ಪ್ರಮುಖ ಸುದ್ದಿ

ರಾಜ್ಯ ಸರ್ಕಾರ ರಿಯಲ್‌ ಎಸ್ಟೇಟ್‌ ಸರ್ಕಾರ – ರಘು ಕೌಟಿಲ್ಯ ಆಕ್ರೋಶ

ಡಿಕೆಶಿಯನ್ನು ಅಸುರ ಹಿರಣ್ಯಾಕ್ಷಕನಿಗೆ‌ ಹೋಲಿಸಿದ ಎಂಎಲ್ಸಿ ರಘು

ಡಿಕೆಶಿಯನ್ನು ಅಸುರ ಹಿರಣ್ಯಾಕ್ಷಕನಿಗೆ‌ ಹೋಲಿಸಿದ ಎಂಎಲ್ಸಿ ರಘು

ರಾಜ್ಯ ಸರ್ಕಾರ ರಿಯಲ್‌ ಎಸ್ಟೇಟ್‌ ಸರ್ಕಾರ – ರಘು ಕೌಟಿಲ್ಯ ಆಕ್ರೋಶ

ವಿವಿ ಡೆಸ್ಕ್
ಬೆಂಗಳೂರ: ಕಾಂಗ್ರೆಸ್ ಸರ್ಕಾರ ಹಸಿರು ಪರಿಸರವನ್ನು ನಾಶ ಮಾಡಲು ಹೊರಟಿದ್ದು, ಇಡಿ ಜೀವ ಸಂಕುಲಕ್ಕೆ ಕುತ್ತು ತರಲು ಹೊರಟಂತಿದೆ. ಈ ಸರ್ಕಾರ ರಿಯಲ್ ಎಸ್ಟೇಟ್ ಸರ್ಕಾರವಾಗಿದೆ ಎಂದು ಬಿಜೆಪಿ ಎಂಎಲ್ಸಿ ರಘು ಕೌಟಿಲ್ಯ ಅವರು ಆಕ್ರೋಶ ವ್ಯಕ್ತಪಡಿಸಿದರು.

ಮೈಸೂರಿನ ಉದ್ಯಾನವನದಲ್ಲಿ ಬಿಜೆಪಿಯಿಂದ‌ ನಡೆದ ಹಸಿರು ಪರಿಸರ,‌ಕೃಷಿ ಭೂಮಿ ರಕ್ಷಿಸಿ ಹೋರಾಟದಲ್ಲಿ ಭಾಗವಹಿಸಿ ಮಾಧ್ಯಮದೊಂದಿಗೆ ಅವರು ಮಾತನಾಡಿದರು.

ಲೇಔಟ್ ಗಳು‌ ಮತ್ತು ಟೌಮ್ ಶಿಪ್ ಹೆಸರಿನಲ್ಲಿ ಕೃಷಿ ಭೂಮಿಯನ್ನು ಸಂಪೂರ್ಣವಾಗಿ ನುಣ್ಣಗೆ ಮಾಡುತ್ತಿರುವ ರಾಜ್ಯದ ಮುಖ್ಯಮಂತ್ರಿಗಳು, ಸದನದಲ್ಲಿ ತರಾತುರಿಯಲ್ಲಿ ವಿರೋಧಕ್ಕೂ ಅವಕಾಶ ಕೊಡದೆ ಸರ್ಕಾರ ಭೂಕಾಯ್ದೆ ತಿದ್ದುಪಡಿ ಮಾಡಿ ರಾಜ್ಯಪಾಲರ ಅಂಕಿತಕ್ಕೆ ಕಳುಹಿಸಿರುವದು ರಾಜ್ಯದ ಭೂಕಬಳಿಕೆಗೆ ಯತ್ನಿಸುತ್ತಿದೆ ಎಂದು ಆರೋಪಿಸಿದ ಅವರು, ಈ ಕಾಯ್ದೆಗೆ ರಾಜ್ಯಪಾಲರು ಅಂಕಿತ‌ ಹಾಕಬಾರದು. ಸದನದಲ್ಲಿ ಕಾಯ್ದೆ ಚರ್ಚೆಗೆ ಅವಕಾಶ ನೀಡಿರುವದಿಲ್ಲ. ಅದು ರಾಜ್ಯದ ಭೂಒಡಲನ್ನೆ ಮಾರಾಟ ಮಾಡುವ ಹುನ್ನಾರದಿಂದ ಕೂಡಿದೆ. ಕೃಷಿ ಭೂಮಿಯನ್ನು ಒಕ್ಕಲೆಬ್ಬಿಸುವ ಕಾಯ್ದೆ ಅದಾಗಿದೆ ಎಂದ ಅವರು, ಸಿಎಂ ಡಿ.ಕೆ.ಶಿವಕುಮಾರ ಹಿರಣ್ಯಾಕ್ಷನಂತೆ ವರ್ತಿಸುತ್ತಿದ್ದಾರೆಂದು ವಾಗ್ದಾಳಿ ನಡೆಸಿದರು.

ಮುಖ್ಯಮಂತ್ರಿಗಳೇ, ಕರುನಾಡ ಭೂದೇವಿಯ ಒಡಲಿಗೆ ಕೈ ಹಾಕದಿರಿ,
“ನಮ್ಮ ರೈತ ಭೂಮಿಗಳು, ನಮ್ಮ ಉದ್ಯಾನವನಗಳು ಮಾರಾಟಕ್ಕಿಲ್ಲ, ಸರ್ಕಾರದ ಭೂ ಕಾಯ್ದೆ ತಿದ್ದುಪಡಿ, ಯಾವುದೇ ಕಾರಣಕ್ಕೂ ಈ ರಾಜ್ಯದ ಜನ ಒಪ್ಪುವುದಿಲ್ಲ. ನೀವು ತರಾತುರಿಯಲ್ಲಿ ಜಾರಿಗೆ ತರುತ್ತಿರುವ ಭೂಕಾಯ್ದೆ ತಿದ್ದುಪಡಿ ಮಸೂದೆ ರಾಜ್ಯದ ರೈತರಿಗೆ ಮರಣ ಶಾಸನವಾಗಲಿದ್ದು, ಕೂಡಲೇ ಮಸೂದೆ ಜಾರಿ ಕೈಬಿಡಬೇಕೆಂದು ಅದನ್ನು ಹಿಂಪಡೆಯಬೇಕೆಂದು‌ ಆಗ್ರಹಿಸಿದರು. ಮಾಜಿ ಎಂಪಿ ಪ್ರತಾಪ ಸಿಂಹ‌ ಸೇರಿದಂತೆ ಬಿಜೆಪಿಯ ಹಿರಿಯರು,‌ ಕಾರ್ಯಕರ್ತರು‌ ಇದ್ದರು.

Related Articles

Leave a Reply

Your email address will not be published. Required fields are marked *

Back to top button