ಇನ್ನೆರಡು ವರ್ಷ ಶುಭ ಮುಹೂರ್ತ ಇಲ್ಲವಂತೆ- ವಿಡಿಯೋ ಕಾಲ್ ಮೂಲಕ ತಾಳಿ ಭಾಗ್ಯ
ಇನ್ನೆರಡು ವರ್ಷ ಶುಭ ಮುಹೂರ್ತ ವಿಲ್ಲ ಎಂದು ವಿಡಿಯೋ ಕಾಲ್ ಮೂಲಕ ವಧುವಿಗೆ ತಾಳಿ ಕಟ್ಟಿದ ವರ
ವಿವಿಡೆಸ್ಕ್ಃ ಕೊರೊನಾ ವೈರಸ್ ಹಬ್ಬುವದನ್ನು ತಡೆಯಲು ದೇಶದಾದ್ಯಂತ ಲಾಕ್ ಡೌನ್ ಜಾರಿ ಇದ್ದು, ಯಾವುದೇ ಶುಭ ಸಮಾರಂಭಗಳು ಅದ್ದೂರಿಯಾಗಿ ನಡೆಯುವಂತಿಲ್ಲ, ಜನ ಸಂದಣಿ ಸೇರುವಂತಿಲ್ಲ.
ಇಂತಹ ಸ್ಥಿತಿಯಲ್ಲಿ ಮದುವೆ ಆಯೋಜಿಸುವದು ಕಷ್ಟಕರ ಮತ್ತು ನಿಯಮ ಪಾಲನೆಯು ಮಾಡುವದು ಕಷ್ಟವೇ ಇರುವ ಹಿನ್ನೆಲೆ, ಮದುವೆ ಮುಂದೂಡಲು ವಧುವರರು ಕುಟುಂಬಗಳು ನಿರ್ಧರಿಸಿದ್ದರು ಎನ್ನಲಾಗಿದೆ.
ಆದರೆ ಮುಂದಿನ ವರ್ಷದ ಮುಹೂರ್ತ ಗಳು ಇಲ್ಲವೆಂದು ಅರಿತ. ಅವರು, ಇನ್ನೆರಡು ವರ್ಷಗಳು ಯಾವುದೇ ಶುಭ ಮುಹೂರ್ತಗಳು ಇಲ್ಲವೆನ್ನಲಾಗಿದೆ. ಹೀಗಾಗಿ ವಿಡಿಯೋ ಕಾಲ್ ಮೂಲಕವೇ ವಧುವಿಗೆ ತಾಳಿ ಕಟ್ಟಿದ ಘಟನೆ ನಡೆದಿದೆ.
ತಿರುವನಂತಪುರದ ಕೊಟ್ಟಾಯಂನಲ್ಲಿ ವರ ಶ್ರೀಜಿತ್ ನಟೇಷನ್, ವಧು ಅಂಜನಾ ಲಕ್ನೋದಲ್ಲಿರುವ ಕಾರಣ ವಿಡಿಯೋ ಕರೆಯಲ್ಲಿ ವಧು ಪರದೆ ಮೇಲೆ ಕಾಣುತ್ತಿದ್ದಳು ಮೊಬೈಲ್ ಗೆ ತಾಳಿ ಕಟ್ಟುವ ಮೂಲಕ ಹೊಸ ಸಂಪ್ರದಾಯಕ್ಕೆ ಈ ಜೋಡಿ ನಾಂದಿಯಾಡಿದೆ. ಲಾಕ್ ಡೌನ್ ನಿರ್ಬಂಧದ ನಂತರ ಈ ಜೋಡಿ ವಿವಾಹ ಸಂಬಂಧ ದೊಡ್ಡ ಕಾರ್ಯಕ್ರಮ ಆಯೋಜಿಸುವ ಚಿಂತನೆಯಲ್ಲಿದ್ದಾರೆ ಎನ್ನಲಾಗಿದೆ