ಶಹಾಪುರ ಭವಾನಿ ಚಿತ್ರಮಂದಿರದಲ್ಲಿ ಇಂದು “ಶ್ರೀ ಕೃಷ್ಣಾ” ಚಲನ ಚಿತ್ರ ಬಿಡುಗಡೆ
ಸಗರನಾಡಿನ ಯುವಕ ನಟಿಸಿ ನಿರ್ದೇಶಿಸಿರುವ ಚಿತ್ರ "ಶ್ರೀಕೃಷ್ಣ" ನೋಡಿ ಪ್ರೋತ್ಸಾಹಿಸಿ
ಶಹಾಪುರ ಭವಾನಿ ಚಿತ್ರಮಂದಿರದಲ್ಲಿ ಇಂದು “ಶ್ರೀ ಕೃಷ್ಣಾ” ಚಲನ ಚಿತ್ರ ಬಿಡುಗಡೆ
ಸಗರನಾಡಿನ ಯುವಕ ನಟ, ನಿರ್ದೇಶಕ, ನಿರ್ಮಾಪಕನಾಗಿ ಹೊರಹೊಮ್ಮಿದ ಚಿತ್ರ “ಶ್ರೀಕೃಷ್ಣ”
ವಿನಯವಾಣಿ ಸಮಾಚಾರ
ಶಹಾಪುರ: ಸಗರನಾಡಿನ ಸುರಪುರದ ಯುವಕ ಶಂಕರರಾಜ್ ವರ್ಮಾ ನಟನಾಗಿ, ನಿರ್ದೇಶಕನಾಗಿ ಮತ್ತು ನಿರ್ಮಾಪಕನಾಗಿ ಮಿಂಚಿರುವ ಚಲನ ಚಿತ್ರ “ಶ್ರೀಕೃಷ್ಣ” ಶುಕ್ರವಾರ ನಗರದ ಭವಾನಿ ಚಿತ್ರಮಂದಿರದಲ್ಲಿ ತೆರೆಕಾಣಲಿದ್ದು, ಈ ಭಾಗದ ಕಲಾವಿದರು, ಆಸಕ್ತರು ಚಿತ್ರ ಮಂದಿರಕ್ಕೆ ಹೋಗಿ ಚಿತ್ರ ನೋಡಿ ಪ್ರೋತ್ಸಾಹಿಸಬೇಕೆಂದು ಕರವೇ ಉಕ ಅಧ್ಯಕ್ಷ ಹಾಗೂ ಚರಬಸವೇಶ್ವರ ಸಂಸ್ಥಾನಿಕರಾದ ಡಾ.ಶರಣು ಬಿ.ಗದ್ದುಗೆ ಅವರು ಮನವಿ ಮಾಡಿದರು.

ನಗರದ ಚರಬಸವೇಶ್ವರ ದೇವಸ್ಥಾನದಲ್ಲಿ ಶ್ರೀಕೃಷ್ಣ ಚಲನ ಚಿತ್ರ ತಂಡ ಸಿನಿಮಾ ಆರಂಭಕ್ಕೂ ಮುನ್ನಾ ದಿನ ಗುರುವಾರ ಶ್ರೀ ಚರಬಸವೇಶ್ವರ ದೇವಸ್ಥಾನದಲ್ಲಿ ನಡೆಸಿದ ವಿಶೇಷ ಪೂಜೆ ಹಾಗೂ ಚಿತ್ರದ ಪೋಸ್ಟರ್ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
“ಶ್ರೀಕೃಷ್ಣ” ಚಲನಚಿತ್ರ ಶುಕ್ರವಾರ ತೆರೆಗೆ. ಶರಣು ಗದ್ದುಗೆ ಶುಭ ಹಾರೈಕೆ.
ಸುಂದರ ಸಾಮಾಜಿಕ ಚಿತ್ರ ಇದಾಗಿದ್ದು, ಉತ್ತಮ ಸಂದೇಶವಿದೆ. ಈ ಭಾಗದ ಕಲಾವಿದರ ತಂಡ ಅದರಲ್ಲೂ ವಿಶೇವಾಗಿ ಎಲ್ಲರೂ ರೈತಾಪಿ ಮಕ್ಕಳೇ ಸೇರಿಕೊಂಡು ನಿರ್ಮಿಸಿರುವ ಈ ಚಿತ್ರವನ್ನು ಎಲ್ಲರೂ ನೋಡಿ ಪ್ರೋತ್ಸಾಹಿಸಬೇಕೆಂದರು.
ಈ ಸಂದರ್ಭದಲ್ಲಿ ಸುರಪುರದವರೇ ಆದ ಚಿತ್ರದ ನಾಯಕ ನಟ ಹಾಗೂ ನಿರ್ಮಾಪಕರೂ ಆದ, ಶಂಕರರಾಜ್ ವರ್ಮಾ ಅವರು ಮಾತನಾಡಿ, ತಾಳ್ಮೆ ಮನೋಭಾವ ಹೊಂದಿದವರಲ್ಲಿ ಬುದ್ಧಿವಂತಿಕೆ ಹೆಚ್ಚಿರುತ್ತದಂತೆ, ಉದಾಹರಣೆಗೆ ಭಗವಾನ್ ಶ್ರೀ ಕೃಷ್ಣಾ ಅವರಲ್ಲಿ ತಾಳ್ಮೆ ಹಾಗೂ ಬುದ್ಧಿವಂತಿಕೆ ಕಂಡುಕೊಂಡಿದ್ದೇವೆ. ಅದರಂತೆ ಅನಾಥರಾದ ಮೂವರ ಯುವಕರ ಮೇಲೆ ಅತ್ಯಾಚಾರದ ಸುಳ್ಳು ಪ್ರಕರಣ ದಾಖಲಾಗುತ್ತದೆ. ಅದರ ವಿರುದ್ಧ ಬಡ ಮತ್ತು ಅನಾಥರಾದ ಮೂವರು ಯುವಕರು ತಮ್ಮ ಬುದ್ಧಿ ಶಕ್ತಿಯಿಂದ ಆ ಪ್ರಕರಣವನ್ನು ಬೇಧಿಸುವ ಮೂಲಕ ನಿಜವಾದ ಆರೋಪಿಗಳನ್ನು ಹೇಗೆ ಕಂಡು ಹಿಡಿಯುತ್ತಾರೆಂಬುದೇ ಈ ಚಿತ್ರದ ಥ್ರಿಲ್ಲಿಂಗ್ ಇದೆ. ಹೀಗಾಗಿ ಸಗರನಾಡಿನ ಭಾಗದವರಾದ ನಮಗೂ ಚಿತ್ರೋಧ್ಯಮದಲ್ಲಿ ಬೆಳೆಸಿ ಸಹಕರಿಸಿ ಆಶೀರ್ವದಿಸಿ ಎಂದು ಕೋರಿದರು.
ಈ ಮೊದಲು ಬ್ರಹ್ಮರಾಕ್ಷಸ ಚಿತ್ರ ಮಾಡಿದ್ದೇವೆ. ಇದೀಗ ಬೃಹಸ್ಪತಿ ಕ್ರಿಯೇಷನ್ಸ್ ಬ್ಯಾನರ್ ಅಡಿ ಶ್ರೀಕೃಷ್ಣ ಚಿತ್ರ ಬಿಡುಗಡೆ ಮಾಡುತ್ತಿದ್ದೇವೆ ಎಲ್ಲರೂ ಚಿತ್ರ ನೋಡಿ ಬೆನ್ನು ತಟ್ಟಿ ಸಹಕರಿಸಿದ್ದಲ್ಲಿ ಮುಂದೆ ಇನ್ನೂ ಉತ್ತೋಮತ್ತಮ ಚಿತ್ರಗಳನ್ನು ಮಾಡುತ್ತೇವೆ ಎಂದರು.
ಈ ಸಂದರ್ಭದಲ್ಲಿ ಚಿತ್ರ ನಿರ್ಮಾಪಕ ಅಜೇಯಕುಮಾರ ಪಿ.ಎಂ, ಶಿವಲಿಂಗಯ್ಯ ಸಿ.ಎಂ, ಉಲ್ಲಾಸ್ ಕೆ.ಸಿ.ಎಸ್, ಚಾಣಕ್ಯ ಆರ್, ನೆನಪಿರಲಿ ಮೋಹನ್, ಲತಾ ಮಂಜುನಾಥ ಅವರು ಸಹ ನಿರ್ಮಾಪಕರಾಗಿ ಕೈ ಜೋಡಿಸಿದ್ದಾರೆ. ಉತ್ತಮ ಸ್ನೇಹ ಬಳಗದ ಶಕ್ತಿಯೇ ಈ ಚಿತ್ರ ತೆರೆಗೆ ಕಾರಣವಾಗಿದ್ದು, ಪ್ರೇರಕ್ಷಕರ ಪ್ರೀತಿ ಆಶೀರ್ವಾದ ಸಿಕ್ಕಲ್ಲಿ ಸಗರನಾಡಿನ ಕೀರ್ತಿ ರಾಜ್ಯದಾದ್ಯಂತ ಪಸರಿಸಲಿದೆ ಎಂದು ಚಿತ್ರ ತಂಡ ತಿಳಿಸಿದೆ.
ಶ್ರೀಕೃಷ್ಣ ಚಲನ ಚಿತ್ರ ತಂಡ ಉತ್ತಮ ಶ್ರಮ ಜೀವಿಗಳಾಗಿದ್ದು, ನಾಯಕ ನಟರಾಗಿ ಸುರಪುರದವರೇ ಆದ ಶಂಕರರಾಜ್ ವರ್ಮಾ, ನಾಯಕಿ ನಟಿಯಾಗಿ ಚೈತ್ರ ತೋಟದ್ ಬಳ್ಳಾರಿ ಅವರು ಚಿತ್ರ ತಂಡವೇ ನಮ್ಮ ಕಲ್ಯಾಣ ಕರ್ನಾಟಕ ಭಾಗದವರಿದ್ದು, ಈ ಭಾಗದ ಕಲಾವಿದರಿಗೆ ನಾವೆಲ್ಲ ಸಹಕರಿಸೋಣ. ಅವರ ಪ್ರತಿಭೆ ಬೆನ್ನು ತಟ್ಟಿ ಹಾರೈಸೋಣ.
– ಡಾ.ಶರಣು ಬಿ.ಗದ್ದುಗೆ.
– ಚ.ಬ.ಸಂಸ್ಥಾನ ಶಹಾಪುರ.




