ಪ್ರಮುಖ ಸುದ್ದಿ

ಮರಳು ಸಾಗಾಣಿಕೆ ಟಿಪ್ಪರ್‍ಗಳ ಮಧ್ಯ ಅಪಘಾತ ಓರ್ವ ಚಾಲಕ ಸಾವು

ಮರಳು ಸಾಗಾಣಿಕೆ ಟಿಪ್ಪರ್‍ಗಳ ಮಧ್ಯ ಅಪಘಾತ ಓರ್ವ ಚಾಲಕ ಸಾವು
ಶಹಾಪುರಃ ಮರಳು ಸಾಗಾಣಿಕೆ ಮಾಡುವ ಟಿಪ್ಪರ್ ಒಂದು ಇನ್ನೊಂದು ಮರಳು ಸಾಗಿಸುತ್ತಿರುವ ಟಿಪ್ಪರ್‍ಗೆ ಹಿಂಬದಿಯಿಂದ ರಬಸದಿ ಡಿಕ್ಕಿ ಹೊಡೆದ  ಪರಿಣಾಮ ಚಾಲಕನೋರ್ವ ಮೃತಪಟ್ಟ ಘಟನೆ ನಗರದ ಹೊಸ ಬಸ್ ನಿಲ್ದಾಣ ಹತ್ತಿರ ಗುರುವಾರ ಬೆಳಗ್ಗೆ ನಡೆದಿದೆ. ಅಪಘಾತದಲ್ಲಿ ಶರಣಪ್ಪ ಮನಗನಾಳ(45) ಮೃತಪಟ್ಟ ಚಾಲಕ.

ಮರಳು ತುಂಬಿಕೊಂಡು ಕಲಬುರ್ಗಿಗೆ ಹೊರಟ್ಟಿದ್ದ ಟಿಪ್ಪರ್‍ಗಳೆರಡು ಒಂದರಿಂದ ಒಂದಂತೆ ಹೊರಟಿದ್ದು, ಮಾರ್ಗ ಮಧ್ಯ ಮುಂದಿನ ಟಿಪ್ಪರ ಕಾರಣಾಂತರಗಳಿಂದ ಬ್ರೇಕ್ ಹಾಕಿದ ಪರಿಣಾಮ ಹಿಂದೆ ಹೊರಟಿದ್ದ ಟಿಪ್ಪರ್ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.

ಎರಡು ಟಿಪ್ಪರಗಳು ಒಂದೇ ಮಾಲೀಕನದ್ದಾಗಿವೆ ಎಂದು ಮೂಲಗಳಿ ತಿಳಿಸಿವೆ. ಘಟನೆ ಕುರಿತು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಟಿಪ್ಪರ್ ಕ್ಲೀನರ್‍ಗಳು ಪ್ರಾಣಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ.

Related Articles

Leave a Reply

Your email address will not be published. Required fields are marked *

Back to top button