೈತಿಕತೆಯನ್ನು ಕುಮಾರಸ್ವಾಮಿ ಹೊಂದಿದ್ದಾರೆ ಎಂದ ಅವರು ಅಧಿಕಾರ ಕಳೆದುಕೊಂಡ ಕುಮಾರಸ್ವಾಮಿ ಅವರಿಗೆ ಮತಿಭ್ರಮಣೆಯಾಗಿದೆ ಎಂದರು.
ನೀವು ಮಾಜಿ ಪ್ರಧಾನಮಂತ್ರಿಯೊಬ್ಬರ ಮಗ ಎಂಬ ಕಾರಣಕ್ಕೆ ನೀವು ಮುಖ್ಯಮಂತ್ರಿಯಾಗಿ ಅಧಿಕಾರ ಪಡೆದಿದ್ದೀರಿ. ಆದರೆ ಯಡಿಯೂರಪ್ಪನವರ ಹೋರಾಟದಿಂದ ಬೆಳೆದು ಬಂದು ಮುಖ್ಯಮಂತ್ರಿಯಾಗಿದ್ದಾರೆ. ನಿಮ್ಮ ತಂದೆಯವರಿಗೆ ಇದ್ದ ಅನುಭವ ಯಡಿಯೂರಪ್ಪನವರಿಗಿದೆ. ಕುಟುಂಬವನ್ನು ಕುಟುಂಬ ಸಮಸ್ಯಗಳನ್ನು ರಾಜಕೀಯಕ್ಕೆ ಎಳೆದು ತರವದು ಶೋಭೆ ತರವಲ್ಲ ಎಂದು ಗುಡುಗಿದರು.
ಅಷ್ಟಕ್ಕೂ ಕುಮಾರಸ್ವಾಮಿ ಹೇಳಿದ್ದೇನು ಗೊತ್ತೆ.?
ಒಂದಡಿಗೆ ಒಂದಡಿ ಇರುವ ನೀರಿನ ಟ್ಯಾಂಕ್ ನಲ್ಲಿ ಕಾಲು ಜಾರಿ ಬಿದ್ದು, ಸಾಯುವಂಥದ್ದು ಉಂಟೇನ್ರಿ.? ಅತಹದ್ದೆ ಜನ ಮೆಚ್ಚಿಕೊಂಡಿದ್ದಾರೆ. ಆ ರೀತಿ ಮಾಡಿದವರಿಗೆ ಕಾಲವಿದು. ಅವರು ಇದೀಗ ದೇಶ, ರಾಜ್ಯ ಕಾಯುವವರು ಎಂದು ಮಾಜಿ ಸಿಎಂ ಕುಮಾರಸ್ವಾಮಿ ಶುಕ್ರವಾರ ರಾಮನಗರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಹೇಳಿದ್ದರು.