ಪ್ರಮುಖ ಸುದ್ದಿ
ಚಿತ್ರದುರ್ಗ ಬಳಿ ಭೀಕರ ಅಪಘಾತ ಐವರ ಸಾವು
ಎಪಿಎಂಸಿ ಸದಸ್ಯ ಅನ್ವರ್ ಸೇರಿ ಐವರ ಸಾವು
ಚಿತ್ರದುರ್ಗಃ ಎರ್ಟಿಗಾ ಕಾರವೊಂದರ ಟೈರ್ ಬ್ಲಾಸ್ಟ್ ಆದ ಕಾರಣ ಎದುರಗಡೆ ಬರುತ್ತಿರುವ ಸ್ಕಾರ್ಪಿಯೋ ಕಾರ್ಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಐವರು ಸಾವನ್ನಪ್ಪಿದ ಘಟನೆ ಜಿಲ್ಲೆಯ ಹಿರಿಯೂರ ತಾಲೂಕಿನ ಮೇಟಿಕುರ್ಕೆ ಗ್ರಾಮ ಬಳಿಯ ರಸ್ತೆಯಲ್ಲಿ ನಡೆದಿದೆ.
ಅಪಘಾತದಲ್ಲಿ ಚಿತ್ರದುರ್ಗ ನಗರದ ಎಪಿಎಂಸಿ ಸದಸ್ಯ ಅನ್ವರ್ ಮತ್ತು ಶಿವು ಸೇರಿದಂತೆ ಐವರು ಅಸುನೀಗಿದ್ದಾರೆ. ಇನ್ನುಳಿದವರ ಗುರುತು ಪತ್ತೆಯಾಗಿಲ್ಲ. ಸ್ಥಳಕ್ಕೆ ಪೊಲೀಸ್ರು ದೌಡಾಯಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.