ಪ್ರಮುಖ ಸುದ್ದಿ

ಸಿಬಿ ಶಾಲೆಯ ಖಂಡಪ್ಪ ಮಾಸ್ತರ ಆಕಸ್ಮಿಕ ನಿಧನ

ಸಿಬಿ ಶಾಲೆಯ ಖಂಡಪ್ಪ ಮಾಸ್ತರ ಆಕಸ್ಮಿಕ ನಿಧನ

ಶಹಾಪುರಃ ನಗರದ ಚರಬಸವೇಶ್ವರ ಪ್ರೌಢ ಶಾಲೆಯಲ್ಲಿ ಹಲವಾರು ವರ್ಷಗಳಿಂದ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದ ಖಂಡಪ್ಪ ಹೊಸ್ಮನಿ (56) ಇಂದು ಮದ್ಯಾಹ್ನ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಒಬ್ಬ ಪುತ್ರ, ಇಬ್ಬರು ಪುತ್ರಿಯರು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಕಳೆದ ವಾರದಿಂದ ಪ್ರೌಢ ಶಾಲಾ ಮಕ್ಕಳಿಗೆ ಆನ್ ಲೈನ್ ಶಿಕ್ಷಣ ಬೋಧನೆಯಲ್ಲಿ ಇವರು ಸಮರ್ಪಕವಾಗಿ ತೊಡಗಿಸಿಕೊಂಡಿದ್ದರು.

ತಾಲೂಕಿನ ಸ್ವಗ್ರಾಮ ರಾಜಾಪುರದಲ್ಲಿ ಜೂನ್ 5 ಅಂದರೆ ನಾಳೆ ಶುಕ್ರವಾರ ಬೆಳಗ್ಗೆ 10 ಗಂಟೆಗೆ ಅಂತ್ಯೆಕ್ರೀಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಸಿಬಿ ಶಿಕ್ಷಣ ಸಂಸ್ಥೆಯ ಅದ್ಯಕ್ಷ ಬಸವರಾಜಪ್ಪಗೌಡ ದರ್ಶನಾಪುರೂ ಹಾಗೂ ಮುಖ್ಯಗುರುಗಳು, ಸಿಬ್ಬಂದಿ ವರ್ಗ, ಅಪಾರ ವಿದ್ಯಾರ್ಥಿಗಳು ಮೃತರ ಆತ್ಮಕ್ಕೆ ಶಾಂತಿ ಕೋರಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button