ಜನಮನಪ್ರಮುಖ ಸುದ್ದಿ

ಶಹಾಪುರಃ 2028ರ ಅಖಾಡ ತಯ್ಯಾರಿಗೆ ಮಾಜಿ ಶಿರವಾಳ ಪೂರಕ ಹೇಳಿಕೆ

ಸಾಮಾಜಿಕ ಜಾಲತಾಣದಲ್ಲಿ ವೈರಲ್ಃ ಉಲ್ಲೇಖಿಸಿದ ಪರ ವಿರೋಧ ಸಂದೇಶ

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಗುರು ಪಾಟೀಲ್ ಶಿರವಾಳ ಹೇಳಿಕೆ

2028 ರ ಅಖಾಡಕ್ಕೆ ಸಿದ್ಧತೆಯೇ‌..? ಅವರ ಮಾತಿನ ಮರ್ಮವೇನು..?

ರಾಜಕೀಯ ನಿಂತ ನೀರಲ್ಲಃ ಶಿರವಾಳ

ಮಲ್ಲಿಕಾರ್ಜುನ ಮುದ್ನೂರ.             

ವಿನಯವಾಣಿ
Yadagiri, ಶಹಾಪುರಃ ಕಳೆದ ನಾಲ್ಕಾರು ದಿನದಿಂದ ಸಾಮಾಜಿಕ ಜಾಲತಾಣದಲ್ಲಿ ಮಾಜಿ ಶಾಸಕ ಗುರು ಪಾಟೀಲ್ ಶಿರವಾಳ ಅವರು ಮಾತನಾಡಿರುವ ವಿಡಿಯೋ ತುಣುಕೊಂದು ಅತಿವೇಗದೊಂದಿಗೆ ವೈರಲ್‌ ಆಗ್ತಿದೆ. ಅವರಾಡಿರುವ ಮಾತಿನ ಮರ್ಮವೇನು..? ಎಂಬುದು ಇಡಿ ಶಹಾಪುರ ಕ್ಷೇತ್ರ ವ್ಯಾಪ್ತಿ‌ ಚರ್ಚೆಗೆ ಎಳೆದಿದೆ.

ವಿಡಿಯೋದಲ್ಲಿ ಓರ್ವರು ಅವರನ್ನು ಪ್ರಶ್ನೆ ಮಾಡ್ತಿದ್ದಂತೆ, ಮಾಜಿ ಶಾಸಕರ ಮಾತು ಹೀಗೆ ಆರಂಭವಾಗುತ್ತದೆ..
ರಾಜಕೀಯ ನಿಂತ ನೀರಲ್ಲ ಇದು ಸದಾ ಹರಿಯುವಂತದ್ದು, ಸುಮಾರು 40 ವರ್ಷಗಳ ಕಾಲದಿಂದ ರಾಜಕೀಯ ಕಂಡಿದ್ದೀನಿ. ಜನರು ಬಯಸಿದರೆ ಸೇವೆಗೆ ಇಳಿಯುವಂತದ್ದು, ಜನಸೇವೆ ಮಾಡಬೇಕೆಂದರೆ ಜನರ ಬಯಕೆ ಮುಖ್ಯ, ಅವರು ತಮ್ಮ ಸೇವೆಗೆ ಯಾರಿರಬೇಕೆಂಬುದು ಅವರ ಚಾಯ್ಸ್ ಅದು. ಹೀಗಾಗಿ ಜನರು ಬಯಸಿದರೆ ರಾಜಕೀಯವಾಗಿ ಸೇವೆ ಮಾಡಬಹುದು ಎಂಬ ಮಾತು, ಉರಿದ ಕಡಲೇ ಬೀಜದಂತೆ…ಎಣ್ಣೆಯಲ್ಲಿ ಕರೆದ ಹಪ್ಪಳದಂತೆ ಅಭಿಮಾನಿಗಳ‌ ಭಾವನೆ‌ ಉಬ್ಬುವಂತೆ ಮಾಡಿದೆ ಎಂದರೆ ತಪ್ಪಿಲ್ಲ.

ಮಾಜಿ ಶಾಸಕರು, ಕ್ಷೇತ್ರದ ನಗನೂರ ಗ್ರಾಮದ ಶರಣಬಸವೇಶ್ವರ ಜಾತ್ರಾ ಮಹೋತ್ಸವದಲ್ಲಿ ನಡೆಯುತ್ತಿರುವ ಉಚಿತ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಭಾಗವಹಿಸಿ ಮರಳುತ್ತಿರುವಾಗ ವಿಡಿಯೋ ರೆಕಾರ್ಡ್ ಮಾಡ್ತಾ ಓರ್ವರು ಕೇಳಿದ ಪ್ರಶ್ನೆಗೆ ಅವರ ಮಾತಿನ ಮರ್ಮ ಈ ರೀತಿಯಾಗಿತ್ತು.

ಶರಣಬಸವೇಶ್ವರರ ದೇವಾಲಯದ ಪೀಠಾಧಿಕಾರಿಗಳ ಕರೆ ಮೇರೆಗೆ ಸಮಾರಂಭದಲ್ಲಿ ಭಾಗವಹಿಸಿದ ನಂತರ ನಡೆದ ವಿಡಿಯೋ ಇದಾಗಿದ್ದು, ಬಹಳ ಸ್ಪಷ್ಟವಾಗಿ ಅವರು ವಿಡಿಯೋದಲ್ಲಿ ಹೇಳ್ತಿದ್ದಾರೆ. ರಾಜಕೀಯ ಜನಸೇವಾ ಕ್ಷೇತ್ರವಿದ್ದು,‌ ಇಲ್ಲಿ ಜನರ ಅಭಿಲಾಷೆ ಬಯಕೆ ಅತಿ‌ ಮುಖ್ಯ, ಜನರು ಬಯಸಿದಾಗ ಸೇವೆಗೆ ಇಳಿಯಬೇಕಾಗುತ್ತದೆ ಎಂದು ಮಾಜಿ ಶಾಸಕರ ಸೈಲಂಟ್ ಡೈಲಾಗ್ ಗೆ ಎದುರು ಪಕ್ಷದವರು ತತ್ತರಿಸಿದಂತಾಗಿದೆ ಎಂಬುದು ಸಹ ರಾಜಕೀಯ ವಲಯದಲ್ಲಿ ಗುಸುಗುಸು ಆರಂಭವಾಗಿದೆ. ಆದರೆ ಬಿಜೆಪಿ‌ ಮತ್ತು ಜೆಡಿಎಸ್ ಮಿತ್ರಪಕ್ಷಗಳಾಗಿದ್ದು,‌ ಬಿಜೆಪಿಯ ಅಮೀನರಡ್ಡಿ ಪಾಟೀಲ್ ಯಾಳಗಿ ಅವರು, ಕಳೆದ ಬಾರಿ‌ ಬಿಜೆಪಿ ಟಿಕೆಟ್ ಪಡೆದು ಶಹಾಪುರ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಾಳು ಆಗಿ ಎರಡನೇ ಸ್ಥಾನ ಪಡೆದಿರುವದು ಇತಿಹಾಸ, ಆದರೆ ಮಾಜಿ ಶಾಸಕ ಗುರು ಪಾಟೀಲ್ ಅವರಿಗೆ ಬಿಜೆಪಿ ಟಿಕೆಟ್ ಕಟ್ ಆಗಿದ್ದರಿಂದ ಜೆಡಿಎಸ್ ಟಿಕೆಟ್ ಪಡೆದು ಸ್ಪರ್ಧಿಸಿ‌ ಸೋಲು ಅನುಭವಿಸಿದ್ದರು. ಮೂರನೇಯ ಸ್ಥಾನಕ್ಕೆ ತಲುಪಿದ್ದರು. ಹೀಗಾಗಿ ಎರಡು ಮೂರು ವರ್ಷದಿಂದ ಸೈಲಂಟ್ ಆಗಿದ್ದರೆಂಬ ಆರೋಪವು ಮಾಜಿ ಶಾಸಕರ ಮೇಲಿತ್ತು. ಕಳೆದ ವರ್ಷ ಜೆಡಿಎಸ್ ಸಮಾವೇಶ ಯಶಸ್ವಿಯಾದಾಗಿನಿಂದ ಖುಷಿಯಲ್ಲಿರುವ ಗುರು ಪಾಟೀಲರು, ಗೌಪ್ಯವಾಗಿಯೇ ಕಾರ್ಯೋನ್ಮುಖರಾಗಿದ್ದು, ಆಂತರಿಕವಾಗಿ ಕೆಲಸ ಮಾಡುತ್ತಿದ್ದಾರೆಂಬ ಗುಟ್ಟು ಇದೀಗ ಈ ವೈರಲ್ ವಿಡಿಯೋ ರಟ್ಟು ಮಾಡಿದೆ ಎಂಬುದು ನಾಗರಿಕರ ಅಂಬೋಣ.
ಒಟ್ಟಾರೆ 2028 ರ ವಿಧಾನಸಭೆ ಚುನಾವಣೆ ಮತ್ತೆ ಮೂವರು ಕಲಿಗಳ ಮಧ್ಯ ಬಿಗ್ ಫೈಟ್ ನಡೆಯುವುದು ಗ್ಯಾರಂಟಿಯಾಗಿದೆ ಎನ್ನಬಹುದು. ಆದರೆ ಕ್ಷೇತ್ರ ಮರು ವಿಂಗಡಣೆಯಾಗಲಿ ಅಥವಾ ಕ್ಷೇತ್ರವಾರು ಮೀಸಲಾತಿ ಬದಲಾವಣೆಯಾದಲ್ಲಿ ಯಾರ ನಡೆ ಯಾವ ಕಡೆ ಕ್ಷೇತ್ರದಾವುದು..? ಯಾರು ಬಲ್ಲರು..!!!

Related Articles

Leave a Reply

Your email address will not be published. Required fields are marked *

Back to top button