ಪ್ರಮುಖ ಸುದ್ದಿ

ಶಹಾಪುರಃ ಬಸವಾದಿ ಶರಣರ ಹಿಂದೂ ಸಮಾವೇಶ ಮುಂದೂಡಿಕೆ

ಏ.29 ರ ಬದಲು ಮೇ. 18 ಕ್ಕೆ ಮುಂದೂಡಿಕೆ

ಬಸವಾದಿ ಶರಣರ ಹಿಂದೂ ಸಮಾವೇಶ ಮುಂದೂಡಿಕೆ

ಬಸವಾದಿ ಶರಣರ ಹಿಂದೂ ಸಮಾವೇಶ ಏ.29 ರ ಬದಲು ಮೇ.18 ಕ್ಕೆ ಮುಂದೂಡಿಕೆ

ವಿನಯವಾಣಿ
Yadgiri, ಶಹಾಪುರಃ ಇದೇ ಏಪ್ರೀಲ್ 29 ರಂದು ನಿಗದಿಯಾಗಿದ್ದ ಬಸವಾದಿ ಶರಣರ ಬೃಹತ್ ಹಿಂದೂ ಸಮಾವೇಶ ಕಾರಣಾಂತರಗಳಿಂದ ಮೇ. 18 ಕ್ಕೆ ಮುಂದೂಡಲಾಗಿದೆ ಎಂದು ಬಸವಾದಿ ಶರಣರ ಹಿಂದೂ ವೇದಿಕೆಯ ಸುಗೂರೇಶ್ವರ ಶಿವಾಚಾರ್ಯರು ಪ್ರಕಟಣೆ ಮೂಲಕ ತಿಳಿಸಿದ್ದಾರೆ.
ಈಗಾಗಲೇ ಕಾರ್ಯಕ್ರಮಕ್ಕೆ ಎಲ್ಲಾ ರೀತಿಯ ಸಿದ್ಧತೆಗಳು ನಡೆದಿದ್ದವು, ಅಲ್ಲದೆ ಸಮಾವೇಶ ನಡೆಸಲು ಪರವಾನಿಗೆಯೂ ಪಡೆಯಲಾಗಿತ್ತು. ಆದರೆ ಕಾರಣಾಂತರದಿಂದ ಸಮಾವೇಶ ದಿನಾಂಕವನ್ನು ಮೇ. 18 ರಂದು ನಡೆಸಲು ನಿರ್ಧರಿಸಲಾಗಿದ್ದು, ನಾಗರಿಕರು ಸಹಕರಿಸಬೇಕೆಂದು ಕೋರಿದ್ದಾರೆ. ಅಂದಿನ ಕಾರ್ಯಕ್ರಮದ ಯಶಸ್ವಿಗೆ ಎಂದಿನಂತೆ ಸಂಘಟಕರು ಕಾರ್ಯೋನ್ಮುಖರಾಗಿದ್ದು, ಮುಖ್ಯವಾಗಿ ಇನ್ನಷ್ಟು ಸಮಯ ದೊರೆತಿರುವ ಕಾರಣ ಯುವಕರು ಸಂಘಟನಾತ್ಮಕ‌ ಕಾರ್ಯಚಟುವಟಿಕೆಯಲ್ಲಿ ತೊಡಗಿಸಿಕೊಂಡು ಅಂದಿನ ಸಮಾವೇಶ ಸರ್ವಕಾಲಿಕ ಸ್ಮರಣೀಯವಾಗುವಂತೆ ಸರ್ವರೂ ಒಂದಾಗಿ‌ ಯಾವುದೇ ಬೇಧಭಾವವಿಲ್ಲದ ಶರಣರ ಮಾರ್ಗದಡಿ ಸಮಭಾವದಿ ಕಾರ್ಯಕ್ರಮ ರೂಪಿಸಬೇಕಿದೆ. ಆ ನಿಟ್ಟಿನಲ್ಲಿ ಕೆಲಸ ಮಾಡೋಣವೆಂದು ಅವರು ತಿಳಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button