94 ರ ಇಳಿವಯಸ್ಸಿನಲ್ಲೂ ಆರೋಗ್ಯಭರಿತ ಅವರ ಜೀವನವೇ ಸ್ಪೂರ್ತಿ
ಡಾ.ಗುರುಲಿಂಗಯ್ಯ ಸ್ವಾಮಿ ಹಿರೇಮಠ @ 94 ಜನುಮ ದಿನಾಚರಣೆ

ಡಾ.ಹಿರೇಮಠರ 94ನೇ ಜನುಮ ದಿನಾಚರಣೆ
94 ರ ಇಳಿವಯಸ್ಸಿನಲ್ಲೂ ಆರೋಗ್ಯಭರಿತ ಅವರ ಜೀವನವೇ ಸ್ಪೂರ್ತಿ
ವಿನಯವಾಣಿ ಸಮಾಚಾರ
ಶಹಾಪುರ: ನಗರದ ಹಿರಿಯ ವೈದ್ಯರಾಗಿದ್ದ ಡಾ.ಗುರುಲಿಂಗಯ್ಯ ಸ್ವಾಮಿ ಹಿರೇಮಠ ಅವರ 94 ನೇ ವರ್ಷದ ಜನುಮ ದಿನವನ್ನು ಇಲ್ಲಿನ ವಾಕಿಂಗ್ ಬಳಗದಿಂದ ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಯಿತು.

ಡಾ.ಹಿರೇಮಠರ ತೋಟದ ಮನೆಯ ಪ್ರದೇಶದಲ್ಲಿ ಮಂಗಳವಾರ 94 ನೇ ಜನುಮ ದಿನವನ್ನು ಆಚರಿಸಿದ ಬಳಗ, ಶಾಲು, ಹೂವಿನ ಹಾರ, ಹೂಗುಚ್ಛ ನೀಡಿ ಶುಭ ಕೋರಿದರು. ಅಲ್ಲದೆ ಪಟಾಕಿ ಸಿಡಿಸಿ ಕೇಕ್ ಕಟ್ ಮಾಡಿ ಅದ್ದೂರಿಯಾಗಿ ಆಚರಿಸಿದರು.

ಇದೇ ಸಂದರ್ಭದಲ್ಲಿ ಆಗಮಿಸಿದ ಎಲ್ಲರಿಗೂ ಉಪಹಾರ ವ್ಯವಸ್ಥೆ ಮಾಡಲಾಗಿತ್ತು.
ಈ ಸಂದರ್ಭದಲ್ಲಿ ವಾಕಿಂಗ್ ಬಳಗದ ರಾಚಯ್ಯ ಸ್ವಾಮಿ ಹಿರೇಮಠ, ಶಿಕ್ಷಕ ಭೀಮನಗೌಡ ಮಾತನಾಡಿ, 94 ನೇ ವಯಸ್ಸಿನಲ್ಲೂ ಅವರು ಸ್ವತಃ ಕಾರು ನಡೆಸಿಕೊಂಡು ಬರುತ್ತಾರೆಂದರೆ ಅವರದು ಅದೆಂತ ಸದೃಢ ಆರೋಗ್ಯ. ನಿತ್ಯ ಅವರು ವಾಕಿಂಗ್, ಯೋಗ ಅದೆಲ್ಲಕಿಂತ ಅವರ ಬದುಕು ನಮಗೆಲ್ಲ ಮಾದರಿ. ಅವರು ನಂಬಿರುವ ಭಗವಂತ ಇನ್ನೂ ಹೆಚ್ಚಿನ ಆಯುಷ್ಯ ಆರೋಗ್ಯ ಭಾಗ್ಯ ಅವರಿಗೆ ಕರುಣಿಸಲಿ ಎಂದು ಹಾರೈಸಿದರು. ವಯಸ್ಸು 94 ಆದರೂ ಇದುವರೆಗೂ ಯಾವುದೇ ರೋಗ ಅವರನ್ನು ಬಾಧಿಸದಿರುವದು ಯುವಕರೆಲ್ಲ ನಾಚುವಂತೆ ಮಾಡಿದೆ. ಅವರ ಆರೋಗ್ಯದ ಗುಟ್ಟು ಇಂದಿನ ಯುವ ಪೀಳಿಗೆ ಅವರ ಮಾರ್ಗದರ್ಶನದಿ ನಡೆಯಬೇಕಿದೆ ಎಂದರು. ಈ ಸಂದರ್ಭದಲ್ಲಿ ನಗರಸಭೆ ಸದಸ್ಯ ಮಲ್ಲಿಕಾರ್ಜುನ ಗಂಧದಮಠ, ಜಗಧೀಶ ಹೊನ್ಕಲ್, ಶರಣಗೌಡ ಕಟ್ಟಿಮನಿ, ರುದ್ರಗೌಡ ದರ್ಶನಾಪುರ, ವಸಂತಕುಮಾರ ದಂಡು, ಅಮರಯ್ಯ ಹಿರೇಮಠ ದಿಗ್ಗಿ, ಬಸವರಾಜ ಚೌದ್ರಿ, ಶಕೀಲ್ ಮುಲ್ಲಾ, ಉಮೇಶ ಬಾಗೇವಾಡಿ, ರಾಜೂ ಪತ್ತಾರ, ಶಿವಕುಮಾರ ಕನ್ಯಾಕೋಳೂರ ಮತ್ತು ಹಿರೇಮಠ ಶಿವು ಮುತ್ಯಾ ಸೇರಿದಂತೆ ಬಳಗದ ನೂರಾರು ಜನರು ಭಾಗವಹಿಸಿದ್ದರು.




