ಪ್ರಮುಖ ಸುದ್ದಿ
ಹೆಣ್ಣಾನೆಗೆ ಸಿಎಂ ಸಿದ್ಧರಾಮಯ್ಯ ಇಟ್ಟ ಹೆಸರೇನು ಗೊತ್ತಾ?
ಆನೆಮರಿಗೆ ಸಿಎಂ ಸಿದ್ಧರಾಮಯ್ಯ ಧರ್ಮಪತ್ನಿ ‘ಪಾರ್ವತಿ’ ಹೆಸರು ನಾಮಕರಣ
ಮೈಸೂರು: ನಗರದ ಮೃಗಾಲಯದಲ್ಲಿ ಮೈಸೂರು ಮೃಗಾಲಯದ 125ನೇ ವರ್ಷಾಚರಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಚಾಲನೆ ನೀಡಿದರು. ಇದೇ ವೇಳೆ ಐರಾವತಿ ಹಾಗೂ ಅಭಿ ಜೋಡಿ ಆನೆಗೆ ಜನಿಸಿದ ಹೆಣ್ಣು ಮರಿ ಆನೆಯ ನಾಮಕರಣವೂ ನಡೆಯಿತು.
ಸಿಎಂ ಸಿದ್ಧರಾಮಯ್ಯ ಅವರು ಮರಿ ಹೆಣ್ಣಾನೆಗೆ ‘ಪಾರ್ವತಿ’ ಎಂದು ನಾಮಕರಣ ಮಾಡಿದರು. ಸಿಎಂ ತುಸು ನಾಚುತ್ತಲೇ ಹೆಸರಿಟ್ಟಿದ್ದನ್ನು ಕಂಡ ಅಧಿಕಾರಿಗಳಿಗೆ ತಕ್ಷಣಕ್ಕೆ ಹೊಳೆದದ್ದು ‘ಪಾರ್ವತಿ’ ಸಿದ್ಧರಾಮಯ್ಯ ಅವರ ಧರ್ಮಪತ್ನಿಯ ಹೆಸರು. ಆಗ ಕಾರ್ಯಕ್ರಮದಲ್ಲಿ ನೆರೆದಿದ್ದವರು ಚಪ್ಪಾಳಿ ತಟ್ಟಿ ಸಂಭ್ರಮಿಸಿದರು.