ವೀರಮರಣ ಹೊಂದಿದ್ದ ಯೋಧನಿಗೆ ಅಗೌರವ – ಜಿಲ್ಲಾಡಳಿತ ಎನ್ಮಾಡಿತಿದೆ..? ಜನಾಕ್ರೋಶ ಕರ್ತವ್ಯನಿರತ ಯೋಧರಿಂದಲೇ ಸ್ವಚ್ಛತೆ
ಜಿಲ್ಲಾಡಳಿತ ನಾಗರಿಕ ಸಮಾಜ ತಲೆ ತಗ್ಗಿಸುವಂತ ಸುದ್ದಿ

ವೀರಮರಣ ಹೊಂದಿದ್ದ ಯೋಧನಿಗೆ ಅಗೌರವ – ಜಿಲ್ಲಾಡಳಿತ ಎನ್ಮಾಡಿತಿದೆ..? ಜನಾಕ್ರೋಶ
ಮಲ್ಲಿಕಾರ್ಜುನ ಮುದ್ನೂರ
ವಿನಯವಾಣಿ
ಯಾದಗಿರಿ, ಶಹಾಪುರಃ ತಾಲೂಕಿನ ಸಗರ ಗ್ರಾಮದ ಹುತಾತ್ಮ ವೀರ ಯೋಧ ಸುಭಾಶ್ಚಂದ್ರ ಮಡಿವಾಳ ಇವರ ಸಮಾಧಿಯನ್ನು ಅಭಿವೃದ್ಧಿ ಇರಲಿ ಸ್ವಚ್ಛಗೊಳಿಸುವ ಗೋಜಿಗೂ ಹೋಗದಿರುವದು ಶೋಚನೀಯ ಸಂಗತಿಯಾಗಿದೆ ಎಂದು ಪ್ರಸ್ತುತ ಕರ್ತವ್ಯನಿರತ ಯೋಧರು ಸೇರಿದಂತೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ದೇಶಕ್ಕಾಗಿ ಹಲವಾರು ವರ್ಷ ತನ್ನ ಬದುಕನ್ನು ಒತ್ತೆಯಿಟ್ಟು ಶ್ರಮಿಸಿದ್ದ ಮತ್ತು ಉಗ್ರರ ಜತೆ ಗುಂಡಿನ ಕಾಳಗ ನಡೆಸಿ ಹುತಾತ್ಮ ಆಗಿದ್ದ ಶಹಾಪುರ ತಾಲೂಕಿನ ಸಗರ ಗ್ರಾಮದ ವೀರಯೋಧ ಸುಭಾಶ್ಚಂದ್ರ ಮಡಿವಾಳ ಅವರು ಇದೇ 13 ಮೇ 2012 ರಂದು ಹುತಾತ್ಮರಾಗಿದ್ದರು.
ಅಂದು ಅವರ ದೇಹವನ್ನು ಮೆರವಣಿಗೆಯೊಂದಿಗೆ ಸರ್ಕಾರಿ ಗೌರವಾದರದೊಂದಿಗೆ ಗ್ರಾಮದ ಗ್ರಾಪಂ ಎದುರಿರುವ ಸರ್ಕಾರ ಗುರುತಿಸಿದ ಸ್ಥಳದಲ್ಲಿ ಸಂಸ್ಕಾರ ಮಾಡಲಾಗಿತ್ತು.
ಅಲ್ಲದೆ ಕೇಂದ್ರ ಸರ್ಕಾರದ ಆದೇಶದ ಪ್ರಕಾರ ಗ್ರಾಮದ ಸರ್ಕಾರಿ ಶಾಲೆಯೊಂದರ ಆವರಣದಲ್ಲಿ ಅಥವಾ ಮುಂಭಾಗದಲ್ಲಿ ಹುತಾತ್ಮ ಯೋಧರ ಪ್ರತಿಮೆ ಸ್ಥಾಪನೆಗೆ ಆದೇಶ ನೀಡಲಾಗಿತ್ತು. ಅದರಂತೆ ಗ್ರಾಮದ ಶಾಲೆಯೊಂದರ ಮುಂಭಾಗದಲ್ಲಿ ಪ್ರತಿಮೆ ಸ್ಥಾಪಿಸಲು ಕಟ್ಟೆ ನಿರ್ಮಾಣ ಮಾಡಿದ್ದು,ಇದುವರೆಗೂ ಪ್ರತಿಮೆ ಸ್ಥಾಪನೆ ಮಾಡಿರುವದಿಲ್ಲ. ಅಲ್ಲದೆ ಇಂದು ಅವರ ಹುತಾತ್ಮ ದಿನವಾಗಿದ್ದರೂ ಪ್ರತಿಮೆ ಸ್ಥಾಪನೆಗೆ ನಿರ್ಮಿಸಲಾಗಿದ್ದ ಕಟ್ಟೆ ಸ್ವಚ್ಛಗೊಳಿಸವಲ್ಲಿ ಗ್ರಾಪಂ ಅಧಿಕಾರಿಗಳು ಸೇರಿದಂತೆ ಜಿಲ್ಲಾಡಳಿತ ನಿರ್ಲಕ್ಷವಹಿಸಿರುವದು ದುರಂತ.
ಕಟ್ಟೆ ಸುತ್ತಲೂ ಜಾಲಿಮರಗಿಡಗಳು ಬೆಳೆದು ನಿಂತಿದ್ದು ಅಲ್ಲದೆ ಜೂಜುಕೋರರ ಅಡ್ಡೆಯಾಗಿದೆ ಎಂದು ಪ್ರಸ್ತುತ ಬಿಎಸ್ ಎಫ್ ಯೋಧರಾಗಿ ಕರ್ತವ್ಯ ನಿರತರಾಗಿದ್ದ ದುರ್ಗಪ್ಪ ನಾಯಕ ಹಾಗೂ ಇನ್ನೋರ್ವ ಯೋಧ ಅಮರೇಶ ಬೇಸರ ವ್ಯಕ್ತಪಡಿಸಿದ್ದಾರೆ.
ಮತ್ತು ಕೇಂದ್ರ ಭಾರತೀಯ ಸೇನೆ ಪಡೆಯಿಂದ, ಸೇನಾ ಅಧಿಕಾರಿಯೊಬ್ಬರು ಸೇನೆಯ ಮೇಲಧಿಕಾರಿ ಆದೇಶದಂತೆ ಹುತಾತ್ಮ ಯೋಧ ಸುಭಾಶ್ಚಂದ್ರ ಮಡಿವಾಳ ಅವರ ಪ್ರತಿಮೆ ನಿರ್ಮಾಣದ ಬಗ್ಗೆ ಸಮಗ್ರ ಮಾಹಿತಿ ಪಡೆಯಲು ಇಂದು ಸಗರ ಗ್ರಾಮಕ್ಕೆ ಆಗಮಿಸಿದ ಯೋಧ ಮಲ್ಲಿಕಾರ್ಜುನ ಇಂಡಿ ಅವರು ಸಹ ಪ್ರಸ್ತುತ ಹುತಾತ್ಮ ಯೋಧರ ಸಮಾಧಿ ಸ್ಥಳ ಮತ್ತು ಪ್ರತಿಮೆ ಸ್ಥಾಪನಾ ಸ್ಥಳ ವೀಕ್ಷಿಸಿ ದಂಗಾಗಿದ್ದಾರೆಂದು ಯೋಧರಾದ ದುರ್ಗಪ್ಪ ನಾಯಕ ಹಾಗೂ ಅಮರೇಶ ಮಾಧ್ಯಮದ ಮುಂದೆ ಅಧಿಕಾರಿಗಳ ಮತ್ತು ರಾಜಕೀಯ ನಾಯಕರ ಸಂಘ ಸಂಸ್ಥೆಗಳ ನಡೆ ಕುರಿತು ತೀವ್ರ ಬೇಸರ ವ್ಯಕ್ತಪಡಿಸಿ, ಸ್ವತಃ ಯೋಧರೆ ಸ್ವಚ್ಛತೆಗೆ ಮುಂದಾಗಿರುವದು ಜಿಲ್ಲಾಡಳಿತ ಸೇರಿದಂತೆ ನಾಗರಿಕ ಸಮಾಜ ತಲೆತಗ್ಗಿಸುವಂತಾಗಿದೆ.