ಪ್ರಮುಖ ಸುದ್ದಿ

ಪಾಕ್ ನಲ್ಲಿ ಸಿಖ್ ದೇವಾಲಯದ ಮೇಲೆ ದಾಳಿ – ಸೋನಿಯಾ ಗಾಂಧಿ ಖಂಡನೆ

ನವದೆಹಲಿ: ವಿಶ್ವದ ಪವಿತ್ರ ಸಿಖ್ ದೇವಾಲಯಗಳಲ್ಲಿ ಒಂದಾದ ಪಾಕಿಸ್ತಾನದ ನಂಕಾನಾ ಸಾಹಿಬ್ ಗುರುದ್ವಾರದ ಮೇಲೆ “ಅನಗತ್ಯ ಮತ್ತು ಅಪ್ರಚೋದಿತ” ಜನಸಮೂಹವೊಂದು ನಡೆಸಿದ ದಾಳಿಯನ್ನು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ತೀವ್ರವಾಗಿ ಖಂಡಿಸಿದ್ದಾರೆ.

ಮತ್ತು ಪಾಕಿಸ್ತಾನದಲ್ಲಿ ನಡೆದ ಈ ದಾಳಿಯಿಂದ ಸಿಖ್ ಸಮುದಾಯದ ಯಾತ್ರಾರ್ಥಿಗಳ ಸುರಕ್ಷತೆ ಕುರಿತು ಭಾರತದ ಕೇಂದ್ರ ಸರ್ಕಾರ  ಖಚಿತಪಡಿಸಿಕೊಳ್ಳಬೇಕು ಎಂದು ಕೋರಿದ್ದಾರೆ.

ಸಿಖ್ ಯಾತ್ರಾರ್ಥಿಗಳು ಮತ್ತು ನೌಕರರ ಸುರಕ್ಷತೆಯ ಬಗ್ಗೆ  ಕಳವಳ ವ್ಯಕ್ತಪಡಿಸಿದ ಅವರು, ಯಾತ್ರಾರ್ಥಿಗಳಿಗೆ ಭದ್ರತೆ ಮತ್ತು ಭವಿಷ್ಯದ ಯಾವುದೇ ದಾಳಿಯನ್ನು ತಡೆಗಟ್ಟುವ ಕುರಿತು ಪಾಕಿಸ್ತಾನದ ಅಧಿಕಾರಿಗಳೊಂದಿಗೆ ಕೇಂದ್ರ ಸರ್ಕಾರ ತಕ್ಷಣವೇ ಮಾತುಕತೆ ಮೂಲಕ ಸಮಸ್ಯೆ ನಿವಾರಣಗೆ ಕ್ರಮಕೈಗೊಳ್ಳಬೇಕು.

ಅಲ್ಲದೆ ದಾಳಿ  ನಡೆಸಿದ ಅಪರಾಧಿಗಳ ವಿರುದ್ಧ ಕ್ರಮಕೈಗೊಳ್ಳುವಂತೆ ಭಾರತ ಸರ್ಕಾರ ಸಹ ಒತ್ತಾಯಿಸಬೇಕು ಎಂದು ಮಾಧ್ಯಮಕ್ಕೆ ಮೂಲಕ ಅವರು ಹೇಳಿಕೆ ನೀಡಿದ್ದಾರೆ.

ಶುಕ್ರವಾರ ಪ್ರಚೋದಿತ ಸಮುದಾಯದ ನೂರಾರು ಜನರು ಸಿಖ್ ದೇವಾಲಯ ಸುತ್ತುವರೆದು ಸಿಖ್ ಸಮುದಾಯದ ವಿರುದ್ಧ ಘೋಷಣೆಗಳನ್ನು ಕೂಗಿದ್ದರು. ಅಲ್ಲದೆ ದೇವಾಲಯಕ್ಕೆ ಕಲ್ಲುಗಳನ್ನು ಎಸೆದಿದ್ದು ಅಪ್ರಕ್ಷುಬ್ಧ ವಾತಾವರಣ ನಿರ್ಮಾಣ ಮಾಡಿದ್ದರು. ಈ ಘಟನೆ ಕುರಿತು ಭಾರತವು ತೀವ್ರ ಖಂಡನೆ ವ್ಯಕ್ತಪಡಿಸಿತ್ತು. ಅಲ್ಲದೆ ಅಲ್ಲಿನ ಸಿಖ್ ಸಮುದಾಯದ ಸುರಕ್ಷತೆ ಮತ್ತು ಕಲ್ಯಾಣವನ್ನು ಖಚಿತ ಪಡಿಸಿಕೊಳ್ಳಲು ತಕ್ಷಣ ಕ್ರಮ ತೆಗೆದುಕೊಳ್ಳವಂತೆ ಭಾರತ ಪಾಕಿಸ್ತಾನಕ್ಕೆ ಕರೆ ನೀಡಿತ್ತು.

Related Articles

Leave a Reply

Your email address will not be published. Required fields are marked *

Back to top button